Home / ಕವನ / ಕವಿತೆ / ನೀಲಗಂಗಾನ ಹಾಡು

ನೀಲಗಂಗಾನ ಹಾಡು

ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ ||
ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ||
ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ||
* * *

ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು||
ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ| ಸೂಯಿ||

ಅಚ್ಚೀ ಭರಣೀ ಬಿಽಡು ಇಚ್ಚೀ ಭರಣೀ ಬಿಽಡು||
ನಡುವಿನ ಭರಣ್ಯಾನ ವಸ್ತಾ ಇಟಿಗ್ವಾ ನಿಲಗಂಗಾ| ಸೂಯಿ||
ಎಡಕೊಮ್ಮ ಹೊಳ್ಳವ್ವಾ ಬಲಕೊಮ್ಮ ಹೊಳ್ಳೆವ್ವಾ ||
ನಿಂತ ಗೆಳದ್ಯಾರಿಗಿ ಹೇಳವ್ವಾ ತಂಗಿಽ| ಸೂಯಿ||
ಬಿಸಲಽ ಬಡಿದರ ಶೆಲ್ಲ್ಯಾ ಮುಸುಕ ಹಾಕಣ್ಣಾ| ಸೂಯಿ||
ನೀರಡಿಕ್ಯಾದರ ಗಿಂಡಿಲಿ ನೀರ ಕುಡಿಸಣ್ಣ| ಸೂಯಿ||
* * *

ತೆವರಿಗ್ಹೊಡಿಯುವ ಕುದುರಿ ತೆಗ್ಗೀಗಿ ಹೊಡೆದಾನ||
ಮೈಯ ಕೈಯಗಳು ಮುಟ್ಟಿಲ್ಹೋಗ್ಯಾನ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳ| ಸೂಯಿ||
* * *

ಆ ಊರ ಹಾದೀಲಿ (ಬತ್ತಲ) ಕುದರಿಽ ಬರತದ||
ಆಣ್ಣಾ ಸಹದೇವಣ್ಣಾ ಒಬನೇ ಬರತಾನ| ಸೂಯಿ||
ಮಡದೀ ನೀಲಗಂಗಾನ ಖಳುವಲಿಲ್ಲೇನ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರು||
ಮೈಯಽ ಕೈಯಗಳು ಮುಟ್ಟಲ್ಹೋಸಗ್ಯಾರೋ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೋ| ಸೂಯಿ||
ಮೊನ್ನಿಽನ ರಾತುರಲಿ ಸಪನಽವು ಬಿಽದ್ದಿತೊ||
ಮುತ್ತಿನ ತೂರಾಯಿಗಿ ಬೆಂಕಿ ಹೆತ್ತಿತ್ತೊ| ಸೂಯಿ||
ಇಽವು ಸುದ್ದಿಗಳವರಕ್ಕಽಗ ಒಯ್ಯೋ| ಸೂಯಿ||
* * *

ತಂಗಿಽ ನೀಲಗಂಗಾ ಏನ ಹೇಳ್ಯಾಳೊ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರ||
ಮೈಯ ಕೈಯಗಳು ಮುಟ್ಟಲ್ಹೋಗ್ಯಾರೊ || ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೊ| ಸೂಯಿ||

ತಾಯ್ತಂದಿ ಸಾಯಾಽಗ ಐಯ್ದಿನದ ಕೂಸಿದ್ದ್ಯ|
ಖಾರಿಕ ತೆಯ್ದ್ಹಾಕಿ ಸಲಹಿದನಲ ತಂಗಿಽ| ಸೂಯಿ||
ತಾಯ್ತಂದಿ ಸಾಯಾಗ ಏಳ್ದಿನದ ಕೂಸಿದ್ದಿ||
ಅಂಜರದ್ಹಣ್ಹಾಕಿ ಸಲವಿದನಲ ತಂಗಿ| ಸೂಯಿ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...