ನಾ ಕಂಡ ಸಂಗೀತ ಕಾರಂಜಿ

ನಾ ಕಂಡ ಸಂಗೀತ ಕಾರಂಜಿ

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿದೆ. ನಮ್ಮ ನೋವ ಮರೆಯಲಿಲ್ಲಿ ತಕ್ಕನಾಗಿದೆ.

ದಿನಾಂಕ ೦೮.೦೮.೨೦೧೫ ರಂದು ಶನಿವಾರದ ದಿನದಂದು ಜಗಮೋಹನ ಪ್ಯಾಲೇಸ್ ಸಭಾಭವನದಲ್ಲಿ ತಣ್ಣನೆಯ ಸಂಜೆಯಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ವಿಖ್ಯಾತಿ ಪ್ರಖ್ಯಾತಿಯ ಗಾಯಕಿಯರಾದ ರಂಜನಿ ಹಾಗೂ ಗಾಯತ್ರಿ ಇವರ ಸಂಗೀತ ಕಾರಂಜಿಗೆ ಜನರು ಸುಜನರಲ್ಲಿ ಕಿಕ್ಕಿರಿದು ಸೇರಿತ್ತು.

ಕೊನೆಯ ಸೀಟಿನಲ್ಲಿದ್ದೆ! ಸಂಗೀತ ಇಂಪೆನಿಸಲಿಲ್ಲವೆಂದರೆ ಎದ್ದು ಹೋಗಲು ಎಂದು. ಆದರೆ… ಕೇಳುತ್ತಾ ಕೇಳುತ್ತಾ ಭಲೇ ರಸಾನುಭೂತಿ ಕಲಗಿತು!

“ಹೂವಿನಿಂದ ನಾರು ಸ್ವರ್ಗ ಸೇರಿತು” ಎನ್ನುವಂತೆ ನನ್ನ ಮಡದಿ ಮಣಿ ವೆಂಕಟಲಕ್ಷ್ಮಿಯಿಂದ ಒಳ್ಳೆಯ ಸಂಗೀತ ಕಾರಂಜಿಗೆ ಬಂದಿದ್ದೆ. ಮೈಸೂರು ಮೈಸೂರಿನ ಜನರೇ ಹಾಗೆ ಮೈಸೂರು ಮಲ್ಲಿಗೆಯಾ ಹಾಗೇ… ಕರ್ನಾಟಕ ಶಾಸ್ತ್ರೀಯ ಗಾಯನ ಜನರ ಮನಸ್ಸು ತಣಿಸಿತು.

ಸಂಗೀತವೇ ಹಾಗೆ ಗೊತ್ತಿಲ್ಲದವರ ತಲೆದೂಗುವಂತೆ ಮಾಡುವ ಮೋಡಿ ಅದಕ್ಕಿದೆ!

ಅಲ್ಲಿ ಆರಂಭ ಶೂರತ್ವವಿರಲಿಲ್ಲ. ಪ್ರತಿಭೆ, ಉತ್ಪತ್ತಿ, ಸಾಧನೆ, ಏನೆಲ್ಲ ಅಲ್ಲಿ ಮೇಳೈಸಿತ್ತು. ಅವರು ಸಂಗೀತ ಶಾರದೆಯರಂತೆ ಜನರ ಸೂರೇಗೊಂಡರು.

ಅಬ್ಬಾ! “ಶ್ರೀ ಮಹಾ ಗಣಪತಿಂ ಭಜೇಹಂ” ಎಂದು ನಮ್ಮ ಮೈಸೂರು ಮಹಾರಾಜರ ಹಾಡನ್ನು ಹಾಡಿದ ರೀತಿ ಎಲ್ಲರಿಗೆ ಮೆಚ್ಚಿಗೆಯಾಯಿತು. ನಂತರ “ಓಂ ನಮೋ ಭಗವತೇ ವಾಸುದೇವಾಯ”, “ಯಾರೆ ರಂಗನ ಯಾರೆ ಕೃಷ್ಣನ” ಮೈಸೂರು ವಾಸುದೇವಾಚಾರ್‍ಯರ “ಭಜನಸೇಯರಾದ” ಶ್ಯಾಮಾಶಾಸ್ತ್ರಿಗಳ “ನನ್ನುಯ್ರೋವು ಲಲಿತ” ತ್ಯಾಗರಾಜರ “ಇಂತ ಸೌಖ್ಯಮನಿ ನೇ…” ಮುತ್ತಯ್ಯ ಭಾಗವತರ “ಶರವಣ ಭವ ಸಮಯಮಿದಿರಾ” ಪುರಂದರದಾಸರ “ಆದದ್ದೆಲ್ಲ ಒಳಿತೇ ಆಯಿತು” “ನಾಚತೆ ಆಯ ನಟಿಕಟ್ಗಿರಿಧರ್” “ಎಂಥಾ ಪುಣ್ಯವೇ ಗೋಪಿ”, “ವಿಕೋಬ ಸಂಗ ಸದಾ” ಇವೆಲ್ಲ ಕೇಳುಗರ ಮನದಲ್ಲಿ ರಸಸ್ವಾದನೆಯನ್ನುಂಟು ಮಾಡಿದವು.

ಸಂಗೀತ ಅದರಲ್ಲೂ ಇಂಥಾ ಸಾಧಕಿಯರಾದ ಇಂಥಾ ಗಾಯಕಿಯರು ಕೇಳುಗರ ಮನವನ್ನು ಗೆಲ್ಲಬಲ್ಲವರೆಂಬುದಕ್ಕೆ ಅಲ್ಲಿ ಕಿಕ್ಕಿರಿದು ನಿಂತು ಕೆಳಗೆ ಹೊರಗೆ ಬಾಗಿಲಲ್ಲಿ ಗುಂಪುಗುಂಪು ಕೇಳುತ್ತಿತ್ತು. ಜನರು ತಲೆದೂಗಿ ಖುಷಿಖುಷಿಯಲ್ಲಿ ಚಪ್ಪಾಳೆ ಹೊಡೆಯುತ್ತಿತ್ತು.

ಎಂದರೋ ಮಹಾನುಭವರು ಉತ್ಕೃಷ್ಟ ಸ್ಥಾಯಿಯಲ್ಲಿ ಸುಲಲಿತ ಸುಮಧುರ ಸೌಖ್ಯ ಭಾವ ಪೂರ್‍ವ ಮನೋಜ್ಞವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಪಂಕ್ತಿಯಲಿ ಇವರ ಹೆಸರುಗಳು ಬಹುಕಾಲ ಉಳಿಯುವುವು ಎಂದು ಮನದುಂಬಿ ಬರೆದಿರುವೆ. ಆದ್ದರಿಂದ ಪುಟಾಣಿಗಳೆ… ನೀವೂ ಸಂಗೀತ ಕಲಿಯುವತ್ತ ಆಸಕ್ತಿಯುಳ್ಳವರಾಗಿ ಎಂದು ಹರಸುವೆ. ಆಗಬಹುದೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಿ ರುಮ್ಮಾಲ ಸುತ್ತಿ
Next post ಹತ್ತವತಾರಗಳು ಆಗಿಹೋದರೂ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…