ಸುಂದರ ಪರಿಸರ

ಪರಿಸರ ಸುಂದರ ಪರಿಸರ
ಜೀವಕೋಟಿಯ ಚೇತನಸಾರ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ
ಕಣ್ಮನ ತಣಿಸುವ ಗಿರಿಕಾನನ
ಪರಿಮಳ ಸೂಸುವ ಸುಮವದನ
ಪಂಚಮ ಸ್ವರದ ಕೋಗಿಲೆಗಾನ
ತಂಪು ಸೂಸುವ ತಂಗಾಳಿ ತಾನ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ
ಮಾವು ಬೇವು ತೇಗ ಶ್ರೀಗಂಧ
ನಿರ್ಜರ ನದಿನದ ಕಲರವ ನಾದ
ಹಕ್ಕಿಗಳಿಂಚರ ಕರ್ಣಾನಂದ
ಮೈಮನ ಮರೆಸುವ ಕಾಡಿನ ಚಂದ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ.
ನವಿಲಿನ ನಾಟ್ಯ, ಜಿಂಕೆಯ ಓಟ
ವಾನರ ವೀರರ ಮರಕೋತಿಯಾಟ
ಖಗ ಮೃಗಾದಿಗಳ ತಿನಿಸಿನ ಚೆಲ್ಲಾಟ
ಕಾನನ ಸಂಸಾರ ಸುಂದರ ನೋಟ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇನಿಯನಿಗೆ ತವಕವಿಲ್ಲ
Next post ವ್ಯತ್ಯಾಸ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys