Home / ಕವನ / ಕವಿತೆ / ಉಪದೇಶ

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ
ಇನ್ನೇಕೆ ಮೀನಮೇಷ.
ಮೂರು ಬಿಟ್ಟು ನಿಂತಿರುವ ಅಭ್ಯಾಗತ
ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ
ನಿನ್ನದೇನು ಹೆಚ್ಚುಗಾರಿಕೆ
ಅರವತ್ತರಲ್ಲಿ ನೀನು ಒಬ್ಬ.
ಹೊಸ ವೇಷ ಹಳೆ ಹೆಸರು
ಬರಿಗೈಯಲ್ಲಿ ಬಂದಿರುವೆಯಾ ಹೇಗೆ?
ಏನೇನು ತಂದಿರುವೆ ಕೊಡುಗೈದಾನಿ
ಇದೇನಿದು ಉಂಡೆಗಾತ್ರ ಬೆಲ್ಲ
ಬೆಟ್ಟದಷ್ಟು ಬೇವು.
ಕೈಯಲ್ಲಿ ಕಡೆಗೋಲು, ಪೆಟ್ರೋಲು
ಯಾರಿಗೇನು ಕಡಿಮೆಯಿಲ್ಲದ ಸವಾಲು.
ಒಂದು ಒಳ್ಳೆ ಮಾತು ಕಿವಿಗೊಟ್ಟು ಕೇಳಿ
ಹೇಗೆ ಬಂದೆಯೋ ಹಾಗೆ
ಸದ್ದಿಲ್ಲದೆ ಹಿಂದಿರುಗು
ಇದ್ದಾರಿಲ್ಲಿ ನಯವಂಚಕರು
ಗೋಮುಖ ವ್ಯಾಘ್ರರು, ದೇಶದ್ರೋಹಿಗಳು
ಮಾಡಬಾರದ್ದು ಮಾಡಿ ಗೂಬೆ ಕೂರಿಸುತ್ತಾರೆ.
ರಾಜಕೀಯ ಚದುರಂಗದಾಟಕ್ಕೆಳೆದು
ಕೋಮುಗಲಭೆಯ ಹೆಸರಲ್ಲಿ.
ಮುಗ್ಧ ಜನರ ಮಾರಣಹೋಮ
ಬೆಲೆಗಳ ಗಗನಕ್ಕೇರಿಸಿ
ಬಂಡವಾಳ ಬರಿದಾಗಿಸಿ
ಬಡವರ ಆತ್ಮಹತ್ಯೆಯ ಹುನ್ನಾರ
ಹಣ್ಣು ತಿಂದು ಸಿಪ್ಪೆ ಎಸೆವರು
ನನಗೇನು ನಿನಗೆ ಕೆಟ್ಟ ಹೆಸರು
ಅಯ್ಯೋ ಪಾಪ ಬಂದಿದ್ದೀಯಾ
ಇದ್ದುಬಿಡು ಇಷ್ಟ ಮಿತ್ರನಂತೆ
ದಾಖಲೆಯಾಗಲಿ ಸವಿನೆನಪಗಳು
ಶಾಶ್ವತವಾಗಲಿ ಹೆಜ್ಜೆ ಗುರುತುಗಳು
ಮನುಕುಲ ಹಾಡಿ ಹೊಗಳಲಿ
ಸ್ಮರಿಸಲಿ ನಿನ್ನ ಔದಾರ್ಯ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...