ಭಕ್ತ

ಪ್ರಾರ್ಥನೆ ಗೈವರು ದೇವರಲಿ
ತಪ್ಪು ಮಾಡುವ ಮುನ್ನಾ ಕ್ಷಣ
ನೆನೆಯುವರು ನಿನ್ನ ಮನದಲ್ಲಿ
ಕಾಪಾಡು ನನ್ನನು ಅನುದಿನ ಎಂದು.

ಪ್ರಾರ್ಥನೆ ಗೈವರು ದೇವರಲಿ
ಮಾಡಿದ ತಪ್ಪಿಗೆ ಕ್ಷಮೆಕೋರಿ
ನೆನದು ಬೇಡುವರು ಅನುಕ್ಷಣ
ಮನ್ನಿಸಿಬಿಡು ನನ್ನನ್ನ

ಹರಕೆಯ ಹೊರುವರು ನಿನ್ನಲ್ಲಿ
ಕಾಡಿಬೇಡುವರು ವರವನು ಕೇಳಿ
ಅಂದುಕೊಂಡಂತೆ ನೆನೆದರೇನೆ
ಮುಂದಿಡುವರು ಹರಕೆಯ ಸನ್ನ

ಮಾಡುವರು ಶಪಥ ನಿನ್ನಲ್ಲಿ
ಆಮಿಷ ತೋರುವ ತರದಲಿ
ಕಾರ್ಯ ಸಿದ್ಧಿ ಯಾದರೇನೆ ನಿನಗೆ
ಕೊಡುವರು ಚಿನ್ನಾಭರಣ

ಸ್ವಾರ್ಥದಿ ಜನ ಬೇಡುವರು ದಿನ
ಬೇಡುವರೆಲ್ಲರು ತಮ್ಮದೆ ಒಳಿತಿಗೆ
ಬಲಿ ಕೊಡುವರು ಮೂಕ ಪ್ರಾಣಿಗಳ
ರಕ್ಕಸ ಮುಖ ತೋರುವ

ದೇವರೆ ದೇವರೆ ಎನ್ನುವರು ದಿನ
ತಮಗಾಗಿ ತಮ್ಮ ಒಳಿತಿಗಾಗಿ
ನಿನಗಾಗಿ ಪ್ರಾರ್ಥಿಸುವವರು ನಾನಂತು ಕಾಣೆ
ಇದು ಸತ್ಯ ದೇವ ನಿನ್ನಾಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಧ್ಯಾನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…