ಆರತಿಯನೆತ್ತೀರೆ ಗಿಣಿನತ್ತು ಗರತೇರೆ

ಆರತಿಯನೆತ್ತೀರೆ ಗಿಣಿನತ್ತು ಗರತೇರೆ
ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ
ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ
ಗಾನಗಂಗಾಧರಗೆ ಜಯವೆನ್ನಿರೆ

ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ
ಆರು ಚಕ್ರದ ಕಮಲ ಶುಭವೆನ್ನಿರೆ
ನೀತಿ ನಿಜಗುಣ ಗೆಜ್ಜೆ ಹೆಜ್ಜೀಯ ಹಾಕೀರೆ
ಅಂತರಂಗದ ಭಜನಿ ಜಯವೆನ್ನಿರೆ

ಚಿತ್ತ ಮುತ್ತಿನ ಕಳಸಾ ಮನವು ಮಲ್ಲಿಗಿ ಸರಸಾ
ಚಿತ್ತಜನ ಸುಟ್ಹಾಕಿ ಶಿವನೆನ್ನೀರೆ
ಜನುಮ ಜನುಮದ ಗಂಡಾ ಕೋಟಿ ಆತ್ಮರ ಗಂಡಾ
ಪಾರಮಾರ್ಥದ ಗಂಡಾ ಜಯವೆನ್ನಿರೆ

ಹರಕು ಕಂಬಳಿ ಸುಟ್ಟು ಮುರುಕು ಗೊಂಗಡಿ ಬಿಟ್ಟು
ಆರು ಸರ್ಪನ ಮೆಟ್ಟಿ ಗೆಲುವೆನ್ನೀರೆ
ಚರ್ಮ ಜೋಳಿಗಿ ಸಾಕು ಹರನ ಹೋಳಿಗಿ ಬೇಕು
ನಗುಮುಖದ ರಾಣೇರೆ ಗುರುವೆನ್ನೀರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪದೇಶ
Next post ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…