Home / ಕವನ / ಕವಿತೆ / ಕಂಡಿದ್ದೀರಾ ಮೀಡಿಯಾಗಳಲ್ಲಿ

ಕಂಡಿದ್ದೀರಾ ಮೀಡಿಯಾಗಳಲ್ಲಿ

ಫ್ಯಾಶನ್ ಶೋ, ರಿಯಾಲಿಟಿ ಶೋ
ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ
ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ
ಐಷಾರಾಮಿ ಬಂಗಲೆ ವಾಸಿಗಳೇ
ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು
ನಿಮಗೆ ಸಾಧ್ಯವಾಗುವುದಾದರೆ ಹೇಳಿ?
ಸೋದರಿ ಇರೋಮ್ ಶರ್ಮಿಳಾ
ಯಾರೆಂದು ಗೊತ್ತೆ ನಿಮಗೆ?
ಮಿಡಿಯಾಗಳ ಮಿರ್ಚ್ ಮಸಾಲಾಗಳಲಿ
ಬಿಡುಗು ಬಿನ್ನಾಣಗಿತ್ತಿಯವರನು ನೋಡಿದ್ದೀರಿ
ಕಂಡಿದ್ದೀರಿ ನೀವು ನನ್ನ ಸೋದರಿಯನ್ನ?
ಇರೋಮ್ ಶರ್ಮಿಳಾಳನ್ನ

ಹದಿಮೂರು ವರ್ಷಗಳೇ ಕಳೆದವು
ಅನ್ನ ನೀರು ಮುಟ್ಟದೆ ರಚ್ಚೆ ಹಿಡಿದು
ನಳಿಕೆಯಲ್ಲಿ ಜೀವ ಹಿಡಿದಿದ್ದಾಳೆ ಅವಳು
ಪೂರ್ವಾಂಚಲದ ಛಲದ ಕುರುಹು
ಮಣಿಪುರದ ಮುತ್ತು ಮಾಣಿಕ್ಯದ ಹರಳು
ಕಂಡಿದ್ದೀರಾ ನೀವು ಟಿ.ವಿ. ಮಾದ್ಯಮದಲ್ಲಿ
ದಿಟ್ಟ ಹೋರಾಟಗಾರ್ತಿ
ಇರೋಮ್ ಶರ್ಮಿಳಾಳನ್ನ.

ಅವಳು ಹಟ ಹಿಡಿದಿರುವುದು ಚಾಕಲೇಟು
ವೈಭವದ ಧಿರಿಸು, ಒಡವೆಗಳಿಗೂ ಅಲ್ಲ.
ಸೈನಿಕರ ವಿಶೇಷಾಧಿಕಾರದ ವಿರುದ್ಧ
ಉರಿವ ಕೊಳ್ಳಿಯಾಗಿ ದಹಿಸುತ್ತಿದ್ದಾಳೆ ಅವಳು
ದಿಟ್ಟ ಉಕ್ಕಿನ ಅವಳ ಆಗ್ರಹದ ಬೇಡಿಕೆ
ಮಣಿಪುರದ ನ್ಯಾಯಕ್ಕೆ ಕಾದಿಟ್ಟ ಮಹಿಳೆ
ಅಗಳು ಮುಟ್ಟದೇ ಮಲಗಿದ್ದಾಳೆ
ಸೋದರಿ ಇರೋಮ್ ಶರ್ಮಿಳಾಳನ್ನು
ಕಂಡಿದ್ದೀರಾ ನೀವು ಮೀಡಿಯಾಗಳಲ್ಲಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...