ತುತ್ತೂರಿ

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ
ಅನಂತಾನಂದಮಯಮಾಕಾಶ!
ಗಿರಿಗಹ್ವಕರಗಳಾಚೆಯಲಿ ಗಗನದಲಿ
ತೇಲಿ ತಿರುಗುತಿಹ ಗಿಳಿವಿಂಡು!
ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ-
ಲೋದಯದ ಸುಮಂಗಲ ಪಾಡಿ
ಕುಲುನಗೆಯ ಕುಸುಮಗಳ ಮೂಸಿ
ಮುತ್ತಿಟ್ಟು ಮಧುವನೀಂಟುತಿಹ
ತುಂಬಿಗಳು! ಏನಿದಚ್ಚರಿಯಮಮ!
ಕೊನೆಯಿಲ್ಲದಾನಂದಮಯ ಕಡಲು!
ನಭೋಮಂಡಲದಾಚೆಯಲಿ ಏನೊ
ದನಿಯೊಂದು ಕೇಳುತಿದೆ. ಹೃದಯ-
ವನೆ ಕುಲುಕಿ ಚೈತನ್ಯಕನುಮಾಡಿ
ಕೊಡುತಲಿದೆಯೆನ್ನ ತನುವಿನಾಣು
ಪರಮಾಣುಗಳಲಿ ಸ್ಫೂರ್ತಿ ಸ್ಫುಟ-
ಗೊಂಡು ಚಿಮ್ಮುತಿದೆ; ಹೊರಹೊಮ್ಮುತಿದೆ!
ಮಲಗಿ ನಿದ್ರಿಸುವ ಮುಖಹೀನರನು
ಬಡಿದೆಬ್ಬಿಸುವ ಜವ್ವನುಡಿಸುತ್ತಿದೆ!
ನನ್ನನೆಚ್ಚರಿಸುತಿಹ ದನಿಯದಾವದು?
ಅದುವೆ ಹೊಸಯುಗದ ಹೊಸದಿನದ
ಹೊಸದನಿಯ ಹೊಸ ತುತ್ತೂರಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಂಛನ
Next post ವಚನ ವಿಚಾರ – ಕೊಡುವ ಆಸೆಯೂ ಇಲ್ಲ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys