ಭಕ್ತ

ಪ್ರಾರ್ಥನೆ ಗೈವರು ದೇವರಲಿ
ತಪ್ಪು ಮಾಡುವ ಮುನ್ನಾ ಕ್ಷಣ
ನೆನೆಯುವರು ನಿನ್ನ ಮನದಲ್ಲಿ
ಕಾಪಾಡು ನನ್ನನು ಅನುದಿನ ಎಂದು.

ಪ್ರಾರ್ಥನೆ ಗೈವರು ದೇವರಲಿ
ಮಾಡಿದ ತಪ್ಪಿಗೆ ಕ್ಷಮೆಕೋರಿ
ನೆನದು ಬೇಡುವರು ಅನುಕ್ಷಣ
ಮನ್ನಿಸಿಬಿಡು ನನ್ನನ್ನ

ಹರಕೆಯ ಹೊರುವರು ನಿನ್ನಲ್ಲಿ
ಕಾಡಿಬೇಡುವರು ವರವನು ಕೇಳಿ
ಅಂದುಕೊಂಡಂತೆ ನೆನೆದರೇನೆ
ಮುಂದಿಡುವರು ಹರಕೆಯ ಸನ್ನ

ಮಾಡುವರು ಶಪಥ ನಿನ್ನಲ್ಲಿ
ಆಮಿಷ ತೋರುವ ತರದಲಿ
ಕಾರ್ಯ ಸಿದ್ಧಿ ಯಾದರೇನೆ ನಿನಗೆ
ಕೊಡುವರು ಚಿನ್ನಾಭರಣ

ಸ್ವಾರ್ಥದಿ ಜನ ಬೇಡುವರು ದಿನ
ಬೇಡುವರೆಲ್ಲರು ತಮ್ಮದೆ ಒಳಿತಿಗೆ
ಬಲಿ ಕೊಡುವರು ಮೂಕ ಪ್ರಾಣಿಗಳ
ರಕ್ಕಸ ಮುಖ ತೋರುವ

ದೇವರೆ ದೇವರೆ ಎನ್ನುವರು ದಿನ
ತಮಗಾಗಿ ತಮ್ಮ ಒಳಿತಿಗಾಗಿ
ನಿನಗಾಗಿ ಪ್ರಾರ್ಥಿಸುವವರು ನಾನಂತು ಕಾಣೆ
ಇದು ಸತ್ಯ ದೇವ ನಿನ್ನಾಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಧ್ಯಾನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…