‘ಆಹಾ…! ಬಣ್ಣದ ಚಿಟ್ಟೆ’

ಬಣ್ಣ ಬಣ್ಣದಾ ಚಿಟ್ಟೆ
ಸುಂದರ ಅದರ ಬಟ್ಟೆ
ಹಿಡಿಯಲು ಓಡಿಬಿಟ್ಟೆ
ಅಯ್ಯೋ ಬಿದ್ದು ಕೆಟ್ಟೆ

ಕಾಮನ ಬಿಲ್ಲಿನ ಬಣ್ಣ
ತಣಿಸಿತು ನನ್ನ ಕಣ್ಣ
ಬರೆದವರಾರು ಚಿತ್ರ
ಹೇಳು ನನ್ನ ಹತ್ರ

ಹೂವಿನ ತೋಟಕೆ ಹಾರಿ
ಹೂವಿನ ತೇರನ್ನೇರಿ
ಕುಣಿವ ನಿನ್ನ ರೆಕ್ಕೆ
ನೋಡಿ ನಾನು ನಕ್ಕೆ

ಮೆಲ್ಲಗೆ ನಡೆದು ಬಂದೆ
ಕೈಯನು ಮುಂದೆ ತಂದೆ
ಹಿಡಿದೇ ಬಿಟ್ಟೆ ಎಂದೆ
ಖಾಲಿ ಕೈಲಿ ನಿಂದೆ

ಕಂಬಳಿ ಹುಳುವೇ ನೀನು?
ಚಿಟ್ಟೆಯಾದೆ ಏನು!
ಕಂಬಳಿ ಬಟ್ಟೆ ಬಿಟ್ಟೆ
ಬಣ್ಣದ ಅಂಗಿ ತೊಟ್ಟೆ

ಎಷ್ಟೊಂದ್ ಬಣ್ಣದ ಬಟ್ಟೆ
ಕೊಂಡು ನಾನು ತೊಟ್ಟೆ
ಆಗದೇ ಹೋದೆ ಚಿಟ್ಟೆ
ಮತ್ತೊಮ್ಮೆ ಹುಟ್ಬೇಕಷ್ಟೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ಮತ್ತು ಸಾಕ್ಷಿ
Next post ಸಾವು ಹೂವು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…