Home / ಕವನ / ಕವಿತೆ / ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ
ಅವತಾರಗಳಿನ್ನೂ ಕೊನೆಗೊಂಡಿಲ್ಲ
ಶತಕೋಟಿ ದೇವರುಗಳು ಬಂದು ಹೋದರೂ
ದೇವರುಗಳಿನ್ನೂ ಮುಗಿದಿಲ್ಲ

ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ
ಯಾವ ಯಾವುದೋ ವರಾತ
ಆರಂಭಿಸಿದ ಸ್ವಯಂಚಾಲಿತ ಲೀಲೆಯ
ನಿಲ್ಲಿಸಲು ತಾನೆ ಮರೆತ

ಯುಗದ ಗಾಲಿಗಳ ಮೇಲೆ ಉರುಳುತ್ತ
ತೇರು ಬರುವುದೇನು
ಕಳೆಗಿಡ ಬೆಳೆಗಿಡ ಎಂದಿಲ್ಲದೆ ಸವರುತ್ತ
ಯಂತ್ರ ಹರಿವುದೇನು

ತೋರಣ ಕಮಾನುಗಳ
ನಿಲ್ಲಿಸುವುದೇನು
ಗಜಗಾತ್ರದ ಪಟಗಳು
ಹೂಮಾಲೆ ಕಾಮಾಲೆ
ಅಲಂಕರಿಸುವುದೇನು
ಒಂದೊಂದೂ ಕಾಮಧೇನು

ಕೆಲವೊಮ್ಮೆ ಕೆಲ ವೇಷ
ಕೆಲವೊಮ್ಮೆ ಕೆಲ ಪವಾಡ
ಕೆಲವೊಮ್ಮೆ ಸಾಮಾನ್ಯತೆಯೆ ವಿಶೇಷ
ಮುಗಿದರೂ ಮುಗಿಯದ ಯಾತರದೊ ಶೇಷ

ಗತವ ಹೊಸದಾಗಿಸುವ ಸ್ವಗತ
ತೊಟ್ಟ ಬಾಣವ ತೊಡದ ಶಪಥ
ಮುರಿದು ಕಟ್ಟುವ ಛಲ
ಕಟ್ಟಿದ್ದ ಮುರಿಯುವ ಬಲ

ನಳನಳಿಸುವೆಲೆಗಳೇ ಗಲಗಲಿಸಿ ಬೀಳುವುವೆ
ಇಂದು ಕೇಳಿದಾಕ್ರಂದನವೆ ಹಿಂದೆಯೂ ಕೇಳಿಸಿತೆ
ಅದು ಮುಂದೆಯೂ ಕೇಳುವುದೆ
ಅಥವ ಮುಂದಿನದು ಬೇರೆಯೆ

ಮುಂದಿನ ತಿರುವೇ ನಮ್ಮ ತಿರುವು
ಅಲ್ಲಿ ನಾವು ಮರೆಯಾಗುವೆವು
ಉಳಿದವರಿಗೇನು ಅರಿವು ನಮ್ಮ ಭಯವು
ಕತೆಯೊಂದೆ ಉಳಿಯುವುದು ಹೋದವರ ನೆರಳಂತೆ
ಆಮೇಲೆ ಅದುವೂ ಮಾಯವಾಗುವುದು

ಎಷ್ಟವತಾರಗಳು ಕೊನೆಗೊಂಡರೂ
ಮತ್ತವತಾರಗಳು ಬಂದೆ ಬರುವುವು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...