Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಈ ನೋವಿನ ಬದುಕಿನಲ್ಲಿ
ಬರೀ ಬುದ್ಧಿಯ ವಿಚಾರಗಳಿಂದ
ಉಪಯೋಗವಿಲ್ಲ ದೇವರೇ ಈ
ಮೂಳೆಯೊಳಗೆ ಇಳಿಯುವ,
ಹಲ್ಲು ಉದುರಿಸುವ ಚಳಿಯಿಂದ ನನಗೆ
ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ
ಹೊದೆಯಬೇಕಾಗಿದೆ.

ಒಂದು ಮಧುರ ಹಾಡು ಮತ್ತೆ
ಮಬ್ಬಾದ ಚಿಕ್ಕಿಗಳ ಹೊಳಪು
ಈ ಜಗದ ಹುಚ್ಚರ ಸಂತೆಯಲಿ ಸಂತನಂತೆ
ನಿಲ್ಲುವ ಮಹಾ ಮೋಹಿಯ ಕಡು ಬಡತನದ
ಕಡಲಗಾಳಿ ಎದುರಿಸುವ, ಚಡಪಡಿಕೆಯ ಮುಪ್ಪು
ಸಾವರಿಸುವ ಶಕ್ತಿ ನೀ ನನ್ನೊಳಗೆ ತುಂಬಬೇಕಾಗಿದೆ.

ನಿಕೃಷ್ಟವಾದ ಬೌದ್ಧಿಕ ದ್ವೇಷ ಒಳಸುಳಿ
ರೋಷ ತುಂಬಿದ ಬಿರುನುಡಿ, ಜಂಜಡದ
ಗುದ್ದುಗಳು, ನನಗೆ ತಾಕದಂತೆ ಮತ್ತೆ
ಮಾಯದ ಗಾಯಗಳು ಕೀವು ತುಂಬದಂತೆ
ಹಸಿರು ಮರದಲ್ಲಿ ಪುಟ್ಟ ಹಕ್ಕಿಗಳ ಕಾಪಾಡಿದಂತೆ

ನನ್ನ ಮನಸ್ಸಿನಲಿ ಮಗುವಿನ ಮುಗ್ಧತೆ
ನೀ ಅರಳಿಸಬೇಕಾಗಿದೆ.

ಕೊನೆಗೆ ಹಿತವಾಗಿ ನಿನ್ನ ತಣ್ಣನೆಯ ಕೈಗಳು
ಕಣ್ಣುಗಳು ಮುಚ್ಚಲಿ, ಮತ್ತೆ ನನ್ನ ಈ ಪುಟ್ಟ
ಮನೆಯ ಚಾಪೆಯಲಿ ಮಲಗಿದಾಗಲೇ ಆ
ಪುರುಷ ಸಾವು ತಬ್ಬಲಿ, ಹೃದಯ ಅರಳಿದ
ಹಗುರ ಭಾವದಲಿ ನಾ ನೀಲಿ ಆಕಾಶಕ್ಕೆ
ನಿನ್ನ ಜೊತೆಗೂಡಿ ಹಾರಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...