ಹೂಮಾಲೆ

ಕೇದಾರ ಗೌಳ

ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?
ಯಾರಿಗೊಪ್ಪಿಸಿ ಕಣ್ಣೆದೆಯ ಬಾ-
ಯಾರಿಕೆಯನಂತರಿಸಲಿ?


ಮನಸು ಮೆಚ್ಚಿದ ಮಲರುಗಳನೇ
ಎನಿತೆನಿತೊ ನಾನಾಯ್ದೆ.
ಮನವನಿದರೊಳೆ ನಿಲಿಸಿ ಬಲು ಚೆಲು-
ವೆನಿಪ ದಂಡೆಯ ಕೋದೆ.
ಇನಿತು ವೇಳೆಯ ಬಣಗುಗಳೆಯುತ
ಹೆಣೆದೆನಲ್ಲವೆ ಹೂವ ಬರಿದೆ?
ಯಾರಿಗರುಪಿಸಲಿದನು ಮಾಲೆಯ-
ನಾರಕೊರಳೊಳಗಿರಿಸಲಿ ?


ನನ್ನ ಮುಡಿಯೊಳೆ ಮುಡಿದರೀ ಸರ-
ವನ್ನು ಚೆನ್ನೆನಿಸೀತೇ?
ಮುನ್ನ ನಾ ಬಗೆದಿರುವ ಸೊಗಸನು
ನನ್ನೆದೆಯು ಸವಿದೀತೇ?

ಕುನ್ನಿತನ ಸರಿ ನನ್ನದಿದು! ಆ
ಚೆನ್ನತೆಯನೆಂತಿನ್ನು ಕಾಣುವೆ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?


ಅರಳ ದಂಡೆಯೆ ನಿನ್ನ ಚೆಲುವಿನ
ಸಿರಿಗೆ ಸರಿಯಿಹುದೇನೆ ?
ಮರುಳು ನಿನ್ನೀ ಚೆಲುವ ಬಳಸುವ
ಸರಿದೆರನ ನೀ ಕಾಣೆ
ಅರಿಯೆನಾ ಪರಿಯನ್ನು ನಾನೂ
ಕುರುಡ-ಕುರುಡರ ಕೆಳೆಯಿದೇನೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?


ಜನಿಸಿ ಬಂದುದಕರಳುಗಳೆ ನೀ-
ವಿನಿತನೂ ಫಲ ಕಾಣದೆ
ಒಣಗಿ ಹೋಗುವ ವೇಳೆ ಬಂದಿತೆ-
ನನ್ನ ಸಂಗತಿಯಿಂದೆ ?
ಕೆಣಕು ದೈವದ ನನ್ನ ತೆರದೊಳೆ
ಬಣಗುಬಾಳಾಯ್ತೇನು ನಿಮಗೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಕೆಲಸ
Next post ಪೂರ್‍ಣ ಮಾಡು

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…