ಪ್ರಾರ್ಥನೆ

ಈ ನೋವಿನ ಬದುಕಿನಲ್ಲಿ
ಬರೀ ಬುದ್ಧಿಯ ವಿಚಾರಗಳಿಂದ
ಉಪಯೋಗವಿಲ್ಲ ದೇವರೇ ಈ
ಮೂಳೆಯೊಳಗೆ ಇಳಿಯುವ,
ಹಲ್ಲು ಉದುರಿಸುವ ಚಳಿಯಿಂದ ನನಗೆ
ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ
ಹೊದೆಯಬೇಕಾಗಿದೆ.

ಒಂದು ಮಧುರ ಹಾಡು ಮತ್ತೆ
ಮಬ್ಬಾದ ಚಿಕ್ಕಿಗಳ ಹೊಳಪು
ಈ ಜಗದ ಹುಚ್ಚರ ಸಂತೆಯಲಿ ಸಂತನಂತೆ
ನಿಲ್ಲುವ ಮಹಾ ಮೋಹಿಯ ಕಡು ಬಡತನದ
ಕಡಲಗಾಳಿ ಎದುರಿಸುವ, ಚಡಪಡಿಕೆಯ ಮುಪ್ಪು
ಸಾವರಿಸುವ ಶಕ್ತಿ ನೀ ನನ್ನೊಳಗೆ ತುಂಬಬೇಕಾಗಿದೆ.

ನಿಕೃಷ್ಟವಾದ ಬೌದ್ಧಿಕ ದ್ವೇಷ ಒಳಸುಳಿ
ರೋಷ ತುಂಬಿದ ಬಿರುನುಡಿ, ಜಂಜಡದ
ಗುದ್ದುಗಳು, ನನಗೆ ತಾಕದಂತೆ ಮತ್ತೆ
ಮಾಯದ ಗಾಯಗಳು ಕೀವು ತುಂಬದಂತೆ
ಹಸಿರು ಮರದಲ್ಲಿ ಪುಟ್ಟ ಹಕ್ಕಿಗಳ ಕಾಪಾಡಿದಂತೆ

ನನ್ನ ಮನಸ್ಸಿನಲಿ ಮಗುವಿನ ಮುಗ್ಧತೆ
ನೀ ಅರಳಿಸಬೇಕಾಗಿದೆ.

ಕೊನೆಗೆ ಹಿತವಾಗಿ ನಿನ್ನ ತಣ್ಣನೆಯ ಕೈಗಳು
ಕಣ್ಣುಗಳು ಮುಚ್ಚಲಿ, ಮತ್ತೆ ನನ್ನ ಈ ಪುಟ್ಟ
ಮನೆಯ ಚಾಪೆಯಲಿ ಮಲಗಿದಾಗಲೇ ಆ
ಪುರುಷ ಸಾವು ತಬ್ಬಲಿ, ಹೃದಯ ಅರಳಿದ
ಹಗುರ ಭಾವದಲಿ ನಾ ನೀಲಿ ಆಕಾಶಕ್ಕೆ
ನಿನ್ನ ಜೊತೆಗೂಡಿ ಹಾರಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಬಾವುಟ
Next post ಪಾಂಡುವಿನ ಪ್ರಯಾಣ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…