Home / ಕವನ / ಕವಿತೆ / ಆ ದಿನ ಕಂಡೇ ಕಾಣುತ್ತೇವೆ

ಆ ದಿನ ಕಂಡೇ ಕಾಣುತ್ತೇವೆ

ಎಂತಹ ನಿರಂಕುಶ ಪ್ರಭುತ್ವ
ಮಹಾರಥರ ದರ್ಪದ ಸಿಂಹಾಸನ
ರತ್ನಖಚಿತ ಪ್ರಭುಗಳ ಕಿರೀಟಕ್ಕೆ
ಬರಸಿಡಿಲು ಅಪ್ಪಳಿಸಬಹುದು
ಆ ದಿನ ಕಂಡೇ ಕಾಣುತ್ತೇವೆ.

ಮಣಿ, ಮುಕುಟ ಕಿರೀಟಗಳು
ಮಣ್ಣು ಪಾಲಾದವು, ಪದ್ಮನಾಭನ
ಗುಪ್ತಧನ, ಕನಕ ಬಯಲಾದವು
ಗದ್ದುಗೆಯ ನಂಟು ಕಡೆತನಕವಲ್ಲ
ಸಿಂಹಾಸನಗಳು ನುಚ್ಚು ನೂರಾಗುವ
ಆ ದಿನ ಕಂಡೇ ಕಾಣುತ್ತೇವೆ.

ನಿರ್ಲಜ್ಜ ಸುಳ್ಳು ಭರವಸೆಗಳು
ವರಸೆ ಮಾತುಗಳ ಪರಮಾವಧಿ
ಗದ್ದುಗೆಗಳ ಬೇರು ಅದುರುತ್ತಿವೆ.
ಭೂಮಿ ಮೇಲಿನ ಅರಮನೆಗಳು
ಬೆಂಕಿ ಪೊಟ್ಟಣಗಳಂತೆ ಧಗಧಗನೆ
ಭೀಕರ ಉರಿಯುವ ದೃಶ್ಯದ
ಆ ದಿನ ಕಂಡೇ ಕಾಣುತ್ತೇವೆ.

ಓತಿಕಾಟದಂತೆ ಬಣ್ಣ ಬದಲಿಸುವ
ಇವರ ಬಣ್ಣ ಬಯಲಾಗುತ್ತದೆ.
ಇಲ್ಲಿಯೇ ನಮ್ಮ ನಿಮ್ಮೆಲ್ಲರ ಮುಂದೆಯೇ
ನಿರಾಕರಿಸಲ್ಪಟ್ಟ ಅಪರಾಧಗಳು
ಸಾಬೀತಾಗುತ್ತವೆ ಎಲ್ಲರ ಮುಂದೆಯೇ
ಬೆತ್ತಲಾಗುತ್ತಾರೆ ಅವರು
ಆ ದಿನ ಕಂಡೇ ಕಾಣುತ್ತೇವೆ.

ಪ್ರಭುಗಳ ನೆತ್ತಿಯ ಮೇಲೆ
ಅಪಾಯದ ಕತ್ತಿ ಬೀಸುತ್ತಿದೆ
ಸುಳ್ಳು ಭರವಸೆಗಳು ಛಿದ್ರವಾಗಿ
ಪುಡಿಪುಡಿಯಾದ ಒಪ್ಪಂದಗಳು
ಗಾಳಿಯಲಿ ತರಗೆಲೆಯಾಗಿ ಹಾರುವ
ಆ ದಿನ ಕಂಡೇ ಕಾಣುತ್ತೇವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...