ಹೊಸ ಬಾಳ ಬೆಳಕು

(೧೫-೮-೪೭)

ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ
ಭಾರತಿಯ ಕಣ್ಣೀರೊ ಉಳಿದವರ ಹಸಿವೊ
ಜವಾಹರ ವಲ್ಲಭರ ರಾಜೇಂದ್ರ ಮೌಲನರ
ನಿರುತ ಪೌರುಷವೆನಲು ಬಂದುದೀ ಬೆಳಕು.

ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು
ಪರತಂತ್ರ ಬಂಧನದಿ ಮುದುಕಿಯಂತಾಗಿ
ಇನ್ನೊಮ್ಮೆ ಸೆರೆಮನೆಯನೊಡೆದು ಹೊರ ತಾ ಬಂದು
ನೋಡುವಳು ಎಮ್ಮನ್ನು ಬಾಷ್ಪವನೆ ತುಂಬಿ.

ಕುಂಕುಮವ ತಳೆದಿಂದೆ ಮುತ್ತೈದೆತನದಿಂದ
ಆ ಮೊದಲ ತಾರುಣ್ಯ-ಲಾವಣ್ಯವೆಸೆಯೆ
ತಾಯಿ ನೋಡುವಳಿತ್ತ ನಗುಮೊಗದಿ ಕೃಪೆ ಬೀರಿ
ಎದೆಯರಳಿ ಕರೆಯುವಳು-ಅಡಿಗರಗಿ ನಮಿಸಿ-

ಪರದಾಸ್ಯ ಶೃಂಖಲೆಯ ಮುರಿದು ಬಂದಿಹಳೀಚೆ
ಎಲ್ಲ ಭಯಗಳ ತಳ್ಳಿ ಫಡ ನೂಕುತಾಚೆ
ಸ್ವಾತಂತ್ರ್ಯ ಬಾವುಟವ ಮೇಲೇರಿಸುವಳದಕೊ
ನಿರ್ಮಲಿನ ತೇಜದಲಿ ಬಹ ಭಂಗಿಯದಕೊ.

ಸೇತುವೆಯಲಾ ಸಾದ ವಿಂಧ್ಯವೇ ತಾಯ್ನಡುವು
ತುಹಿನಗಿರಿ ಮಣಿಮುಕುಟ ನಮ್ಮ ತಾಯ್ಗೆ
ಎಡ ಬಲಕೆ ಕೈ ನೀಡಿ ಮಕ್ಕಳನು ಹರಸುವಳು
ಆ ನಿಲುವ ನೂಡುತೀ ದರ್ಶನವ ಮಾಡಿ.

ಹೆತ್ತ ಭೂಮಿಯ ಪುಣ್ಯ ಬೆಳೆದ ಮಣ್ಣಿನ ಧರ್ಮ
ಸೂರ್ಯ-ಚಂದ್ರರ ಸತ್ಯ ಭಾರತಿಯ ತಪವು.
ನಮಗೆ ಬೆಳಕಾಯ್ತಿಂದು ನಮ್ಮ ನೆನಪಾಯ್ತೆಮಗೆ
ಎಲ್ಲಿ ನೋಡಿದರಲ್ಲಿ ತಾಯ ಪ್ರತಿಬಿಂಬ.

ಹಲವು ಕಾಲದ ತಪದಿ ಬೆಂದು ನೊಂದಿಹ ಕರುಳು
ತನ್ನ ಮಕ್ಕಳು ಕಳೆದ ನಲೆಯ ನೆನೆಯುವಳು
ವೀರ ಧರ್ಮಾಸನದಿ ಪರರೇರಿ ನಲಿಯುತಿರೆ
ಕೈದುಗಳ ಕೆಳಗಿರಿಸಿ ಕಂದಿದಳು ಚದುರೆ.

ಹಾರುತಿದೆ ತಾಯ್ಸೆರಗು ಮೇಲೇರಿ ಧ್ವಜವಾಗಿ
ಅದೊ ಕಂಪು-ಬಿಳಿ-ಹಸುರು – ಮಧ್ಯೆ ವರ ಚಕ್ರ
ಆಗಸದಿ ಮೊಗದೋರಿ ಇನ್ನೊಮ್ಮೆ ಕೆಳಗಿಳಿಯೆ
ನೆಂದೊರೆವ ತೆರದಿಂದ ಅಭಯ ತೋರುತಿದೆ.

ಮೈತ್ರಿಯಲಿಬೀಳ್ಕೊಟ್ಟು ಆಂಗ್ಲರಂ ಕಳುಹುವಳು
ತೊಡೆಯ ಸಿಂಹಾಸನದಿ ಮಕ್ಕಳನು ನಿಲಿಸಿ-
ತಾಯಿಯನಲಂಕರಿಸಿ ಶಾಂತಿಯಂ ಪೊಂದುತಲಿ
ಜೈವುಘೇಯೆನುತವರು ನಡಯುತಿಹರದಕೊ-

ಸ್ವಾತಂತ್ರಗೀತವನು ಹಾಡುತಲಿ ಭೂಮಾತೆ
ಭಾರತಿಯ ಹರಸುವಳು ನಗುಮೊಗದಿ ಬಂದು.
ಹತ್ತು ದಿಕ್ಕಿನ ಗಾಳಿ ಹಾಡುತಿದೆ ಕೀರ್ತಿಯನು
ಭರತ ಮಾತೆಯ ಪಾದರಜವಿರಿಸಿ ಪಣೆಗೆ-
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಡಿದ್ದೀರಾ ಮೀಡಿಯಾಗಳಲ್ಲಿ
Next post ಜಂಭದ ಹುಂಜ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys