Home / ಕವನ / ಕವಿತೆ / ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ
ಅವತಾರಗಳಿನ್ನೂ ಕೊನೆಗೊಂಡಿಲ್ಲ
ಶತಕೋಟಿ ದೇವರುಗಳು ಬಂದು ಹೋದರೂ
ದೇವರುಗಳಿನ್ನೂ ಮುಗಿದಿಲ್ಲ

ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ
ಯಾವ ಯಾವುದೋ ವರಾತ
ಆರಂಭಿಸಿದ ಸ್ವಯಂಚಾಲಿತ ಲೀಲೆಯ
ನಿಲ್ಲಿಸಲು ತಾನೆ ಮರೆತ

ಯುಗದ ಗಾಲಿಗಳ ಮೇಲೆ ಉರುಳುತ್ತ
ತೇರು ಬರುವುದೇನು
ಕಳೆಗಿಡ ಬೆಳೆಗಿಡ ಎಂದಿಲ್ಲದೆ ಸವರುತ್ತ
ಯಂತ್ರ ಹರಿವುದೇನು

ತೋರಣ ಕಮಾನುಗಳ
ನಿಲ್ಲಿಸುವುದೇನು
ಗಜಗಾತ್ರದ ಪಟಗಳು
ಹೂಮಾಲೆ ಕಾಮಾಲೆ
ಅಲಂಕರಿಸುವುದೇನು
ಒಂದೊಂದೂ ಕಾಮಧೇನು

ಕೆಲವೊಮ್ಮೆ ಕೆಲ ವೇಷ
ಕೆಲವೊಮ್ಮೆ ಕೆಲ ಪವಾಡ
ಕೆಲವೊಮ್ಮೆ ಸಾಮಾನ್ಯತೆಯೆ ವಿಶೇಷ
ಮುಗಿದರೂ ಮುಗಿಯದ ಯಾತರದೊ ಶೇಷ

ಗತವ ಹೊಸದಾಗಿಸುವ ಸ್ವಗತ
ತೊಟ್ಟ ಬಾಣವ ತೊಡದ ಶಪಥ
ಮುರಿದು ಕಟ್ಟುವ ಛಲ
ಕಟ್ಟಿದ್ದ ಮುರಿಯುವ ಬಲ

ನಳನಳಿಸುವೆಲೆಗಳೇ ಗಲಗಲಿಸಿ ಬೀಳುವುವೆ
ಇಂದು ಕೇಳಿದಾಕ್ರಂದನವೆ ಹಿಂದೆಯೂ ಕೇಳಿಸಿತೆ
ಅದು ಮುಂದೆಯೂ ಕೇಳುವುದೆ
ಅಥವ ಮುಂದಿನದು ಬೇರೆಯೆ

ಮುಂದಿನ ತಿರುವೇ ನಮ್ಮ ತಿರುವು
ಅಲ್ಲಿ ನಾವು ಮರೆಯಾಗುವೆವು
ಉಳಿದವರಿಗೇನು ಅರಿವು ನಮ್ಮ ಭಯವು
ಕತೆಯೊಂದೆ ಉಳಿಯುವುದು ಹೋದವರ ನೆರಳಂತೆ
ಆಮೇಲೆ ಅದುವೂ ಮಾಯವಾಗುವುದು

ಎಷ್ಟವತಾರಗಳು ಕೊನೆಗೊಂಡರೂ
ಮತ್ತವತಾರಗಳು ಬಂದೆ ಬರುವುವು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...