Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಈ ನೋವಿನ ಬದುಕಿನಲ್ಲಿ
ಬರೀ ಬುದ್ಧಿಯ ವಿಚಾರಗಳಿಂದ
ಉಪಯೋಗವಿಲ್ಲ ದೇವರೇ ಈ
ಮೂಳೆಯೊಳಗೆ ಇಳಿಯುವ,
ಹಲ್ಲು ಉದುರಿಸುವ ಚಳಿಯಿಂದ ನನಗೆ
ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ
ಹೊದೆಯಬೇಕಾಗಿದೆ.

ಒಂದು ಮಧುರ ಹಾಡು ಮತ್ತೆ
ಮಬ್ಬಾದ ಚಿಕ್ಕಿಗಳ ಹೊಳಪು
ಈ ಜಗದ ಹುಚ್ಚರ ಸಂತೆಯಲಿ ಸಂತನಂತೆ
ನಿಲ್ಲುವ ಮಹಾ ಮೋಹಿಯ ಕಡು ಬಡತನದ
ಕಡಲಗಾಳಿ ಎದುರಿಸುವ, ಚಡಪಡಿಕೆಯ ಮುಪ್ಪು
ಸಾವರಿಸುವ ಶಕ್ತಿ ನೀ ನನ್ನೊಳಗೆ ತುಂಬಬೇಕಾಗಿದೆ.

ನಿಕೃಷ್ಟವಾದ ಬೌದ್ಧಿಕ ದ್ವೇಷ ಒಳಸುಳಿ
ರೋಷ ತುಂಬಿದ ಬಿರುನುಡಿ, ಜಂಜಡದ
ಗುದ್ದುಗಳು, ನನಗೆ ತಾಕದಂತೆ ಮತ್ತೆ
ಮಾಯದ ಗಾಯಗಳು ಕೀವು ತುಂಬದಂತೆ
ಹಸಿರು ಮರದಲ್ಲಿ ಪುಟ್ಟ ಹಕ್ಕಿಗಳ ಕಾಪಾಡಿದಂತೆ

ನನ್ನ ಮನಸ್ಸಿನಲಿ ಮಗುವಿನ ಮುಗ್ಧತೆ
ನೀ ಅರಳಿಸಬೇಕಾಗಿದೆ.

ಕೊನೆಗೆ ಹಿತವಾಗಿ ನಿನ್ನ ತಣ್ಣನೆಯ ಕೈಗಳು
ಕಣ್ಣುಗಳು ಮುಚ್ಚಲಿ, ಮತ್ತೆ ನನ್ನ ಈ ಪುಟ್ಟ
ಮನೆಯ ಚಾಪೆಯಲಿ ಮಲಗಿದಾಗಲೇ ಆ
ಪುರುಷ ಸಾವು ತಬ್ಬಲಿ, ಹೃದಯ ಅರಳಿದ
ಹಗುರ ಭಾವದಲಿ ನಾ ನೀಲಿ ಆಕಾಶಕ್ಕೆ
ನಿನ್ನ ಜೊತೆಗೂಡಿ ಹಾರಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...