ಸುಪ್ರಿಯಾ ದಯಾನಂದ್

ಸುಪ್ರಿಯಾ ದಯಾನಂದ್

ಕನ್ನಡ ನಾಡು ಪ್ರತಿಭಾವಂತರ ಬೀಡು. ಅದರಲ್ಲಿಯೂ ಕೊಡಗು ಎಂದಾಕ್ಷಣ ಕಣ್ಣ ಮುಂದೆ ಕಾಶ್ಮೀರ ಬಂದು ಹೋಗುವುದು. ವೀರ ಸೇನಾನಿಗಳ ನಾಡು ಕೆಚ್ಚೆದೆಯ ಬೀಡು.

ಕೊಡಗು ದೇಶ ಸೇವೆಗೂ ಮುಂದೆ ಪ್ರತಿಭಾವಂತರಿಗೆ ಮುಂದೆ ಎನ್ನುವುದಕ್ಕೆ ಸುಪ್ರಿಯಾ ದಯಾನಂದ್ ಅವರು ನಮಗೆಲ್ಲ ಇಂದು ಹಿರಿಸಾಕ್ಷಿಯಾಗಿರುವರು. ಸುಪ್ರಿಯಾ ದಯಾನಂದ್ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಹೆಮ್ಮೆಯ ಸುಪುತ್ರಿ.ತಂದೆ- ಸಿದ್ಧಿ ಪ್ರಸಿದ್ಧಿ ಕಾಫಿ ಬೆಳೆಗಾರರಾದ ದಯಾನಂದ್ ತಾಯಿ- ಅಮ್ಮ ಕಾವೇರಮ್ಮನ ವರಪುತ್ರಿ ಕವಿತಾ.

ಸುಪ್ರಿಯಾ ದಯಾನಂದ್ ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಕೃಷಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.

ದಿನಾಂಕ ೧೨-೦೮-೨೦೧೫ ರಿಂದ ೨೨-೦೮-೨೦೧೫ ರವರೆಗೆ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜರುಗಲಿರುವ ಜಾಗತಿಕ ಮಟ್ಟದ ಆಹಾರ ಪದ್ಧತಿ ಕುರಿತು ಬೃಹತ್ ವಿಚಾರ ಸಂಕೀರ್ಣಕ್ಕೆ ಭವ್ಯ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಇವರು ಹೋಗಿ ಬರಲಿದ್ದಾರೆ.

ಇಲ್ಲಿ ವಿಶ್ವದ ೫೦ ದೇಶದ ಪ್ರತಿನಿಧಿಗಳು ತಮ್ಮ ತಮ್ಮ ದೇಶಗಳಲ್ಲಿನ ಆಹಾರ- ಬೀಜ-ದವಸ-ಧಾನ್ಯ-ತಳಿಗಳ ಉತ್ಪಾದನೆ, ಆಮದು, ರಫ್ತು ಗುಣಮಟ್ಟ, ಮಾರುಕಟ್ಟೆಯ ಬಗ್ಗೆ ವ್ಯಾಪಕ ಚರ್ಚೆ, ಪ್ರಬಂಧ ವಿಚಾರ ವಿನಿಮಯ ನಡೆಯಲಿದೆ.

ದಿನಾಂಕ ೧೬-೦೯-೨೦೧೫ ರಿಂದ ೨೦೧೬ ರ ಫೆಬ್ರವರಿವರೆಗೆ ಬೆಲ್ಲಿಯಂನ ಗೆಂಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಸುವರ್ಣಾವಕಾಶವನ್ನು ಸುಪ್ರಿಯಾ ದಯಾನಂದ್ ಅವರು ಪಡೆದುಕೊಂಡಿರುವರು.

ಹೀಗೆ ಸುಪ್ರಿಯಾ ದಯಾನಂದ್ ತಾನುಟ್ಟಿದ ಊರಿಗೆ, ತಂದೆತಾಯಿಗೆ, ಕಲಿತ ಶಾಲೆ ಕಾಲೇಜಿಗೆ ಕೀರ್ತಿ ತಂದಿರುವರು. ಇವರ ಪ್ರತಿಭೆ, ಉತ್ಪತ್ತಿ, ವಿದ್ವತ್ ಉಳಿದವರಿಗೆ ಸ್ಫೂರ್ತಿದಾಯಕ ಹರ್ಷದಾಯಕವಾಗಿದೆ.

ಕಲಿತರೆ ಇದ್ದರೆ ಇರಬೇಕು ಸುಪ್ರಿಯಾ ದಯಾನಂದ್‌ವರಂತೆ, ಪ್ರತಿಭಾವಂತ ಮಕ್ಕಳು ಅಲ್ಲವೇ?

ನಾವು ನೀವು ಎಲ್ಲರೂ ಸುಪ್ರಿಯಾ ದಯಾನಂದ್ ಅವರಿಗೆ ಆಲ್ ದಿ ಬೆಸ್ಟ್, ಹೇಳೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀಲಗಂಗಾನ ಹಾಡು
Next post ಆನೆ ಆನೆ ಆನೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys