Home / ಕವನ / ಕವಿತೆ / ಧಾರಿಣಿ

ಧಾರಿಣಿ

ಧಗೆಯ ಒಡಲು ಈ ಧಾರಿಣಿಯ ಮಡಿಲು
ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು,
ಬೇಯುತ್ತಿರುವ ಒಡಲ ಬೆಂಕಿಯ
ಹಳದಿ ನೀರಾಗಿ ಉಗುಳುತ್ತಾಳೆ.
ನನ್ನ ಮೇಲಿನ ಹಸಿರು ಬರೀ ತೋರಿಕೆ
ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ.

ಆದರೂ ಇವಳಿಗಂಟಿ ತಾವೂ ತಿರುಗುತ್ತಿರುವ
ಈ ಹುಲು ಮಾನವರಿಗೇನೋ ಭ್ರಮೆ
ನಾವು ತಿರುಗುತ್ತಿಲ್ಲ ನಿಂತಿದ್ದೇವೆ.
ಇವಳ ತಲೆ ಮೇಲೇ ಮನೆ ಮಠ ಕಟ್ಟಿದ್ದೇವೆ.
ದೇಗುಲದ ಗೋಪುರ ಗೂಟ ಹೊಡೆದಿದ್ದೇವೆ
ಈ ಇವಳ ಓಲಾಡುವ ಒಡಲಿಗೇ ಲಂಗರು
ಹಡಗ ಬಿಗಿದಿದ್ದೇವೆ.

ಅವಳು ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ
ನಿದ್ರಿಸಿ ಎದ್ದಿದ್ದೇವೆ. ಕೋಳಿ ಕೂಗಿಸಿದ್ದೇವೆ
ಕಾಫಿ ಕಾಯಿಸಿದ್ದೇವೆ. ಆ ಸೂರ್ಯನಿಗೆ ನಮಸ್ಕಾರ
ಹಾಕಿದ್ದೇವೆ ಕಾಲಿಗೆ ಕೈಗೆ ನೀರು ಹೊಯ್ದಿದ್ದೇವೆ.
ಅವನ ನಿನ್ನ ಈ ಮಸೆದಾಟದ ನಡುವೆ
ನಾವು ಮುಗಿಸಬೇಕಿದೆ ನಮ್ಮ ದಿನಚರಿ
ನಿಮ್ಮ ಮಿಲನದ ಏರುಪೇರಿಗೇ ಆ ಸೂರ್‍ಯ
ಬಸವಳಿದು ನಿನ್ನೊಡಲಿನ ಬೆಂಕಿಗೆ ಸಮ ಸಮ
ತನ್ನೊಡಲಿನ ಬೆಂಕಿ ಸುರಿದು ನಿನ್ನಧರಾಮೃತ
ಪಾನದಿಂದ ಕೆಂಪೇರಿ ಕುಡುಕನಂತೆ ಬೀಳುತ್ತಾನೆ.

ಆಗ ನಿನಗಾದ ನಿರಾಸೆಯೇ ಕತ್ತಲಾಗಿ
ಹಬ್ಬಿ ನಿನ್ನ ತಬ್ಬುತ್ತದೆ. ಮತ್ತೆ ಅವನ, ಆ
ಹಳೇ ಗಂಡನ ಪತ್ತೆಯಾಗುವವರೆಗೆ ನಿನಗೆ
ತೂಕಡಿಕೆ ಆ ಅರೆ ಎಚ್ಚರದಲ್ಲಿ ನಿನ್ನ ಮೈ ಮೇಲೆ
ಎಲ್ಲಾ ಅವ್ಯವಹಾರ, ಒಂದೆರಡೆ ಜಾವ, ಮತ್ತೆ
ಇಬ್ಬನಿಯಲಿ ಮೈ ತೊಳೆದು ಹೂ ಸುಗಂಧ ಪೂಸಿ
ಕಣ್ಣರಳಿಸಿ ಅವನು ಬಂದನೆಂದರೆ ನಿನಗೆ
ಸಡಗರ ಹೊಸ ಯೌವನ, ಯುಗಯುಗ
ಗಳಿಂದ ನಡೆದ ಮೈಥುನ
ಬೇಸರವೇ ಬಾರದ ಮುಪ್ಪೇ ಇರದ
ನಿಮ್ಮಿಬ್ಬರ ಈ ಮಿಲನ.
*****
-ಗಾಂಧಿಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...