ಆಗಿದ್ದರೆ…!

ಧನ್ಯಾಸಿ

ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ
ಪತಿಯನಿತು ಬಳಿಯಾವುದಿಲ್ಲವಂತೆ !
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ ?

ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ-
ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ,
ಮುಡಿಗೆ ಹೋಗಲಿ ಅಡಿಯ ತೊಡವದಾಗಿದ್ದರೂ
ಅಡಿಯೊಂದಿ ಇರುತಿರ್‍ದೆನೇನು ಕೀಳೇ ?

ಕೊರಳ ಮಣಿಮಾಲೆಯಾಗಿರುತಿರ್ದ್ದರೆನಿತೊಳಿತೊ !
ಅರಸನೆದೆಯಪ್ಪಿನಾ ಮೆರೆಯುತಿರ್ದ್ದೆ.
ಕೊರಳಸರಬೇಡ ಕಿರುಬೆರಳಿನುಂಗುರವಿರಲು
ಕರವ ಬಿಟ್ಟಿರದೆ ಸುಖ ಸುರಿಯುತಿರ್ದ್ದೆ.

ಚೆನ್ನ ನಡುವಿನೊಳಿಟ್ಟ ಚಿನ್ನದೆಳೆಯುಡುದಾರ
ಪುಣ್ಯವೆನಿತನ್ನು ಮಾಡಿರುವುದೇನೋ !
ಹೆಣ್ಣನಲ್ಲದೆ ನನ್ನ ಚಿನ್ನದೆಳೆಯನ್ನಾಗಿ
ಹಣ್ಣಿದ್ದರಾ ವಿಧಿಗೆ ಹಾನಿಯೇನೋ !

ತಂಬುಲವೆ ನಾನಾಗಿ ಜನಿಸಿರ್ದ್ದರಿನಿಯನಾ
ಚೆಂಬವಳದುಟಿ ಸೋಂಕಿ ನಲಿಯುತಿರ್ದ್ದೆ,
ಹೆಂಬದುಕನೇಕೆ ಹಾಕಿತು ದೈವ ? ಇನಿತೊಂದು
ಹಂಬಲಿಸಿ ಹಂಬಲಿಸಿ ಹಲುಬಲೆಂದೇ ?

ಸತಿಯನಿತು ಪತಿಗೆ ಹತ್ತಿರದ ಜೊತೆಯಾ ಸತಿಗೆ
ಪತಿಯನಿತು ಬಳಿ ಯಾವುದಿಲ್ಲವಂತೆ,
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯಿಂದ ಕೊಲ್ಲು ನೀ
Next post ವಿಶ್ವಾವತಾರ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…