ವಚನ ವಿಚಾರ – ಇನಿಯನಿಗೆ ತವಕವಿಲ್ಲ

ವಚನ ವಿಚಾರ – ಇನಿಯನಿಗೆ ತವಕವಿಲ್ಲ

ಇನಿಯಂಗೆ ತವಕವಿಲ್ಲ
ಎನಗೆ ಸೈರಣೆಯಿಲ್ಲ
ಮನದಿಚ್ಛೆಯನರಿವ ಸಖಿಯರಿಲ್ಲ
ಇನ್ನೇವೆನವ್ವಾ
ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ
ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ

[ಬೀಸರವಾಗದ ಮುನ್ನ-ವ್ಯರ್ಥವಾಗುವ ಮುನ್ನ]

ಸತ್ಯಕ್ಕನ ವಚನ. ಭಕ್ತಿ ಪ್ರೀತಿಗಳೆರಡೂ ತೀವ್ರವಾಗಿ ಬೆರೆತ ಮಾತು ಇಲ್ಲಿದೆ.
ನನ್ನ ಪ್ರೇಮಿಗೆ ನನ್ನ ಕೂಡಬೇಕೆಂಬ ತವಕ ಇಲ್ಲ, ನನಗೆ ಕಾಯುವ ಸಹನೆ ಇಲ್ಲ, ನನ್ನ ಮನಸ್ಸನ್ನು ತಿಳಿಯುವ ಗೆಳತಿಯರೂ ಇಲ್ಲ. ಏನು ಮಾಡಲಿ, ಸಹಿಸಲಾರೆ, ಅಮ್ಮಾ ನನ್ನ ಮನಸ್ಸು ಮನ್ಮಥವೈರಿಯ ಅನುಭಾವದಲ್ಲಿ ಸಿಕ್ಕಿಕೊಂಡಿದೆ, ನೀನೂ ಕರುಣೆ ಇಲ್ಲದ ತಾಯಿ, ನನ್ನ ದಿನಗಳು ವೃಥಾ ಕಳೆದು ಹೋಗುತ್ತ ನನ್ನ ಯೌವನ ವ್ಯರ್ಥವಾಗುವ ಮೊದಲು ಶಂಭುಜಕ್ಕೇಶ್ವರನೊಡನೆ ನನ್ನನ್ನು ಕೂಡಿಸು.

ಪ್ರೇಮಿಯ ವೈಚಿತ್ರ (ಅವನು ಮನ್ಮಥವೈರಿಯಾದ್ದರಿಂದಲೇ ಅವನಿಗೆ ತವಕವಿಲ್ಲ), ಸಮವಯಸ್ಕ ಗೆಳೆತಿಯರಿಲ್ಲದ ಒಂಟಿತನದ ಭಾರ, ತಾಯಿಯೊಡನೆ ಹೇಳಬಾರದ ಮಾತಾದರೂ ಅವಳಲ್ಲದೆ ಬೇರೆ ಗತಿ ಇಲ್ಲ ಎಂಬ ಅಸಹಾಯಕತೆ, ಶಂಭುಜಕ್ಕೇಶ್ವರನೊಡನೆ ನನ್ನ ಕೂಡಿಸು ಎಂದು ಮಗಳಾಗಿ ಸಂಕೋಚಬಿಟ್ಟು ಕೇಳಲೇಬೇಕೆಂಬ ಭಾವದ ಒತ್ತಡ ಇವೆಲ್ಲ ತೀವ್ರವಾದ ಕಾವ್ಯರೂಪದಲ್ಲಿ ವ್ಯಕ್ತವಾಗಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಂದ್ರೆ ಯವರ ‘ಗರಿ’
Next post ಸುಂದರ ಪರಿಸರ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys