ಆಗಿದ್ದರೆ…!

ಧನ್ಯಾಸಿ

ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ
ಪತಿಯನಿತು ಬಳಿಯಾವುದಿಲ್ಲವಂತೆ !
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ ?

ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ-
ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ,
ಮುಡಿಗೆ ಹೋಗಲಿ ಅಡಿಯ ತೊಡವದಾಗಿದ್ದರೂ
ಅಡಿಯೊಂದಿ ಇರುತಿರ್‍ದೆನೇನು ಕೀಳೇ ?

ಕೊರಳ ಮಣಿಮಾಲೆಯಾಗಿರುತಿರ್ದ್ದರೆನಿತೊಳಿತೊ !
ಅರಸನೆದೆಯಪ್ಪಿನಾ ಮೆರೆಯುತಿರ್ದ್ದೆ.
ಕೊರಳಸರಬೇಡ ಕಿರುಬೆರಳಿನುಂಗುರವಿರಲು
ಕರವ ಬಿಟ್ಟಿರದೆ ಸುಖ ಸುರಿಯುತಿರ್ದ್ದೆ.

ಚೆನ್ನ ನಡುವಿನೊಳಿಟ್ಟ ಚಿನ್ನದೆಳೆಯುಡುದಾರ
ಪುಣ್ಯವೆನಿತನ್ನು ಮಾಡಿರುವುದೇನೋ !
ಹೆಣ್ಣನಲ್ಲದೆ ನನ್ನ ಚಿನ್ನದೆಳೆಯನ್ನಾಗಿ
ಹಣ್ಣಿದ್ದರಾ ವಿಧಿಗೆ ಹಾನಿಯೇನೋ !

ತಂಬುಲವೆ ನಾನಾಗಿ ಜನಿಸಿರ್ದ್ದರಿನಿಯನಾ
ಚೆಂಬವಳದುಟಿ ಸೋಂಕಿ ನಲಿಯುತಿರ್ದ್ದೆ,
ಹೆಂಬದುಕನೇಕೆ ಹಾಕಿತು ದೈವ ? ಇನಿತೊಂದು
ಹಂಬಲಿಸಿ ಹಂಬಲಿಸಿ ಹಲುಬಲೆಂದೇ ?

ಸತಿಯನಿತು ಪತಿಗೆ ಹತ್ತಿರದ ಜೊತೆಯಾ ಸತಿಗೆ
ಪತಿಯನಿತು ಬಳಿ ಯಾವುದಿಲ್ಲವಂತೆ,
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯಿಂದ ಕೊಲ್ಲು ನೀ
Next post ವಿಶ್ವಾವತಾರ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…