Home / ಕವನ / ಕವಿತೆ / ನೀಲಗಂಗಾನ ಹಾಡು

ನೀಲಗಂಗಾನ ಹಾಡು

ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ ||
ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ||
ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ||
* * *

ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು||
ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ| ಸೂಯಿ||

ಅಚ್ಚೀ ಭರಣೀ ಬಿಽಡು ಇಚ್ಚೀ ಭರಣೀ ಬಿಽಡು||
ನಡುವಿನ ಭರಣ್ಯಾನ ವಸ್ತಾ ಇಟಿಗ್ವಾ ನಿಲಗಂಗಾ| ಸೂಯಿ||
ಎಡಕೊಮ್ಮ ಹೊಳ್ಳವ್ವಾ ಬಲಕೊಮ್ಮ ಹೊಳ್ಳೆವ್ವಾ ||
ನಿಂತ ಗೆಳದ್ಯಾರಿಗಿ ಹೇಳವ್ವಾ ತಂಗಿಽ| ಸೂಯಿ||
ಬಿಸಲಽ ಬಡಿದರ ಶೆಲ್ಲ್ಯಾ ಮುಸುಕ ಹಾಕಣ್ಣಾ| ಸೂಯಿ||
ನೀರಡಿಕ್ಯಾದರ ಗಿಂಡಿಲಿ ನೀರ ಕುಡಿಸಣ್ಣ| ಸೂಯಿ||
* * *

ತೆವರಿಗ್ಹೊಡಿಯುವ ಕುದುರಿ ತೆಗ್ಗೀಗಿ ಹೊಡೆದಾನ||
ಮೈಯ ಕೈಯಗಳು ಮುಟ್ಟಿಲ್ಹೋಗ್ಯಾನ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳ| ಸೂಯಿ||
* * *

ಆ ಊರ ಹಾದೀಲಿ (ಬತ್ತಲ) ಕುದರಿಽ ಬರತದ||
ಆಣ್ಣಾ ಸಹದೇವಣ್ಣಾ ಒಬನೇ ಬರತಾನ| ಸೂಯಿ||
ಮಡದೀ ನೀಲಗಂಗಾನ ಖಳುವಲಿಲ್ಲೇನ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರು||
ಮೈಯಽ ಕೈಯಗಳು ಮುಟ್ಟಲ್ಹೋಸಗ್ಯಾರೋ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೋ| ಸೂಯಿ||
ಮೊನ್ನಿಽನ ರಾತುರಲಿ ಸಪನಽವು ಬಿಽದ್ದಿತೊ||
ಮುತ್ತಿನ ತೂರಾಯಿಗಿ ಬೆಂಕಿ ಹೆತ್ತಿತ್ತೊ| ಸೂಯಿ||
ಇಽವು ಸುದ್ದಿಗಳವರಕ್ಕಽಗ ಒಯ್ಯೋ| ಸೂಯಿ||
* * *

ತಂಗಿಽ ನೀಲಗಂಗಾ ಏನ ಹೇಳ್ಯಾಳೊ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರ||
ಮೈಯ ಕೈಯಗಳು ಮುಟ್ಟಲ್ಹೋಗ್ಯಾರೊ || ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೊ| ಸೂಯಿ||

ತಾಯ್ತಂದಿ ಸಾಯಾಽಗ ಐಯ್ದಿನದ ಕೂಸಿದ್ದ್ಯ|
ಖಾರಿಕ ತೆಯ್ದ್ಹಾಕಿ ಸಲಹಿದನಲ ತಂಗಿಽ| ಸೂಯಿ||
ತಾಯ್ತಂದಿ ಸಾಯಾಗ ಏಳ್ದಿನದ ಕೂಸಿದ್ದಿ||
ಅಂಜರದ್ಹಣ್ಹಾಕಿ ಸಲವಿದನಲ ತಂಗಿ| ಸೂಯಿ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...