Home / ಕವನ / ಕವಿತೆ / ಹೊಸ ಬಾಳ ಬೆಳಕು

ಹೊಸ ಬಾಳ ಬೆಳಕು

(೧೫-೮-೪೭)

ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ
ಭಾರತಿಯ ಕಣ್ಣೀರೊ ಉಳಿದವರ ಹಸಿವೊ
ಜವಾಹರ ವಲ್ಲಭರ ರಾಜೇಂದ್ರ ಮೌಲನರ
ನಿರುತ ಪೌರುಷವೆನಲು ಬಂದುದೀ ಬೆಳಕು.

ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು
ಪರತಂತ್ರ ಬಂಧನದಿ ಮುದುಕಿಯಂತಾಗಿ
ಇನ್ನೊಮ್ಮೆ ಸೆರೆಮನೆಯನೊಡೆದು ಹೊರ ತಾ ಬಂದು
ನೋಡುವಳು ಎಮ್ಮನ್ನು ಬಾಷ್ಪವನೆ ತುಂಬಿ.

ಕುಂಕುಮವ ತಳೆದಿಂದೆ ಮುತ್ತೈದೆತನದಿಂದ
ಆ ಮೊದಲ ತಾರುಣ್ಯ-ಲಾವಣ್ಯವೆಸೆಯೆ
ತಾಯಿ ನೋಡುವಳಿತ್ತ ನಗುಮೊಗದಿ ಕೃಪೆ ಬೀರಿ
ಎದೆಯರಳಿ ಕರೆಯುವಳು-ಅಡಿಗರಗಿ ನಮಿಸಿ-

ಪರದಾಸ್ಯ ಶೃಂಖಲೆಯ ಮುರಿದು ಬಂದಿಹಳೀಚೆ
ಎಲ್ಲ ಭಯಗಳ ತಳ್ಳಿ ಫಡ ನೂಕುತಾಚೆ
ಸ್ವಾತಂತ್ರ್ಯ ಬಾವುಟವ ಮೇಲೇರಿಸುವಳದಕೊ
ನಿರ್ಮಲಿನ ತೇಜದಲಿ ಬಹ ಭಂಗಿಯದಕೊ.

ಸೇತುವೆಯಲಾ ಸಾದ ವಿಂಧ್ಯವೇ ತಾಯ್ನಡುವು
ತುಹಿನಗಿರಿ ಮಣಿಮುಕುಟ ನಮ್ಮ ತಾಯ್ಗೆ
ಎಡ ಬಲಕೆ ಕೈ ನೀಡಿ ಮಕ್ಕಳನು ಹರಸುವಳು
ಆ ನಿಲುವ ನೂಡುತೀ ದರ್ಶನವ ಮಾಡಿ.

ಹೆತ್ತ ಭೂಮಿಯ ಪುಣ್ಯ ಬೆಳೆದ ಮಣ್ಣಿನ ಧರ್ಮ
ಸೂರ್ಯ-ಚಂದ್ರರ ಸತ್ಯ ಭಾರತಿಯ ತಪವು.
ನಮಗೆ ಬೆಳಕಾಯ್ತಿಂದು ನಮ್ಮ ನೆನಪಾಯ್ತೆಮಗೆ
ಎಲ್ಲಿ ನೋಡಿದರಲ್ಲಿ ತಾಯ ಪ್ರತಿಬಿಂಬ.

ಹಲವು ಕಾಲದ ತಪದಿ ಬೆಂದು ನೊಂದಿಹ ಕರುಳು
ತನ್ನ ಮಕ್ಕಳು ಕಳೆದ ನಲೆಯ ನೆನೆಯುವಳು
ವೀರ ಧರ್ಮಾಸನದಿ ಪರರೇರಿ ನಲಿಯುತಿರೆ
ಕೈದುಗಳ ಕೆಳಗಿರಿಸಿ ಕಂದಿದಳು ಚದುರೆ.

ಹಾರುತಿದೆ ತಾಯ್ಸೆರಗು ಮೇಲೇರಿ ಧ್ವಜವಾಗಿ
ಅದೊ ಕಂಪು-ಬಿಳಿ-ಹಸುರು – ಮಧ್ಯೆ ವರ ಚಕ್ರ
ಆಗಸದಿ ಮೊಗದೋರಿ ಇನ್ನೊಮ್ಮೆ ಕೆಳಗಿಳಿಯೆ
ನೆಂದೊರೆವ ತೆರದಿಂದ ಅಭಯ ತೋರುತಿದೆ.

ಮೈತ್ರಿಯಲಿಬೀಳ್ಕೊಟ್ಟು ಆಂಗ್ಲರಂ ಕಳುಹುವಳು
ತೊಡೆಯ ಸಿಂಹಾಸನದಿ ಮಕ್ಕಳನು ನಿಲಿಸಿ-
ತಾಯಿಯನಲಂಕರಿಸಿ ಶಾಂತಿಯಂ ಪೊಂದುತಲಿ
ಜೈವುಘೇಯೆನುತವರು ನಡಯುತಿಹರದಕೊ-

ಸ್ವಾತಂತ್ರಗೀತವನು ಹಾಡುತಲಿ ಭೂಮಾತೆ
ಭಾರತಿಯ ಹರಸುವಳು ನಗುಮೊಗದಿ ಬಂದು.
ಹತ್ತು ದಿಕ್ಕಿನ ಗಾಳಿ ಹಾಡುತಿದೆ ಕೀರ್ತಿಯನು
ಭರತ ಮಾತೆಯ ಪಾದರಜವಿರಿಸಿ ಪಣೆಗೆ-
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...