Home / ಕವನ / ಕವಿತೆ / ಕಂಡಿದ್ದೀರಾ ಮೀಡಿಯಾಗಳಲ್ಲಿ

ಕಂಡಿದ್ದೀರಾ ಮೀಡಿಯಾಗಳಲ್ಲಿ

ಫ್ಯಾಶನ್ ಶೋ, ರಿಯಾಲಿಟಿ ಶೋ
ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ
ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ
ಐಷಾರಾಮಿ ಬಂಗಲೆ ವಾಸಿಗಳೇ
ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು
ನಿಮಗೆ ಸಾಧ್ಯವಾಗುವುದಾದರೆ ಹೇಳಿ?
ಸೋದರಿ ಇರೋಮ್ ಶರ್ಮಿಳಾ
ಯಾರೆಂದು ಗೊತ್ತೆ ನಿಮಗೆ?
ಮಿಡಿಯಾಗಳ ಮಿರ್ಚ್ ಮಸಾಲಾಗಳಲಿ
ಬಿಡುಗು ಬಿನ್ನಾಣಗಿತ್ತಿಯವರನು ನೋಡಿದ್ದೀರಿ
ಕಂಡಿದ್ದೀರಿ ನೀವು ನನ್ನ ಸೋದರಿಯನ್ನ?
ಇರೋಮ್ ಶರ್ಮಿಳಾಳನ್ನ

ಹದಿಮೂರು ವರ್ಷಗಳೇ ಕಳೆದವು
ಅನ್ನ ನೀರು ಮುಟ್ಟದೆ ರಚ್ಚೆ ಹಿಡಿದು
ನಳಿಕೆಯಲ್ಲಿ ಜೀವ ಹಿಡಿದಿದ್ದಾಳೆ ಅವಳು
ಪೂರ್ವಾಂಚಲದ ಛಲದ ಕುರುಹು
ಮಣಿಪುರದ ಮುತ್ತು ಮಾಣಿಕ್ಯದ ಹರಳು
ಕಂಡಿದ್ದೀರಾ ನೀವು ಟಿ.ವಿ. ಮಾದ್ಯಮದಲ್ಲಿ
ದಿಟ್ಟ ಹೋರಾಟಗಾರ್ತಿ
ಇರೋಮ್ ಶರ್ಮಿಳಾಳನ್ನ.

ಅವಳು ಹಟ ಹಿಡಿದಿರುವುದು ಚಾಕಲೇಟು
ವೈಭವದ ಧಿರಿಸು, ಒಡವೆಗಳಿಗೂ ಅಲ್ಲ.
ಸೈನಿಕರ ವಿಶೇಷಾಧಿಕಾರದ ವಿರುದ್ಧ
ಉರಿವ ಕೊಳ್ಳಿಯಾಗಿ ದಹಿಸುತ್ತಿದ್ದಾಳೆ ಅವಳು
ದಿಟ್ಟ ಉಕ್ಕಿನ ಅವಳ ಆಗ್ರಹದ ಬೇಡಿಕೆ
ಮಣಿಪುರದ ನ್ಯಾಯಕ್ಕೆ ಕಾದಿಟ್ಟ ಮಹಿಳೆ
ಅಗಳು ಮುಟ್ಟದೇ ಮಲಗಿದ್ದಾಳೆ
ಸೋದರಿ ಇರೋಮ್ ಶರ್ಮಿಳಾಳನ್ನು
ಕಂಡಿದ್ದೀರಾ ನೀವು ಮೀಡಿಯಾಗಳಲ್ಲಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...