ಆರತಿಯನೆತ್ತೀರೆ ಗಿಣಿನತ್ತು ಗರತೇರೆ

ಆರತಿಯನೆತ್ತೀರೆ ಗಿಣಿನತ್ತು ಗರತೇರೆ
ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ
ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ
ಗಾನಗಂಗಾಧರಗೆ ಜಯವೆನ್ನಿರೆ

ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ
ಆರು ಚಕ್ರದ ಕಮಲ ಶುಭವೆನ್ನಿರೆ
ನೀತಿ ನಿಜಗುಣ ಗೆಜ್ಜೆ ಹೆಜ್ಜೀಯ ಹಾಕೀರೆ
ಅಂತರಂಗದ ಭಜನಿ ಜಯವೆನ್ನಿರೆ

ಚಿತ್ತ ಮುತ್ತಿನ ಕಳಸಾ ಮನವು ಮಲ್ಲಿಗಿ ಸರಸಾ
ಚಿತ್ತಜನ ಸುಟ್ಹಾಕಿ ಶಿವನೆನ್ನೀರೆ
ಜನುಮ ಜನುಮದ ಗಂಡಾ ಕೋಟಿ ಆತ್ಮರ ಗಂಡಾ
ಪಾರಮಾರ್ಥದ ಗಂಡಾ ಜಯವೆನ್ನಿರೆ

ಹರಕು ಕಂಬಳಿ ಸುಟ್ಟು ಮುರುಕು ಗೊಂಗಡಿ ಬಿಟ್ಟು
ಆರು ಸರ್ಪನ ಮೆಟ್ಟಿ ಗೆಲುವೆನ್ನೀರೆ
ಚರ್ಮ ಜೋಳಿಗಿ ಸಾಕು ಹರನ ಹೋಳಿಗಿ ಬೇಕು
ನಗುಮುಖದ ರಾಣೇರೆ ಗುರುವೆನ್ನೀರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪದೇಶ
Next post ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys