Home / ಕವನ / ಕವಿತೆ / ಜೋಗುಳ

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು,
ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ!
ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ
ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ!

ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,
ಬೇವು ಬೆಲ್ಲದ ಸವಿಗೆ ಸರಿಯಾಯ್ತು, ಜೋ!
ಬೇವು ಬೆಲ್ಲದ ಸವಿಯ ಪಡೆಯಿತುದಿಸಲು, ಮುದ್ದು
ಆ ಒಂದು ಗೊಡ್ಡು ಹೊಸ ಹಸುವಾಯ್ತು, ಜೋ!

ಜೊಲ್ಲ ಸೂಸುವ ಬಾಯನಲ್ಲಲ್ಲಿ ತಗಲಿಸುವ-
ನಲ್ಲಲ್ಲಿ ಅಮೃತಾಂಕ ಮೂಡಿತ್ತು, ಜೋ!
ಅಲ್ಲಲ್ಲಿ ಅಮೃತ ಮುದ್ರೆಯು ಮೂಡಿ, ಮೈಯೆಲ್ಲ
ಜಲ್ಲನೇ ನವಿರೆದ್ದು ನಿಂತಿತ್ತು, ಜೋ!

ಬಾಲನಾ ಲೀಲೆಯನು ಹೇಳಲಿನ್ನೇನು ನಾ
ಲೋಲ ಹಿಡಿ ಹಿಡಿದೆಳೆವ ಮುಂಗುರುಳ, ಜೋ!
ಲೋಲ ಹಿಡಿಹಿಡಿದಳೆವ ಮುಂಗುರುಳ ಬಾಯೊಳಗೆ
ಲೀಲೆಯಿಂದಿಡುವ ಕಾಲ್ತುದಿ ಬೆರಳ, ಜೋ!

ನಿದ್ದೆ ಇಲ್ಲದೆ ಕಂದನೆದ್ದೆದ್ದು ಕುಳಿತಿಹನು,
ಗದ್ದರಿಸಿ ಗರ್‍ಜಿಪನು ಮನೆತುಂಬ, ಜೋ!
ಗದ್ದರಿಸಿ ಗರ್‍ಜಿಪನು ಮನೆತುಂಬ, ಕುಲಕೋಟಿ
ಉದ್ಧರಿಸುವನು ತನ್ನುದಯದಿಂದ, ಜೋ!

ಪುಂಡನಾಟವ ನೋಡಿ ನಿಂದೆ ನಾ ಮರುಳಾಗಿ,
ಗಂಡನೂಟವು ಹೋಯ್ತು ಹಾಳಾಗಿ, ಜೋ!
ಗಂಡನೂಟವು ಹೋಯ್ತು ಹಾಳಾಗಿ, ಸಂಸಾರ
ಕಂಡು ಬಂತೀಗ ಬಲು ಸವಿಯಾಗಿ, ಜೋ!

ನಗುವುದೇತಕೆ ಕಂದ? ನಗಲು ಕಾಣುವೆ ಚಂದ,
ಬಗಡ! ಮಾತಾಡು ಹೃದಯಾನಂದ, ಜೋ!
ಬಗಡ ಮಾತಾಡಲಾ ಮುಗಿಯದೈ, ನಿನ್ನನ್ನು
ಅಗಿದವರು ಯಾರು ನುಡಿ, ಸುಖ ಕಂದ, ಜೋ!
*****
(ಜೋಗುಳ ಹಾಡು)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...