ತಾರನೆ ಶ್ರೀರಾಮ

ತಾರನೆ ಶ್ರೀರಾಮ
ಸೀತೆಯು ಬಯಸಿದ ಮಾಯಾಮೃಗವ
ತಂದೀಯನೆ ಆ ರಾಮ

ಪರ್‍ಣಕುಟಿಯ ಸುತ್ತಲು ಕುಣಿಯುವುದಿದು
ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು
ಬಂಗಾರದ ಜಿಂಕೆಯಿದು
ಕಿನ್ನರ ಲೋಕದ ಜಿಂಕೆಯಿದು
ಇಂದ್ರ ಲೋಕದ ಜಿಂಕೆಯಿದು
ಸೂರ್ಯ ಚಂದ್ರರೆ ಮೋಹಿಸುವ ಜಿಂಕೆಯಿದು
ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಬೇಡವೀ ಮೃಗದ ಗೊಡವೆಯೆಂದರೂ ಶ್ರೀರಾಮ
ಇದು ಮಾಯಾ ಜಿಂಕೆ ನೋಡು
ನೆಲ ಮುಟ್ಟದೆ ನೆಗೆವುದು ನೋಡು
ಬಿಸಿಲಲ್ಲೂ ನೆರಳಿಲ್ಲದ ಮೈ ನೋಡು
ಕಂಡೂ ಕಾಣಿಸದೆ ಕೆಣಕುವುದು ನೋಡು
ಈ ಇಂಥ ಜಿಂಕೆ ನಿಜವಲ್ಲ ನೋಡು
ನೋಡೆಂದನು ಶ್ರೀರಾಮ

ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಅಲ್ಲಿಂದಲೆ ರಾಮಾಯಣ
ಅಲ್ಲಿಂದಲೆ ಇನ್ನೆಂದೂ ಮುಗಿಯದ ಯಾನ
ಅಲ್ಲಿಂದಲೆ ಲಂಕಾದಹನ
ಅಲ್ಲಿಂದಲೆ ಎಲ್ಲ ಕಥೆಗಳ ಜನನ

ಹಾ ಲಕ್ಷ್ಮಣ! ಹಾ ಸೀತೆ!
ಕಂಡಿದ್ದಳೆ ಆ ಮಹಾಮಾತೆ
ತನ್ನ ಮುಂದಿನ ಕಥೆಯ
ದಿವ್ಯ ದೃಷ್ಟಿಯೊಳಗೆ
ಪಾತ್ರವಾಗದೆ ಇರುವುದು ಹೇಗೆ
ಮಾನವ ಜನ್ಮ ತಳೆದ ಮೇಲೆ!

ಹೇ ಭೂಮಿ ತಾಯೆ
ನೀ ಕರೆಯುವ ವರೆಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಕಂಡ ಕವಿ ಹೃದಯಿ
Next post ಆತ್ಮ ಮತ್ತು ಸಾಕ್ಷಿ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…