Home / ಕವನ / ಕವಿತೆ / ಆ ದಿನ ಕಂಡೇ ಕಾಣುತ್ತೇವೆ

ಆ ದಿನ ಕಂಡೇ ಕಾಣುತ್ತೇವೆ

ಎಂತಹ ನಿರಂಕುಶ ಪ್ರಭುತ್ವ
ಮಹಾರಥರ ದರ್ಪದ ಸಿಂಹಾಸನ
ರತ್ನಖಚಿತ ಪ್ರಭುಗಳ ಕಿರೀಟಕ್ಕೆ
ಬರಸಿಡಿಲು ಅಪ್ಪಳಿಸಬಹುದು
ಆ ದಿನ ಕಂಡೇ ಕಾಣುತ್ತೇವೆ.

ಮಣಿ, ಮುಕುಟ ಕಿರೀಟಗಳು
ಮಣ್ಣು ಪಾಲಾದವು, ಪದ್ಮನಾಭನ
ಗುಪ್ತಧನ, ಕನಕ ಬಯಲಾದವು
ಗದ್ದುಗೆಯ ನಂಟು ಕಡೆತನಕವಲ್ಲ
ಸಿಂಹಾಸನಗಳು ನುಚ್ಚು ನೂರಾಗುವ
ಆ ದಿನ ಕಂಡೇ ಕಾಣುತ್ತೇವೆ.

ನಿರ್ಲಜ್ಜ ಸುಳ್ಳು ಭರವಸೆಗಳು
ವರಸೆ ಮಾತುಗಳ ಪರಮಾವಧಿ
ಗದ್ದುಗೆಗಳ ಬೇರು ಅದುರುತ್ತಿವೆ.
ಭೂಮಿ ಮೇಲಿನ ಅರಮನೆಗಳು
ಬೆಂಕಿ ಪೊಟ್ಟಣಗಳಂತೆ ಧಗಧಗನೆ
ಭೀಕರ ಉರಿಯುವ ದೃಶ್ಯದ
ಆ ದಿನ ಕಂಡೇ ಕಾಣುತ್ತೇವೆ.

ಓತಿಕಾಟದಂತೆ ಬಣ್ಣ ಬದಲಿಸುವ
ಇವರ ಬಣ್ಣ ಬಯಲಾಗುತ್ತದೆ.
ಇಲ್ಲಿಯೇ ನಮ್ಮ ನಿಮ್ಮೆಲ್ಲರ ಮುಂದೆಯೇ
ನಿರಾಕರಿಸಲ್ಪಟ್ಟ ಅಪರಾಧಗಳು
ಸಾಬೀತಾಗುತ್ತವೆ ಎಲ್ಲರ ಮುಂದೆಯೇ
ಬೆತ್ತಲಾಗುತ್ತಾರೆ ಅವರು
ಆ ದಿನ ಕಂಡೇ ಕಾಣುತ್ತೇವೆ.

ಪ್ರಭುಗಳ ನೆತ್ತಿಯ ಮೇಲೆ
ಅಪಾಯದ ಕತ್ತಿ ಬೀಸುತ್ತಿದೆ
ಸುಳ್ಳು ಭರವಸೆಗಳು ಛಿದ್ರವಾಗಿ
ಪುಡಿಪುಡಿಯಾದ ಒಪ್ಪಂದಗಳು
ಗಾಳಿಯಲಿ ತರಗೆಲೆಯಾಗಿ ಹಾರುವ
ಆ ದಿನ ಕಂಡೇ ಕಾಣುತ್ತೇವೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...