Home / ಲೇಖನ / ಇತರೆ / ನಾ ಕಂಡ ಸಂಗೀತ ಕಾರಂಜಿ

ನಾ ಕಂಡ ಸಂಗೀತ ಕಾರಂಜಿ

ನಾ ಮೊದಲು ಕಂಡಿದ್ದು- ಬೃಂದಾವನ ಗಾರ್ಡನ್‌ನ ಸಂಗೀತ ಕಾರಂಜಿಯನ್ನು ನಂತರ ಎದೆತುಂಬಿ ಹಾಡಿದೆನು… ಆ ನಂತರ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದಲ್ಲಿ- ದಸರಾ ಗೋಷ್ಠಿಗಳಲ್ಲಿ ಅಬ್ಬಾ! ಮೈಸೂರಿನಲ್ಲಿ ಮನೆಮನೆಗಳಲ್ಲಿ ಸಂಗೀತ ಕಾರಂಜಿ ಹರಿಯುತ್ತಿದೆ. ನಮ್ಮ ನೋವ ಮರೆಯಲಿಲ್ಲಿ ತಕ್ಕನಾಗಿದೆ.

ದಿನಾಂಕ ೦೮.೦೮.೨೦೧೫ ರಂದು ಶನಿವಾರದ ದಿನದಂದು ಜಗಮೋಹನ ಪ್ಯಾಲೇಸ್ ಸಭಾಭವನದಲ್ಲಿ ತಣ್ಣನೆಯ ಸಂಜೆಯಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ವಿಖ್ಯಾತಿ ಪ್ರಖ್ಯಾತಿಯ ಗಾಯಕಿಯರಾದ ರಂಜನಿ ಹಾಗೂ ಗಾಯತ್ರಿ ಇವರ ಸಂಗೀತ ಕಾರಂಜಿಗೆ ಜನರು ಸುಜನರಲ್ಲಿ ಕಿಕ್ಕಿರಿದು ಸೇರಿತ್ತು.

ಕೊನೆಯ ಸೀಟಿನಲ್ಲಿದ್ದೆ! ಸಂಗೀತ ಇಂಪೆನಿಸಲಿಲ್ಲವೆಂದರೆ ಎದ್ದು ಹೋಗಲು ಎಂದು. ಆದರೆ… ಕೇಳುತ್ತಾ ಕೇಳುತ್ತಾ ಭಲೇ ರಸಾನುಭೂತಿ ಕಲಗಿತು!

“ಹೂವಿನಿಂದ ನಾರು ಸ್ವರ್ಗ ಸೇರಿತು” ಎನ್ನುವಂತೆ ನನ್ನ ಮಡದಿ ಮಣಿ ವೆಂಕಟಲಕ್ಷ್ಮಿಯಿಂದ ಒಳ್ಳೆಯ ಸಂಗೀತ ಕಾರಂಜಿಗೆ ಬಂದಿದ್ದೆ. ಮೈಸೂರು ಮೈಸೂರಿನ ಜನರೇ ಹಾಗೆ ಮೈಸೂರು ಮಲ್ಲಿಗೆಯಾ ಹಾಗೇ… ಕರ್ನಾಟಕ ಶಾಸ್ತ್ರೀಯ ಗಾಯನ ಜನರ ಮನಸ್ಸು ತಣಿಸಿತು.

ಸಂಗೀತವೇ ಹಾಗೆ ಗೊತ್ತಿಲ್ಲದವರ ತಲೆದೂಗುವಂತೆ ಮಾಡುವ ಮೋಡಿ ಅದಕ್ಕಿದೆ!

ಅಲ್ಲಿ ಆರಂಭ ಶೂರತ್ವವಿರಲಿಲ್ಲ. ಪ್ರತಿಭೆ, ಉತ್ಪತ್ತಿ, ಸಾಧನೆ, ಏನೆಲ್ಲ ಅಲ್ಲಿ ಮೇಳೈಸಿತ್ತು. ಅವರು ಸಂಗೀತ ಶಾರದೆಯರಂತೆ ಜನರ ಸೂರೇಗೊಂಡರು.

ಅಬ್ಬಾ! “ಶ್ರೀ ಮಹಾ ಗಣಪತಿಂ ಭಜೇಹಂ” ಎಂದು ನಮ್ಮ ಮೈಸೂರು ಮಹಾರಾಜರ ಹಾಡನ್ನು ಹಾಡಿದ ರೀತಿ ಎಲ್ಲರಿಗೆ ಮೆಚ್ಚಿಗೆಯಾಯಿತು. ನಂತರ “ಓಂ ನಮೋ ಭಗವತೇ ವಾಸುದೇವಾಯ”, “ಯಾರೆ ರಂಗನ ಯಾರೆ ಕೃಷ್ಣನ” ಮೈಸೂರು ವಾಸುದೇವಾಚಾರ್‍ಯರ “ಭಜನಸೇಯರಾದ” ಶ್ಯಾಮಾಶಾಸ್ತ್ರಿಗಳ “ನನ್ನುಯ್ರೋವು ಲಲಿತ” ತ್ಯಾಗರಾಜರ “ಇಂತ ಸೌಖ್ಯಮನಿ ನೇ…” ಮುತ್ತಯ್ಯ ಭಾಗವತರ “ಶರವಣ ಭವ ಸಮಯಮಿದಿರಾ” ಪುರಂದರದಾಸರ “ಆದದ್ದೆಲ್ಲ ಒಳಿತೇ ಆಯಿತು” “ನಾಚತೆ ಆಯ ನಟಿಕಟ್ಗಿರಿಧರ್” “ಎಂಥಾ ಪುಣ್ಯವೇ ಗೋಪಿ”, “ವಿಕೋಬ ಸಂಗ ಸದಾ” ಇವೆಲ್ಲ ಕೇಳುಗರ ಮನದಲ್ಲಿ ರಸಸ್ವಾದನೆಯನ್ನುಂಟು ಮಾಡಿದವು.

ಸಂಗೀತ ಅದರಲ್ಲೂ ಇಂಥಾ ಸಾಧಕಿಯರಾದ ಇಂಥಾ ಗಾಯಕಿಯರು ಕೇಳುಗರ ಮನವನ್ನು ಗೆಲ್ಲಬಲ್ಲವರೆಂಬುದಕ್ಕೆ ಅಲ್ಲಿ ಕಿಕ್ಕಿರಿದು ನಿಂತು ಕೆಳಗೆ ಹೊರಗೆ ಬಾಗಿಲಲ್ಲಿ ಗುಂಪುಗುಂಪು ಕೇಳುತ್ತಿತ್ತು. ಜನರು ತಲೆದೂಗಿ ಖುಷಿಖುಷಿಯಲ್ಲಿ ಚಪ್ಪಾಳೆ ಹೊಡೆಯುತ್ತಿತ್ತು.

ಎಂದರೋ ಮಹಾನುಭವರು ಉತ್ಕೃಷ್ಟ ಸ್ಥಾಯಿಯಲ್ಲಿ ಸುಲಲಿತ ಸುಮಧುರ ಸೌಖ್ಯ ಭಾವ ಪೂರ್‍ವ ಮನೋಜ್ಞವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಪಂಕ್ತಿಯಲಿ ಇವರ ಹೆಸರುಗಳು ಬಹುಕಾಲ ಉಳಿಯುವುವು ಎಂದು ಮನದುಂಬಿ ಬರೆದಿರುವೆ. ಆದ್ದರಿಂದ ಪುಟಾಣಿಗಳೆ… ನೀವೂ ಸಂಗೀತ ಕಲಿಯುವತ್ತ ಆಸಕ್ತಿಯುಳ್ಳವರಾಗಿ ಎಂದು ಹರಸುವೆ. ಆಗಬಹುದೇ??
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...