Home / ಕವನ / ಕವಿತೆ / ಉಪದೇಶ

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ
ಇನ್ನೇಕೆ ಮೀನಮೇಷ.
ಮೂರು ಬಿಟ್ಟು ನಿಂತಿರುವ ಅಭ್ಯಾಗತ
ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ
ನಿನ್ನದೇನು ಹೆಚ್ಚುಗಾರಿಕೆ
ಅರವತ್ತರಲ್ಲಿ ನೀನು ಒಬ್ಬ.
ಹೊಸ ವೇಷ ಹಳೆ ಹೆಸರು
ಬರಿಗೈಯಲ್ಲಿ ಬಂದಿರುವೆಯಾ ಹೇಗೆ?
ಏನೇನು ತಂದಿರುವೆ ಕೊಡುಗೈದಾನಿ
ಇದೇನಿದು ಉಂಡೆಗಾತ್ರ ಬೆಲ್ಲ
ಬೆಟ್ಟದಷ್ಟು ಬೇವು.
ಕೈಯಲ್ಲಿ ಕಡೆಗೋಲು, ಪೆಟ್ರೋಲು
ಯಾರಿಗೇನು ಕಡಿಮೆಯಿಲ್ಲದ ಸವಾಲು.
ಒಂದು ಒಳ್ಳೆ ಮಾತು ಕಿವಿಗೊಟ್ಟು ಕೇಳಿ
ಹೇಗೆ ಬಂದೆಯೋ ಹಾಗೆ
ಸದ್ದಿಲ್ಲದೆ ಹಿಂದಿರುಗು
ಇದ್ದಾರಿಲ್ಲಿ ನಯವಂಚಕರು
ಗೋಮುಖ ವ್ಯಾಘ್ರರು, ದೇಶದ್ರೋಹಿಗಳು
ಮಾಡಬಾರದ್ದು ಮಾಡಿ ಗೂಬೆ ಕೂರಿಸುತ್ತಾರೆ.
ರಾಜಕೀಯ ಚದುರಂಗದಾಟಕ್ಕೆಳೆದು
ಕೋಮುಗಲಭೆಯ ಹೆಸರಲ್ಲಿ.
ಮುಗ್ಧ ಜನರ ಮಾರಣಹೋಮ
ಬೆಲೆಗಳ ಗಗನಕ್ಕೇರಿಸಿ
ಬಂಡವಾಳ ಬರಿದಾಗಿಸಿ
ಬಡವರ ಆತ್ಮಹತ್ಯೆಯ ಹುನ್ನಾರ
ಹಣ್ಣು ತಿಂದು ಸಿಪ್ಪೆ ಎಸೆವರು
ನನಗೇನು ನಿನಗೆ ಕೆಟ್ಟ ಹೆಸರು
ಅಯ್ಯೋ ಪಾಪ ಬಂದಿದ್ದೀಯಾ
ಇದ್ದುಬಿಡು ಇಷ್ಟ ಮಿತ್ರನಂತೆ
ದಾಖಲೆಯಾಗಲಿ ಸವಿನೆನಪಗಳು
ಶಾಶ್ವತವಾಗಲಿ ಹೆಜ್ಜೆ ಗುರುತುಗಳು
ಮನುಕುಲ ಹಾಡಿ ಹೊಗಳಲಿ
ಸ್ಮರಿಸಲಿ ನಿನ್ನ ಔದಾರ್ಯ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...