Home / ಕವನ / ಕವಿತೆ / ಧಾರಿಣಿ

ಧಾರಿಣಿ

ಧಗೆಯ ಒಡಲು ಈ ಧಾರಿಣಿಯ ಮಡಿಲು
ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು,
ಬೇಯುತ್ತಿರುವ ಒಡಲ ಬೆಂಕಿಯ
ಹಳದಿ ನೀರಾಗಿ ಉಗುಳುತ್ತಾಳೆ.
ನನ್ನ ಮೇಲಿನ ಹಸಿರು ಬರೀ ತೋರಿಕೆ
ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ.

ಆದರೂ ಇವಳಿಗಂಟಿ ತಾವೂ ತಿರುಗುತ್ತಿರುವ
ಈ ಹುಲು ಮಾನವರಿಗೇನೋ ಭ್ರಮೆ
ನಾವು ತಿರುಗುತ್ತಿಲ್ಲ ನಿಂತಿದ್ದೇವೆ.
ಇವಳ ತಲೆ ಮೇಲೇ ಮನೆ ಮಠ ಕಟ್ಟಿದ್ದೇವೆ.
ದೇಗುಲದ ಗೋಪುರ ಗೂಟ ಹೊಡೆದಿದ್ದೇವೆ
ಈ ಇವಳ ಓಲಾಡುವ ಒಡಲಿಗೇ ಲಂಗರು
ಹಡಗ ಬಿಗಿದಿದ್ದೇವೆ.

ಅವಳು ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ
ನಿದ್ರಿಸಿ ಎದ್ದಿದ್ದೇವೆ. ಕೋಳಿ ಕೂಗಿಸಿದ್ದೇವೆ
ಕಾಫಿ ಕಾಯಿಸಿದ್ದೇವೆ. ಆ ಸೂರ್ಯನಿಗೆ ನಮಸ್ಕಾರ
ಹಾಕಿದ್ದೇವೆ ಕಾಲಿಗೆ ಕೈಗೆ ನೀರು ಹೊಯ್ದಿದ್ದೇವೆ.
ಅವನ ನಿನ್ನ ಈ ಮಸೆದಾಟದ ನಡುವೆ
ನಾವು ಮುಗಿಸಬೇಕಿದೆ ನಮ್ಮ ದಿನಚರಿ
ನಿಮ್ಮ ಮಿಲನದ ಏರುಪೇರಿಗೇ ಆ ಸೂರ್‍ಯ
ಬಸವಳಿದು ನಿನ್ನೊಡಲಿನ ಬೆಂಕಿಗೆ ಸಮ ಸಮ
ತನ್ನೊಡಲಿನ ಬೆಂಕಿ ಸುರಿದು ನಿನ್ನಧರಾಮೃತ
ಪಾನದಿಂದ ಕೆಂಪೇರಿ ಕುಡುಕನಂತೆ ಬೀಳುತ್ತಾನೆ.

ಆಗ ನಿನಗಾದ ನಿರಾಸೆಯೇ ಕತ್ತಲಾಗಿ
ಹಬ್ಬಿ ನಿನ್ನ ತಬ್ಬುತ್ತದೆ. ಮತ್ತೆ ಅವನ, ಆ
ಹಳೇ ಗಂಡನ ಪತ್ತೆಯಾಗುವವರೆಗೆ ನಿನಗೆ
ತೂಕಡಿಕೆ ಆ ಅರೆ ಎಚ್ಚರದಲ್ಲಿ ನಿನ್ನ ಮೈ ಮೇಲೆ
ಎಲ್ಲಾ ಅವ್ಯವಹಾರ, ಒಂದೆರಡೆ ಜಾವ, ಮತ್ತೆ
ಇಬ್ಬನಿಯಲಿ ಮೈ ತೊಳೆದು ಹೂ ಸುಗಂಧ ಪೂಸಿ
ಕಣ್ಣರಳಿಸಿ ಅವನು ಬಂದನೆಂದರೆ ನಿನಗೆ
ಸಡಗರ ಹೊಸ ಯೌವನ, ಯುಗಯುಗ
ಗಳಿಂದ ನಡೆದ ಮೈಥುನ
ಬೇಸರವೇ ಬಾರದ ಮುಪ್ಪೇ ಇರದ
ನಿಮ್ಮಿಬ್ಬರ ಈ ಮಿಲನ.
*****
-ಗಾಂಧಿಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...