ಅರುಂಧತಿ ನಕ್ಷತ್ರ

ಅರುಂಧತಿ ಅಪ್ಪನಿಗೆ ತಕ್ಕ ಮಗಳು
ತೋರಿದ ದಾರಿಗುಂಟ ಮೌನವಾಗಿ
ನಡೆದಳು ಹಡೆದಳು ಹತ್ತು ಪುತ್ರರ
ವಶಿಷ್ಠರ ಆಶ್ರಮದಲ್ಲಿ ಕಾಮಧೇನು ಹಾಲು.

ಪತಿಯ ಮಾತು ಚಾಚೂ ತಪ್ಪದ
ಅವಳ ನಡುಗೆ ಮಹಾಮನೆ ನಿರ್ಮಿಸಿ
ಬಯಲ ತುಂಬ ಹೂ ಹಣ್ಣು, ಹಸಿರು
ತಾಯಿ ಒಡಲ ಕರೆಯ ನಾದ ಹೊಮ್ಮಿಸಿದಳು.

ತಪದ ತಾಪದ ಗಂಡ. ಮುನಿದರೆ ಎಂಬ
ಆತಂಕದ ಅವಳ ನಡುಗೆ, ಮೌನ ಪಾಠ
ಅವನೆದೆ ಕರಗಿ ಒಲವಿನ ದಾಂಪತ್ಯ
ಅವನಲ್ಲಿ ಅವಳು ಒಂದಾಗಿ ಬಿಂದುವಾದಳು.

ನಯ ನಾಜೂಕಿನ ನಾರುಮಡಿ ಉಟ್ಟು
ಗಾಂಭಿರ್ಯದ ನಡುಗೆ, ಅಂತರಂಗದ
ಮೃದಂಗದ ಕಲರವ, ಬಲ್ಲವರಿಗೆಲ್ಲಾ ಮಹಾ
ತಾಯಿ ಹೆತ್ತಳು ಹತ್ತು ಮಕ್ಕಳ ಮನೆತುಂಬ.

ಕಲ್ಲು ತುಣುಕಗಳ ಹಣ್ಣು ಹಂಪಲ ಮಾಡಿ
ಋಷಿ ಮುನಿಗಳಿಗೆ ಉಣ್ಣಲು ಕೊಟ್ಟ
ಸರಳ ಸುಂದರ ಮನಸ್ಸು, ದೇವತೆಗಳು
ಏನೂ ಬೇಸಲಿಲ್ಲ. ಸಾಫಲ್ಯ ದಾಂಪತ್ಯದ
ಚಿಕ್ಕಿಯಾಗಿ ಮುಗಿಲೇರಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದಯರವಿ
Next post ಬೇಂದ್ರೆ ಯವರ ‘ಗರಿ’

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys