Home / ಕವನ / ಕವಿತೆ / ಕಂಡಿದ್ದೀರಾ ಮೀಡಿಯಾಗಳಲ್ಲಿ

ಕಂಡಿದ್ದೀರಾ ಮೀಡಿಯಾಗಳಲ್ಲಿ

ಫ್ಯಾಶನ್ ಶೋ, ರಿಯಾಲಿಟಿ ಶೋ
ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ
ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ
ಐಷಾರಾಮಿ ಬಂಗಲೆ ವಾಸಿಗಳೇ
ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು
ನಿಮಗೆ ಸಾಧ್ಯವಾಗುವುದಾದರೆ ಹೇಳಿ?
ಸೋದರಿ ಇರೋಮ್ ಶರ್ಮಿಳಾ
ಯಾರೆಂದು ಗೊತ್ತೆ ನಿಮಗೆ?
ಮಿಡಿಯಾಗಳ ಮಿರ್ಚ್ ಮಸಾಲಾಗಳಲಿ
ಬಿಡುಗು ಬಿನ್ನಾಣಗಿತ್ತಿಯವರನು ನೋಡಿದ್ದೀರಿ
ಕಂಡಿದ್ದೀರಿ ನೀವು ನನ್ನ ಸೋದರಿಯನ್ನ?
ಇರೋಮ್ ಶರ್ಮಿಳಾಳನ್ನ

ಹದಿಮೂರು ವರ್ಷಗಳೇ ಕಳೆದವು
ಅನ್ನ ನೀರು ಮುಟ್ಟದೆ ರಚ್ಚೆ ಹಿಡಿದು
ನಳಿಕೆಯಲ್ಲಿ ಜೀವ ಹಿಡಿದಿದ್ದಾಳೆ ಅವಳು
ಪೂರ್ವಾಂಚಲದ ಛಲದ ಕುರುಹು
ಮಣಿಪುರದ ಮುತ್ತು ಮಾಣಿಕ್ಯದ ಹರಳು
ಕಂಡಿದ್ದೀರಾ ನೀವು ಟಿ.ವಿ. ಮಾದ್ಯಮದಲ್ಲಿ
ದಿಟ್ಟ ಹೋರಾಟಗಾರ್ತಿ
ಇರೋಮ್ ಶರ್ಮಿಳಾಳನ್ನ.

ಅವಳು ಹಟ ಹಿಡಿದಿರುವುದು ಚಾಕಲೇಟು
ವೈಭವದ ಧಿರಿಸು, ಒಡವೆಗಳಿಗೂ ಅಲ್ಲ.
ಸೈನಿಕರ ವಿಶೇಷಾಧಿಕಾರದ ವಿರುದ್ಧ
ಉರಿವ ಕೊಳ್ಳಿಯಾಗಿ ದಹಿಸುತ್ತಿದ್ದಾಳೆ ಅವಳು
ದಿಟ್ಟ ಉಕ್ಕಿನ ಅವಳ ಆಗ್ರಹದ ಬೇಡಿಕೆ
ಮಣಿಪುರದ ನ್ಯಾಯಕ್ಕೆ ಕಾದಿಟ್ಟ ಮಹಿಳೆ
ಅಗಳು ಮುಟ್ಟದೇ ಮಲಗಿದ್ದಾಳೆ
ಸೋದರಿ ಇರೋಮ್ ಶರ್ಮಿಳಾಳನ್ನು
ಕಂಡಿದ್ದೀರಾ ನೀವು ಮೀಡಿಯಾಗಳಲ್ಲಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...