ಅಥೆಲೋ ನಾಟಕ ಓದಿ

ಬಾಳ ಬಣವೆಯ ಕೆಳಗೆ
ಮತ್ಸರದ ಕಿಡಿ ಹೊತ್ತಿ!
ಸುಟ್ಟು ಹಾಕುವುದಯ್ಯೋ!
ನಿರ್ಬುದ್ದ ಕಿಡಿಗೇಡಿ
ದೌರ್‍ಮನಸ್ಯವು ಒಂದು
ದುಡಿಯುತಿದೆ ಸಂತತವು

ಆನಂದವನು ಕೆಡಿಸಿ
ದುಮ್ಮಾನವನು ಬೆಳೆಸಿ
ಸೈತಾನ ನೃತ್ಯವನು
ಹಾಕುತಿದೆ ಧೀಂಕಿಟ್ಟು

ಋತವೆಲ್ಲ ಕಾಲ್ದೆಗೆದು
ಹಾಳಾಗಿ ಹೋಗುತಿದೆ

ದಿನದಿನಕು ಜೀವನದಿ
ವಿಷಮತೆಯು ಹೆಚ್ಚುತಿದೆ
ಸಂತಾಪತಾಪಗಳ
ಕೋಟಲೆಯ ಮಡುವಿನಲಿ
ನರನರಳಿ ಸಾಯುತಿವೆ
ನೂರಾರು ಜೀವಿಗಳು!

ಜಗವ ನಾಳುವಕೈಯ
ನರವು ಸತ್ತಿಹುದೇನೊ
ಎಂಬ ಸಂಶಯದಿಂದ
ತತ್ತರಿಸುತಿದೆ ಬುದ್ಧಿ

ಕೊನೆಯು ಬರುವದೆ ಇಂಥ
ರಕ್ಕಸರ ಹೂಟಕ್ಕೆ?
ಎಂದು ತಲೆತುರಿಸುವದೆ
ಉದ್ಯೋಗವಾಗಿಹುದು

ಮಾನವನ ಮಿದುಳೆಲ್ಲ
ಕೈಯೂರಿ ನಿಂತಿಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವಗೀತೆ
Next post ರಾವಣಾಂತರಂಗ – ೧೧

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…