ಲಾಂಛನ

ಮುಂಜಾನೆ ಸೂರ್ಯನ ಕಿರಣಗಳು ಸೋಕಿ
ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು.
ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು
ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ
ಗಳಿಗೆಗಳು.

ನಂಬಿಕೆಗಳು ಊರತುಂಬ ಹರಡಿದ ಗಾಳಿ.
ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿದು
ಹೋಗಿದೆ. ಹೆಪ್ಪುಗಟ್ಟಿದ ಕಾಲವನ್ನು ಹುರಿಗೊಳಿಸುವ
ನಡೆದು ಹೋಗುವನ ಬೆರಳಿಗೆ ತಾಗಿದ ನೆಲದ ನಿಧಾನ.

ಮನಸ್ಸಿನ ದೇವರು ಪ್ರಜ್ಞೆಯ ಇಂದ್ರೀಯ ಸುಖ,
ಅವರು ಬಿಟ್ಟು ಇವರ್ಯಾರು ವೈರುದ್ಯಗಳ ಮಧ್ಯೆ.
ದಹಿಸುವ ವಿಶ್ವ ಚೇತನ ಕಾವ್ಯದ ಧಾರೆ,
ಸಾವನ್ನು ಹೆಲ್ಲುವ ಹವಣಿಕೆಯ ಹಣತೆಯ ಬೆಳಕು.

ಕನ್ನಡಿಯಲಿ ಕಂಡ ಮುಖ ಸಮೂಹದಲಿ ತೇಲಿ
ಬೀದಿ ಬೀದಿಯಲ್ಲಿ ರಂಪರಾಟಗಳು ಅರಳಿ
ಕಂಡ ಮನಸ್ಸುಗಳ ಕಿಡಿಗೇಡಿತನ ತಿರುವುಗಳು,
ಒಳಗೊಳಗೆ ಇಳಿದ ಬೆಲ್ಲದ ಗಟ್ಟಿಪಾಕ ಸತ್ಯಗಳು.

`ನಾಜೂಕಿನ ಕ್ಷಣಗಳು ಬಯಲಲಿ ಕರಗಿ ಮತ್ತೆ
ಬಿಳಿ ಮೋಡಗಳು ನೀಲಿ ಆಕಾಶದಲಿ ತೇಲಿ ಮತ್ತೆ
ಬೆಳಕಿನ ಕತ್ತಲಿನ ಪಲ್ಲಟಗಳು, ಸುರಿ ಮಳೆಯಲಿ
ಅವ್ವ ಹಚ್ಚಿಟ್ಟ ಕಂದೀಲು ವರ್ಣದ ಹೊಂಗಿರಣ ಸೂಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಕರುಣೆ
Next post ತುತ್ತೂರಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…