ಲಾಂಛನ

ಮುಂಜಾನೆ ಸೂರ್ಯನ ಕಿರಣಗಳು ಸೋಕಿ
ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು.
ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು
ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ
ಗಳಿಗೆಗಳು.

ನಂಬಿಕೆಗಳು ಊರತುಂಬ ಹರಡಿದ ಗಾಳಿ.
ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿದು
ಹೋಗಿದೆ. ಹೆಪ್ಪುಗಟ್ಟಿದ ಕಾಲವನ್ನು ಹುರಿಗೊಳಿಸುವ
ನಡೆದು ಹೋಗುವನ ಬೆರಳಿಗೆ ತಾಗಿದ ನೆಲದ ನಿಧಾನ.

ಮನಸ್ಸಿನ ದೇವರು ಪ್ರಜ್ಞೆಯ ಇಂದ್ರೀಯ ಸುಖ,
ಅವರು ಬಿಟ್ಟು ಇವರ್ಯಾರು ವೈರುದ್ಯಗಳ ಮಧ್ಯೆ.
ದಹಿಸುವ ವಿಶ್ವ ಚೇತನ ಕಾವ್ಯದ ಧಾರೆ,
ಸಾವನ್ನು ಹೆಲ್ಲುವ ಹವಣಿಕೆಯ ಹಣತೆಯ ಬೆಳಕು.

ಕನ್ನಡಿಯಲಿ ಕಂಡ ಮುಖ ಸಮೂಹದಲಿ ತೇಲಿ
ಬೀದಿ ಬೀದಿಯಲ್ಲಿ ರಂಪರಾಟಗಳು ಅರಳಿ
ಕಂಡ ಮನಸ್ಸುಗಳ ಕಿಡಿಗೇಡಿತನ ತಿರುವುಗಳು,
ಒಳಗೊಳಗೆ ಇಳಿದ ಬೆಲ್ಲದ ಗಟ್ಟಿಪಾಕ ಸತ್ಯಗಳು.

`ನಾಜೂಕಿನ ಕ್ಷಣಗಳು ಬಯಲಲಿ ಕರಗಿ ಮತ್ತೆ
ಬಿಳಿ ಮೋಡಗಳು ನೀಲಿ ಆಕಾಶದಲಿ ತೇಲಿ ಮತ್ತೆ
ಬೆಳಕಿನ ಕತ್ತಲಿನ ಪಲ್ಲಟಗಳು, ಸುರಿ ಮಳೆಯಲಿ
ಅವ್ವ ಹಚ್ಚಿಟ್ಟ ಕಂದೀಲು ವರ್ಣದ ಹೊಂಗಿರಣ ಸೂಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಕರುಣೆ
Next post ತುತ್ತೂರಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys