Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಈ ನೋವಿನ ಬದುಕಿನಲ್ಲಿ
ಬರೀ ಬುದ್ಧಿಯ ವಿಚಾರಗಳಿಂದ
ಉಪಯೋಗವಿಲ್ಲ ದೇವರೇ ಈ
ಮೂಳೆಯೊಳಗೆ ಇಳಿಯುವ,
ಹಲ್ಲು ಉದುರಿಸುವ ಚಳಿಯಿಂದ ನನಗೆ
ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ
ಹೊದೆಯಬೇಕಾಗಿದೆ.

ಒಂದು ಮಧುರ ಹಾಡು ಮತ್ತೆ
ಮಬ್ಬಾದ ಚಿಕ್ಕಿಗಳ ಹೊಳಪು
ಈ ಜಗದ ಹುಚ್ಚರ ಸಂತೆಯಲಿ ಸಂತನಂತೆ
ನಿಲ್ಲುವ ಮಹಾ ಮೋಹಿಯ ಕಡು ಬಡತನದ
ಕಡಲಗಾಳಿ ಎದುರಿಸುವ, ಚಡಪಡಿಕೆಯ ಮುಪ್ಪು
ಸಾವರಿಸುವ ಶಕ್ತಿ ನೀ ನನ್ನೊಳಗೆ ತುಂಬಬೇಕಾಗಿದೆ.

ನಿಕೃಷ್ಟವಾದ ಬೌದ್ಧಿಕ ದ್ವೇಷ ಒಳಸುಳಿ
ರೋಷ ತುಂಬಿದ ಬಿರುನುಡಿ, ಜಂಜಡದ
ಗುದ್ದುಗಳು, ನನಗೆ ತಾಕದಂತೆ ಮತ್ತೆ
ಮಾಯದ ಗಾಯಗಳು ಕೀವು ತುಂಬದಂತೆ
ಹಸಿರು ಮರದಲ್ಲಿ ಪುಟ್ಟ ಹಕ್ಕಿಗಳ ಕಾಪಾಡಿದಂತೆ

ನನ್ನ ಮನಸ್ಸಿನಲಿ ಮಗುವಿನ ಮುಗ್ಧತೆ
ನೀ ಅರಳಿಸಬೇಕಾಗಿದೆ.

ಕೊನೆಗೆ ಹಿತವಾಗಿ ನಿನ್ನ ತಣ್ಣನೆಯ ಕೈಗಳು
ಕಣ್ಣುಗಳು ಮುಚ್ಚಲಿ, ಮತ್ತೆ ನನ್ನ ಈ ಪುಟ್ಟ
ಮನೆಯ ಚಾಪೆಯಲಿ ಮಲಗಿದಾಗಲೇ ಆ
ಪುರುಷ ಸಾವು ತಬ್ಬಲಿ, ಹೃದಯ ಅರಳಿದ
ಹಗುರ ಭಾವದಲಿ ನಾ ನೀಲಿ ಆಕಾಶಕ್ಕೆ
ನಿನ್ನ ಜೊತೆಗೂಡಿ ಹಾರಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...