Home / ಕವನ / ಕವಿತೆ / ಸ್ವಪ್ನದ ದೋಣಿ

ಸ್ವಪ್ನದ ದೋಣಿ

ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು
ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ
ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು
ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ
ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ
ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮತ್ತೆ
ಮೌನ ಸಂಜೆಯಲಿ ಅವನ ನೆನಪುಗಳು ನೆತ್ತಿಗೆ
ಸವರಿ ಬೆಳ್ಳಕ್ಕಿಗಳು ಹಾರಿ ಹೋಗಿವೆ ತಿಳಿಸಂಜೆ.

ಪುಟ್ಟ ಹಕ್ಕಿಗಳ ಗೂಡು ಹಾಡು, ಕಡಲ
ಅಲೆ ಅಲೆಯ ಪ್ರತಿಬಿಂಬಿಸಿ, ಚಿಪ್ಪಿನಲ್ಲಿ ಅರಳಿತು ಮುತ್ತು.
ತೆಂಗಿನ ಗರಿಯ ಸಂದಿಯಿಂದ ಚೌತಿ ಚಂದ್ರಮ
ಇಣುಕಿ ಸ್ಪರ್ಶಿಸಿದೆ ಪ್ರಣಯ ಜೋಡಿಗಳ, ಹೊಸ
ವಾರ್ತೆ ನಾಳೆಗೆ ಅಚ್ಚಾಗಲು ಸಿದ್ಧವಾಗಿದೆ. ಜಾರಿದೆ
ಕಚಗುಳಿ ಇಟ್ಟ ಸೂರ್ಯ ಕಿರಣಗಳು, ರಾತ್ರಿಯ
ಕಪ್ಪು ಪರದೆಯ ತುಂಬ ಚಲನ ಚಿತ್ರಗಳ ರೀಲು.
ಆಗಸದಲ್ಲಿ ಹರಡಿವೆ ಅವನ ಕಣ್ಣುಗಳ ಮಿನುಗು.

ಹೂಗಳ ಸುವಾಸನೆ ಹೀರಿದ ಹಕ್ಕಿಗಳು ಹಾಡು
ತೊಟ್ಟಿಲು ತೂಗುತ್ತಿದ್ದಾಳೆ ತಾಯಿ. ತೊನೆ ಹಾಲು ತುಂಬಿ
ಎದೆಯ ಭಾವಕೆ ಬೇರುಗಳಲಿ ಇಳಿದ ತಂಪು ಲಾಲಿ.
ಕತ್ತಲೆಯ ರಾತ್ರಿಯಲ್ಲಿ ಹೊಸ ಬೆಳಕಿನ ಜಾಡು,
ಹಿಡಿದು ಕಾಲ ಮೈಲುಗಳು ಬಳಸಿ, ಪಯಣ
ಹೊರಟಿದೆ. ಹೆದ್ದಾರಿ ತುಂಬ ಕಪ್ಪು ನೆರಳುಗಳಾಟ.
ಜಗದ ಬೆಳಕಿಗೆ ಸೂರ್ಯ ಕಣ್ಣು ಮುಚ್ಚಿದ್ದಾನೆ.
ಪುಟ್ಟ ಮಗುವಿನ ಕೈಗಳು ಕೊರಳುಗಳ ತಬ್ಬಿವೆ.
ಏಕಾಂತ ಮೌನದಲಿ ಸುವಾಸನೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...