ಹೂಮಾಲೆ

ಕೇದಾರ ಗೌಳ

ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?
ಯಾರಿಗೊಪ್ಪಿಸಿ ಕಣ್ಣೆದೆಯ ಬಾ-
ಯಾರಿಕೆಯನಂತರಿಸಲಿ?


ಮನಸು ಮೆಚ್ಚಿದ ಮಲರುಗಳನೇ
ಎನಿತೆನಿತೊ ನಾನಾಯ್ದೆ.
ಮನವನಿದರೊಳೆ ನಿಲಿಸಿ ಬಲು ಚೆಲು-
ವೆನಿಪ ದಂಡೆಯ ಕೋದೆ.
ಇನಿತು ವೇಳೆಯ ಬಣಗುಗಳೆಯುತ
ಹೆಣೆದೆನಲ್ಲವೆ ಹೂವ ಬರಿದೆ?
ಯಾರಿಗರುಪಿಸಲಿದನು ಮಾಲೆಯ-
ನಾರಕೊರಳೊಳಗಿರಿಸಲಿ ?


ನನ್ನ ಮುಡಿಯೊಳೆ ಮುಡಿದರೀ ಸರ-
ವನ್ನು ಚೆನ್ನೆನಿಸೀತೇ?
ಮುನ್ನ ನಾ ಬಗೆದಿರುವ ಸೊಗಸನು
ನನ್ನೆದೆಯು ಸವಿದೀತೇ?

ಕುನ್ನಿತನ ಸರಿ ನನ್ನದಿದು! ಆ
ಚೆನ್ನತೆಯನೆಂತಿನ್ನು ಕಾಣುವೆ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?


ಅರಳ ದಂಡೆಯೆ ನಿನ್ನ ಚೆಲುವಿನ
ಸಿರಿಗೆ ಸರಿಯಿಹುದೇನೆ ?
ಮರುಳು ನಿನ್ನೀ ಚೆಲುವ ಬಳಸುವ
ಸರಿದೆರನ ನೀ ಕಾಣೆ
ಅರಿಯೆನಾ ಪರಿಯನ್ನು ನಾನೂ
ಕುರುಡ-ಕುರುಡರ ಕೆಳೆಯಿದೇನೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?


ಜನಿಸಿ ಬಂದುದಕರಳುಗಳೆ ನೀ-
ವಿನಿತನೂ ಫಲ ಕಾಣದೆ
ಒಣಗಿ ಹೋಗುವ ವೇಳೆ ಬಂದಿತೆ-
ನನ್ನ ಸಂಗತಿಯಿಂದೆ ?
ಕೆಣಕು ದೈವದ ನನ್ನ ತೆರದೊಳೆ
ಬಣಗುಬಾಳಾಯ್ತೇನು ನಿಮಗೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಕೆಲಸ
Next post ಪೂರ್‍ಣ ಮಾಡು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…