Home / ಕವನ / ಕವಿತೆ / ಉಪದೇಶ

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ
ಇನ್ನೇಕೆ ಮೀನಮೇಷ.
ಮೂರು ಬಿಟ್ಟು ನಿಂತಿರುವ ಅಭ್ಯಾಗತ
ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ
ನಿನ್ನದೇನು ಹೆಚ್ಚುಗಾರಿಕೆ
ಅರವತ್ತರಲ್ಲಿ ನೀನು ಒಬ್ಬ.
ಹೊಸ ವೇಷ ಹಳೆ ಹೆಸರು
ಬರಿಗೈಯಲ್ಲಿ ಬಂದಿರುವೆಯಾ ಹೇಗೆ?
ಏನೇನು ತಂದಿರುವೆ ಕೊಡುಗೈದಾನಿ
ಇದೇನಿದು ಉಂಡೆಗಾತ್ರ ಬೆಲ್ಲ
ಬೆಟ್ಟದಷ್ಟು ಬೇವು.
ಕೈಯಲ್ಲಿ ಕಡೆಗೋಲು, ಪೆಟ್ರೋಲು
ಯಾರಿಗೇನು ಕಡಿಮೆಯಿಲ್ಲದ ಸವಾಲು.
ಒಂದು ಒಳ್ಳೆ ಮಾತು ಕಿವಿಗೊಟ್ಟು ಕೇಳಿ
ಹೇಗೆ ಬಂದೆಯೋ ಹಾಗೆ
ಸದ್ದಿಲ್ಲದೆ ಹಿಂದಿರುಗು
ಇದ್ದಾರಿಲ್ಲಿ ನಯವಂಚಕರು
ಗೋಮುಖ ವ್ಯಾಘ್ರರು, ದೇಶದ್ರೋಹಿಗಳು
ಮಾಡಬಾರದ್ದು ಮಾಡಿ ಗೂಬೆ ಕೂರಿಸುತ್ತಾರೆ.
ರಾಜಕೀಯ ಚದುರಂಗದಾಟಕ್ಕೆಳೆದು
ಕೋಮುಗಲಭೆಯ ಹೆಸರಲ್ಲಿ.
ಮುಗ್ಧ ಜನರ ಮಾರಣಹೋಮ
ಬೆಲೆಗಳ ಗಗನಕ್ಕೇರಿಸಿ
ಬಂಡವಾಳ ಬರಿದಾಗಿಸಿ
ಬಡವರ ಆತ್ಮಹತ್ಯೆಯ ಹುನ್ನಾರ
ಹಣ್ಣು ತಿಂದು ಸಿಪ್ಪೆ ಎಸೆವರು
ನನಗೇನು ನಿನಗೆ ಕೆಟ್ಟ ಹೆಸರು
ಅಯ್ಯೋ ಪಾಪ ಬಂದಿದ್ದೀಯಾ
ಇದ್ದುಬಿಡು ಇಷ್ಟ ಮಿತ್ರನಂತೆ
ದಾಖಲೆಯಾಗಲಿ ಸವಿನೆನಪಗಳು
ಶಾಶ್ವತವಾಗಲಿ ಹೆಜ್ಜೆ ಗುರುತುಗಳು
ಮನುಕುಲ ಹಾಡಿ ಹೊಗಳಲಿ
ಸ್ಮರಿಸಲಿ ನಿನ್ನ ಔದಾರ್ಯ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...