ಆ ದಿನ ಕಂಡೇ ಕಾಣುತ್ತೇವೆ

ಎಂತಹ ನಿರಂಕುಶ ಪ್ರಭುತ್ವ
ಮಹಾರಥರ ದರ್ಪದ ಸಿಂಹಾಸನ
ರತ್ನಖಚಿತ ಪ್ರಭುಗಳ ಕಿರೀಟಕ್ಕೆ
ಬರಸಿಡಿಲು ಅಪ್ಪಳಿಸಬಹುದು
ಆ ದಿನ ಕಂಡೇ ಕಾಣುತ್ತೇವೆ.

ಮಣಿ, ಮುಕುಟ ಕಿರೀಟಗಳು
ಮಣ್ಣು ಪಾಲಾದವು, ಪದ್ಮನಾಭನ
ಗುಪ್ತಧನ, ಕನಕ ಬಯಲಾದವು
ಗದ್ದುಗೆಯ ನಂಟು ಕಡೆತನಕವಲ್ಲ
ಸಿಂಹಾಸನಗಳು ನುಚ್ಚು ನೂರಾಗುವ
ಆ ದಿನ ಕಂಡೇ ಕಾಣುತ್ತೇವೆ.

ನಿರ್ಲಜ್ಜ ಸುಳ್ಳು ಭರವಸೆಗಳು
ವರಸೆ ಮಾತುಗಳ ಪರಮಾವಧಿ
ಗದ್ದುಗೆಗಳ ಬೇರು ಅದುರುತ್ತಿವೆ.
ಭೂಮಿ ಮೇಲಿನ ಅರಮನೆಗಳು
ಬೆಂಕಿ ಪೊಟ್ಟಣಗಳಂತೆ ಧಗಧಗನೆ
ಭೀಕರ ಉರಿಯುವ ದೃಶ್ಯದ
ಆ ದಿನ ಕಂಡೇ ಕಾಣುತ್ತೇವೆ.

ಓತಿಕಾಟದಂತೆ ಬಣ್ಣ ಬದಲಿಸುವ
ಇವರ ಬಣ್ಣ ಬಯಲಾಗುತ್ತದೆ.
ಇಲ್ಲಿಯೇ ನಮ್ಮ ನಿಮ್ಮೆಲ್ಲರ ಮುಂದೆಯೇ
ನಿರಾಕರಿಸಲ್ಪಟ್ಟ ಅಪರಾಧಗಳು
ಸಾಬೀತಾಗುತ್ತವೆ ಎಲ್ಲರ ಮುಂದೆಯೇ
ಬೆತ್ತಲಾಗುತ್ತಾರೆ ಅವರು
ಆ ದಿನ ಕಂಡೇ ಕಾಣುತ್ತೇವೆ.

ಪ್ರಭುಗಳ ನೆತ್ತಿಯ ಮೇಲೆ
ಅಪಾಯದ ಕತ್ತಿ ಬೀಸುತ್ತಿದೆ
ಸುಳ್ಳು ಭರವಸೆಗಳು ಛಿದ್ರವಾಗಿ
ಪುಡಿಪುಡಿಯಾದ ಒಪ್ಪಂದಗಳು
ಗಾಳಿಯಲಿ ತರಗೆಲೆಯಾಗಿ ಹಾರುವ
ಆ ದಿನ ಕಂಡೇ ಕಾಣುತ್ತೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣುವ ಕಣ್ಣಿಗೆ ಎಲ್ಲಾ ಬೆರಗು
Next post ಚಂದ್ರ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…