ಆ ದಿನ ಕಂಡೇ ಕಾಣುತ್ತೇವೆ

ಎಂತಹ ನಿರಂಕುಶ ಪ್ರಭುತ್ವ
ಮಹಾರಥರ ದರ್ಪದ ಸಿಂಹಾಸನ
ರತ್ನಖಚಿತ ಪ್ರಭುಗಳ ಕಿರೀಟಕ್ಕೆ
ಬರಸಿಡಿಲು ಅಪ್ಪಳಿಸಬಹುದು
ಆ ದಿನ ಕಂಡೇ ಕಾಣುತ್ತೇವೆ.

ಮಣಿ, ಮುಕುಟ ಕಿರೀಟಗಳು
ಮಣ್ಣು ಪಾಲಾದವು, ಪದ್ಮನಾಭನ
ಗುಪ್ತಧನ, ಕನಕ ಬಯಲಾದವು
ಗದ್ದುಗೆಯ ನಂಟು ಕಡೆತನಕವಲ್ಲ
ಸಿಂಹಾಸನಗಳು ನುಚ್ಚು ನೂರಾಗುವ
ಆ ದಿನ ಕಂಡೇ ಕಾಣುತ್ತೇವೆ.

ನಿರ್ಲಜ್ಜ ಸುಳ್ಳು ಭರವಸೆಗಳು
ವರಸೆ ಮಾತುಗಳ ಪರಮಾವಧಿ
ಗದ್ದುಗೆಗಳ ಬೇರು ಅದುರುತ್ತಿವೆ.
ಭೂಮಿ ಮೇಲಿನ ಅರಮನೆಗಳು
ಬೆಂಕಿ ಪೊಟ್ಟಣಗಳಂತೆ ಧಗಧಗನೆ
ಭೀಕರ ಉರಿಯುವ ದೃಶ್ಯದ
ಆ ದಿನ ಕಂಡೇ ಕಾಣುತ್ತೇವೆ.

ಓತಿಕಾಟದಂತೆ ಬಣ್ಣ ಬದಲಿಸುವ
ಇವರ ಬಣ್ಣ ಬಯಲಾಗುತ್ತದೆ.
ಇಲ್ಲಿಯೇ ನಮ್ಮ ನಿಮ್ಮೆಲ್ಲರ ಮುಂದೆಯೇ
ನಿರಾಕರಿಸಲ್ಪಟ್ಟ ಅಪರಾಧಗಳು
ಸಾಬೀತಾಗುತ್ತವೆ ಎಲ್ಲರ ಮುಂದೆಯೇ
ಬೆತ್ತಲಾಗುತ್ತಾರೆ ಅವರು
ಆ ದಿನ ಕಂಡೇ ಕಾಣುತ್ತೇವೆ.

ಪ್ರಭುಗಳ ನೆತ್ತಿಯ ಮೇಲೆ
ಅಪಾಯದ ಕತ್ತಿ ಬೀಸುತ್ತಿದೆ
ಸುಳ್ಳು ಭರವಸೆಗಳು ಛಿದ್ರವಾಗಿ
ಪುಡಿಪುಡಿಯಾದ ಒಪ್ಪಂದಗಳು
ಗಾಳಿಯಲಿ ತರಗೆಲೆಯಾಗಿ ಹಾರುವ
ಆ ದಿನ ಕಂಡೇ ಕಾಣುತ್ತೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣುವ ಕಣ್ಣಿಗೆ ಎಲ್ಲಾ ಬೆರಗು
Next post ಚಂದ್ರ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys