ಆತ್ಮ ಮತ್ತು ಸಾಕ್ಷಿ

ಪ್ರೀತಿ ದ್ವೇಷದ ರಹಸ್ಯಗಳು
ಆತ್ಮವನ್ನು ಕುಟುಕಿದ ನಿಗೂಢಗಳು
ಪಾತಾಳಕ್ಕೆ ಕುಸಿಯುವ ಕನಸುಗಳು
ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ
ಪಾಪ ತುಂಬಿದ ಆತ್ಮಗಳು

ಅಲೆಮಾರಿ ಮೋಡಗಳು
ಪಾಪಾತ್ಮಗಳನ್ನು ತೊಳೆಯಲು
ಮಳೆಯನ್ನು ತರಲಿಲ್ಲ
ಕಲಬೆರಿಕೆ ಕನಸುಗಳು
ಭೂಮಿ ಸೂರ್‍ಯರು ಸಂಧಿಸುವ
ಸುಂದರ ಸಂಜೆಯಲಿ
ಮಲೀನವಾದ ಹೃದಯಗಳ
ಮುಸುಕನ್ನು ಸರಿಸದೇ ಹೋದವು.

ಮುಸುಕು ಸರಿಸಿ ಇಣುಕಿದರೆ
ಮುಳುಗುತ್ತಿರುವ ಸೂರ್‍ಯ.
ಕೆಂಪು ರಕ್ತದ ಮಡುವಿನಲಿ
ಕೊಲೆಯಾಗಿ ಬಿದ್ದಿದ್ದನು,
ಎಂತಹ ಸಾವು ಸೂರ್ಯನದು,
ಸಾಕ್ಷಿಗಳಿಲ್ಲ, ಸತ್ತ ಶವಕ್ಕೆ
ಅಳುವ ವಾರಸುದಾರರಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರನೆ ಶ್ರೀರಾಮ
Next post ‘ಆಹಾ…! ಬಣ್ಣದ ಚಿಟ್ಟೆ’

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…