ಧಾರಿಣಿ

ಧಗೆಯ ಒಡಲು ಈ ಧಾರಿಣಿಯ ಮಡಿಲು
ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು,
ಬೇಯುತ್ತಿರುವ ಒಡಲ ಬೆಂಕಿಯ
ಹಳದಿ ನೀರಾಗಿ ಉಗುಳುತ್ತಾಳೆ.
ನನ್ನ ಮೇಲಿನ ಹಸಿರು ಬರೀ ತೋರಿಕೆ
ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ.

ಆದರೂ ಇವಳಿಗಂಟಿ ತಾವೂ ತಿರುಗುತ್ತಿರುವ
ಈ ಹುಲು ಮಾನವರಿಗೇನೋ ಭ್ರಮೆ
ನಾವು ತಿರುಗುತ್ತಿಲ್ಲ ನಿಂತಿದ್ದೇವೆ.
ಇವಳ ತಲೆ ಮೇಲೇ ಮನೆ ಮಠ ಕಟ್ಟಿದ್ದೇವೆ.
ದೇಗುಲದ ಗೋಪುರ ಗೂಟ ಹೊಡೆದಿದ್ದೇವೆ
ಈ ಇವಳ ಓಲಾಡುವ ಒಡಲಿಗೇ ಲಂಗರು
ಹಡಗ ಬಿಗಿದಿದ್ದೇವೆ.

ಅವಳು ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ
ನಿದ್ರಿಸಿ ಎದ್ದಿದ್ದೇವೆ. ಕೋಳಿ ಕೂಗಿಸಿದ್ದೇವೆ
ಕಾಫಿ ಕಾಯಿಸಿದ್ದೇವೆ. ಆ ಸೂರ್ಯನಿಗೆ ನಮಸ್ಕಾರ
ಹಾಕಿದ್ದೇವೆ ಕಾಲಿಗೆ ಕೈಗೆ ನೀರು ಹೊಯ್ದಿದ್ದೇವೆ.
ಅವನ ನಿನ್ನ ಈ ಮಸೆದಾಟದ ನಡುವೆ
ನಾವು ಮುಗಿಸಬೇಕಿದೆ ನಮ್ಮ ದಿನಚರಿ
ನಿಮ್ಮ ಮಿಲನದ ಏರುಪೇರಿಗೇ ಆ ಸೂರ್‍ಯ
ಬಸವಳಿದು ನಿನ್ನೊಡಲಿನ ಬೆಂಕಿಗೆ ಸಮ ಸಮ
ತನ್ನೊಡಲಿನ ಬೆಂಕಿ ಸುರಿದು ನಿನ್ನಧರಾಮೃತ
ಪಾನದಿಂದ ಕೆಂಪೇರಿ ಕುಡುಕನಂತೆ ಬೀಳುತ್ತಾನೆ.

ಆಗ ನಿನಗಾದ ನಿರಾಸೆಯೇ ಕತ್ತಲಾಗಿ
ಹಬ್ಬಿ ನಿನ್ನ ತಬ್ಬುತ್ತದೆ. ಮತ್ತೆ ಅವನ, ಆ
ಹಳೇ ಗಂಡನ ಪತ್ತೆಯಾಗುವವರೆಗೆ ನಿನಗೆ
ತೂಕಡಿಕೆ ಆ ಅರೆ ಎಚ್ಚರದಲ್ಲಿ ನಿನ್ನ ಮೈ ಮೇಲೆ
ಎಲ್ಲಾ ಅವ್ಯವಹಾರ, ಒಂದೆರಡೆ ಜಾವ, ಮತ್ತೆ
ಇಬ್ಬನಿಯಲಿ ಮೈ ತೊಳೆದು ಹೂ ಸುಗಂಧ ಪೂಸಿ
ಕಣ್ಣರಳಿಸಿ ಅವನು ಬಂದನೆಂದರೆ ನಿನಗೆ
ಸಡಗರ ಹೊಸ ಯೌವನ, ಯುಗಯುಗ
ಗಳಿಂದ ನಡೆದ ಮೈಥುನ
ಬೇಸರವೇ ಬಾರದ ಮುಪ್ಪೇ ಇರದ
ನಿಮ್ಮಿಬ್ಬರ ಈ ಮಿಲನ.
*****
-ಗಾಂಧಿಬಜಾರ್ ಪತ್ರಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರಾಹ್ಮಣ
Next post ಒಲವೇ ನನ್ನೊಲವೇ-೨

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…