ಒಲವೇ ನನ್ನೊಲವೇ-೨

ಒಲವೇ ನನ್ನೊಲವೇ
ಕಣ್ಣಲ್ಲಿ ಕಾಡಿರುವೆ
ನೂರೊಂದು ಕನಸಾಗಿ
ಬಾಳೆಲ್ಲ ತಬ್ಬಿರುವೆ |ಪ|

ಇನ್ನು ಏಕೆ ಇಲ್ಲ ಮಾತು
ಒಲವು ಕಾಣದೆ
ಹೃದಯ ಒಡೆದು ತರಲೆ
ಹೇಳೆ ಕೋಮಲೆ || |ಅ.ಪ|

ಕನಸು ನೀನು ಕವನ ನೀನು
ಅದನೆ ಬರೆವೆ ನೀನು
ನಿನ್ನ ಹೊರತು ಯಾವ ಮಾತು
ಕಲಿತಿಲ್ಲ ನೀ ಕೇಳು ಜಾಣೆ
ಅರಿವು ನೀನು ಚೆಲುವು ನೀನು
ಇನ್ನು ಬೇಕು ಏನು
ನಿನ್ನಂತೆ ನುಡಿ ಸೊಬಗು
ಇನ್ಯಾವ ಸೊಗಸು ನಾ ಕಾಣೆ
ನಿನ್ನೊಲವು ನನ್ನ ಗೆಲುವು
ಮುಂಗಾರು ಗಿರಿನವಿಲು ಸಮ್ಮೇಳವು || ೧ ||

ತುಂಬಿ ಬಂದ ಕಡಲಿನಲ್ಲಿ
ನಿನ್ನ ಪ್ರೀತಿ ಮೊರೆತ
ಅಲೆ ನುಡಿವ ಪ್ರತಿ ಮಾತು
ನಿನ್ನಂತರಾಳದ ತುಡಿತ
ಬೀಸಿ ಬಂದ ಗಾಳಿಯಲ್ಲಿ
ನಿನ್ನ ಪ್ರೀತಿ ಉಸಿರು
ಉಸಿರೊಳಗೆ ಬೆಚ್ಚನೆಯ
ಮೈದುಂಬಿದೆ ನಿನ್ನ ಹೆಸರು
ಎಲ್ಲೆಲ್ಲು ನೀನೇನೆ
ನೀನಿರದ ಜಗವನ್ನು ನಾ ಕಾಣೆನೆ || ೨ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾರಿಣಿ
Next post ನೀಲಗಂಗಾನ ಹಾಡು

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…