ಪ್ರೀತಿಯಿಂದ ಕೊಲ್ಲು ನೀ

ಪ್ರೀತಿಯಿಂದ ಕೊಲ್ಲು ನೀ
ಸುಖವಾಗಿ ಸಾಯುವೆ||
ಪ್ರೀತಿಸಿದಂತೆ ನಟಿಸಿ
ಮಾತ್ರ ಮೋಸವ ಮಾಡಬೇಡ!
ಪವಿತ್ರ ಪ್ರೀತಿ ನನ್ನದು, ಅದು
ಎಂದೆಂದೂ ಅಜರಾಮರ||

ಮಗುವು ಅಮ್ಮನ ನಂಬಿದಂತೆ
ನಾನು ನಿನ್ನ ನಂಬಿದೆ|
ತಂಗಿಯು ಅಣ್ಣನ
ನಂಬಿದಂತೆ ನಾ ನಂಬಿದೆ|
ಹೂವೊಂದು ಮುಳ್ಳನು
ನಂಬಿದಂತೆ ನಾನು ನಿನ್ನ ನಂಬಿದೆ|
ಆದರೆ ನೀನು ಮಾತ್ರ
ಆ ನಂಬಿಕೆಯನ್ನೆಲ್ಲಾ ಹುಸಿಮಾಡಿದೆ||

ನನ್ನ ಪ್ರೀತಿ ಅಮೃತದಿ ನೀನು
ಸಿಹಿಯ ವಿಷಬೆರಸಿ ಉಣಿಸಿದೆ|
ಹಾಲಾಹಲವ ಹಾಲೆಂದು
ನಂಬಿ ನಾನು ಪ್ರೀತಿಯಿಂದಲಿ ಕುಡಿದೆ|
ನನ್ನ ಮಾನಸ ಸರೋವರದಲಿ
ಕರಗದ ಮಂಜು ಗಡ್ಡೆಯಾಗಿ ನೀನು
ಧುಮುಕಿ ಹೃದಯವನು ಕಲಕಿದೆ|
ಈಗ ಬಣ್ಣವೇ ಇರದ ಹಿಮಗಡ್ಡೆಯಾಗಿ
ಹೆಪ್ಪುಗಟ್ಟುತಾ ಶೀತ ಶೈತ್ಯದಲಿ
ನಾನು ಶಿಲೆಯಾಗುತಿರುವೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಹೊತ್ತು
Next post ಆಗಿದ್ದರೆ…!

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…