ಸಾವು ಹೂವು

ನಾನು ನನ್ನನು ತೊರೆದೆ
ಧ್ಯಾನ ಗಾನದಿ ಬೆರೆದೆ
ಭಾನವೇರಿತು ಹರಿದು ಸಕಲ ಪರದೆ

ಭಾವಭಕ್ತಿಯ ಭರದೆ
ಜೀವ ಅರ್‍ಪಿಸಿ ಕರೆದೆ
ಸಾವುನೋವಿನ ತಡೆಯನೊಡೆದು ಮೆರೆದೆ

ಆತನಾಡುವ ಲೀಲೆ
ಭಿತ್ತಿಯಿಲ್ಲದ ಶಾಲೆ
ಮಾತು ಮೌನದ ಜ್ವಾಲೆ ಬೆಳಕಿನೋಲೆ

ತಿಮಿರ ಚಕ್ರದ ಮೂಲೆ
ಸಮರ ಸಾಧನ ಶಾಲೆ
ಅಮರರಾಳಿಕೆಯಲ್ಲಿ ಅಲ್ಲಿ ಸೋಲೆ?

ಯಂತ್ರದೊಳಗಿನ ಅಸುವು
ಮಂತ್ರಮೋಡಿಯ ಹಾವು
ಅಂತರಂಗದೊಳದುವೆ ಅಮರ ಶಿಶುವು

ಎಲ್ಲರಂಜಿಪ ಸಾವು
ಒಲ್ಲದವರಿಗೆ ಬೇವು
ಬಲ್ಲವರಿಗೇನುಂಟು ಸಾವುಹೂವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಆಹಾ…! ಬಣ್ಣದ ಚಿಟ್ಟೆ’
Next post ಪ್ರೆಂಜ್ ಕಾಫ್ಕಾ ನ “ದಿ ಟ್ರಯಲ್” ಸಾಮಾನ್ಯನಿಗೆ ತೆರೆಯದ ನ್ಯಾಯದ ಬಾಗಿಲು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys