ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು,
ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ!
ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ
ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ!

ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,
ಬೇವು ಬೆಲ್ಲದ ಸವಿಗೆ ಸರಿಯಾಯ್ತು, ಜೋ!
ಬೇವು ಬೆಲ್ಲದ ಸವಿಯ ಪಡೆಯಿತುದಿಸಲು, ಮುದ್ದು
ಆ ಒಂದು ಗೊಡ್ಡು ಹೊಸ ಹಸುವಾಯ್ತು, ಜೋ!

ಜೊಲ್ಲ ಸೂಸುವ ಬಾಯನಲ್ಲಲ್ಲಿ ತಗಲಿಸುವ-
ನಲ್ಲಲ್ಲಿ ಅಮೃತಾಂಕ ಮೂಡಿತ್ತು, ಜೋ!
ಅಲ್ಲಲ್ಲಿ ಅಮೃತ ಮುದ್ರೆಯು ಮೂಡಿ, ಮೈಯೆಲ್ಲ
ಜಲ್ಲನೇ ನವಿರೆದ್ದು ನಿಂತಿತ್ತು, ಜೋ!

ಬಾಲನಾ ಲೀಲೆಯನು ಹೇಳಲಿನ್ನೇನು ನಾ
ಲೋಲ ಹಿಡಿ ಹಿಡಿದೆಳೆವ ಮುಂಗುರುಳ, ಜೋ!
ಲೋಲ ಹಿಡಿಹಿಡಿದಳೆವ ಮುಂಗುರುಳ ಬಾಯೊಳಗೆ
ಲೀಲೆಯಿಂದಿಡುವ ಕಾಲ್ತುದಿ ಬೆರಳ, ಜೋ!

ನಿದ್ದೆ ಇಲ್ಲದೆ ಕಂದನೆದ್ದೆದ್ದು ಕುಳಿತಿಹನು,
ಗದ್ದರಿಸಿ ಗರ್‍ಜಿಪನು ಮನೆತುಂಬ, ಜೋ!
ಗದ್ದರಿಸಿ ಗರ್‍ಜಿಪನು ಮನೆತುಂಬ, ಕುಲಕೋಟಿ
ಉದ್ಧರಿಸುವನು ತನ್ನುದಯದಿಂದ, ಜೋ!

ಪುಂಡನಾಟವ ನೋಡಿ ನಿಂದೆ ನಾ ಮರುಳಾಗಿ,
ಗಂಡನೂಟವು ಹೋಯ್ತು ಹಾಳಾಗಿ, ಜೋ!
ಗಂಡನೂಟವು ಹೋಯ್ತು ಹಾಳಾಗಿ, ಸಂಸಾರ
ಕಂಡು ಬಂತೀಗ ಬಲು ಸವಿಯಾಗಿ, ಜೋ!

ನಗುವುದೇತಕೆ ಕಂದ? ನಗಲು ಕಾಣುವೆ ಚಂದ,
ಬಗಡ! ಮಾತಾಡು ಹೃದಯಾನಂದ, ಜೋ!
ಬಗಡ ಮಾತಾಡಲಾ ಮುಗಿಯದೈ, ನಿನ್ನನ್ನು
ಅಗಿದವರು ಯಾರು ನುಡಿ, ಸುಖ ಕಂದ, ಜೋ!
*****
(ಜೋಗುಳ ಹಾಡು)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೂರಿಯಾದಿಂದೇರಿದ್ದು ವರಿಯಾ? ಇಳುವರಿಯಾ?
Next post ಓದುಗಸ್ನೇಹಿ ಗ್ರಂಥಪಾಲಕರು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…