Home / ಲೇಖನ / ವ್ಯಕ್ತಿ / ಸುಪ್ರಿಯಾ ದಯಾನಂದ್

ಸುಪ್ರಿಯಾ ದಯಾನಂದ್

ಕನ್ನಡ ನಾಡು ಪ್ರತಿಭಾವಂತರ ಬೀಡು. ಅದರಲ್ಲಿಯೂ ಕೊಡಗು ಎಂದಾಕ್ಷಣ ಕಣ್ಣ ಮುಂದೆ ಕಾಶ್ಮೀರ ಬಂದು ಹೋಗುವುದು. ವೀರ ಸೇನಾನಿಗಳ ನಾಡು ಕೆಚ್ಚೆದೆಯ ಬೀಡು.

ಕೊಡಗು ದೇಶ ಸೇವೆಗೂ ಮುಂದೆ ಪ್ರತಿಭಾವಂತರಿಗೆ ಮುಂದೆ ಎನ್ನುವುದಕ್ಕೆ ಸುಪ್ರಿಯಾ ದಯಾನಂದ್ ಅವರು ನಮಗೆಲ್ಲ ಇಂದು ಹಿರಿಸಾಕ್ಷಿಯಾಗಿರುವರು. ಸುಪ್ರಿಯಾ ದಯಾನಂದ್ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಹೆಮ್ಮೆಯ ಸುಪುತ್ರಿ.ತಂದೆ- ಸಿದ್ಧಿ ಪ್ರಸಿದ್ಧಿ ಕಾಫಿ ಬೆಳೆಗಾರರಾದ ದಯಾನಂದ್ ತಾಯಿ- ಅಮ್ಮ ಕಾವೇರಮ್ಮನ ವರಪುತ್ರಿ ಕವಿತಾ.

ಸುಪ್ರಿಯಾ ದಯಾನಂದ್ ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಕೃಷಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.

ದಿನಾಂಕ ೧೨-೦೮-೨೦೧೫ ರಿಂದ ೨೨-೦೮-೨೦೧೫ ರವರೆಗೆ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜರುಗಲಿರುವ ಜಾಗತಿಕ ಮಟ್ಟದ ಆಹಾರ ಪದ್ಧತಿ ಕುರಿತು ಬೃಹತ್ ವಿಚಾರ ಸಂಕೀರ್ಣಕ್ಕೆ ಭವ್ಯ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಇವರು ಹೋಗಿ ಬರಲಿದ್ದಾರೆ.

ಇಲ್ಲಿ ವಿಶ್ವದ ೫೦ ದೇಶದ ಪ್ರತಿನಿಧಿಗಳು ತಮ್ಮ ತಮ್ಮ ದೇಶಗಳಲ್ಲಿನ ಆಹಾರ- ಬೀಜ-ದವಸ-ಧಾನ್ಯ-ತಳಿಗಳ ಉತ್ಪಾದನೆ, ಆಮದು, ರಫ್ತು ಗುಣಮಟ್ಟ, ಮಾರುಕಟ್ಟೆಯ ಬಗ್ಗೆ ವ್ಯಾಪಕ ಚರ್ಚೆ, ಪ್ರಬಂಧ ವಿಚಾರ ವಿನಿಮಯ ನಡೆಯಲಿದೆ.

ದಿನಾಂಕ ೧೬-೦೯-೨೦೧೫ ರಿಂದ ೨೦೧೬ ರ ಫೆಬ್ರವರಿವರೆಗೆ ಬೆಲ್ಲಿಯಂನ ಗೆಂಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಸುವರ್ಣಾವಕಾಶವನ್ನು ಸುಪ್ರಿಯಾ ದಯಾನಂದ್ ಅವರು ಪಡೆದುಕೊಂಡಿರುವರು.

ಹೀಗೆ ಸುಪ್ರಿಯಾ ದಯಾನಂದ್ ತಾನುಟ್ಟಿದ ಊರಿಗೆ, ತಂದೆತಾಯಿಗೆ, ಕಲಿತ ಶಾಲೆ ಕಾಲೇಜಿಗೆ ಕೀರ್ತಿ ತಂದಿರುವರು. ಇವರ ಪ್ರತಿಭೆ, ಉತ್ಪತ್ತಿ, ವಿದ್ವತ್ ಉಳಿದವರಿಗೆ ಸ್ಫೂರ್ತಿದಾಯಕ ಹರ್ಷದಾಯಕವಾಗಿದೆ.

ಕಲಿತರೆ ಇದ್ದರೆ ಇರಬೇಕು ಸುಪ್ರಿಯಾ ದಯಾನಂದ್‌ವರಂತೆ, ಪ್ರತಿಭಾವಂತ ಮಕ್ಕಳು ಅಲ್ಲವೇ?

ನಾವು ನೀವು ಎಲ್ಲರೂ ಸುಪ್ರಿಯಾ ದಯಾನಂದ್ ಅವರಿಗೆ ಆಲ್ ದಿ ಬೆಸ್ಟ್, ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...