ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ
ಏಕಾಂಗಿ ನಾನು
ಮುಚ್ಚಿಡಲಾರೆನು, ಬಿಚ್ಚಿಡಲಾರೆನು
ಭಾವನೆಗಳ ಮಹಾಪೂರ
ಕುಳಿತಿರಲಿ ಮಲಗಿರಲಿ ಬಂದು
ಮುತ್ತುವಿರಿ ಒಗಟಾಗಿ ನಿಂದು
ಬರುವಿರೇಕೆ ಮನದ ಗೂಡಿನೊಳಗೆ
ಕುಣಿಯುವಿರೇಕೆ ಪರದೆಯೊಳಗೆ
ಕಾಡುವಿರೇಕೆ ಕನಸುಗಳ
ಕತ್ತರಿಸುವಿರೇಕೆ.
ಜಡವಾಗಿ ಶಿಲೆಯಾಗಬಾರದೆ ನಾನು
ಬರುವಿರೇನು? ಬಂದು ಮಾಡುವಿರೇನು?
ಬರಡು ಹೃದಯಕೆ ಹೊಂಗೆ ನೆರಳಂತೆ
ತಂಪನೆರೆಯುವಿರೇನು?
ಕೊರಡಾದ ಬದುಕಿಗೆ ಚೈತನ್ಯದ
ಚಿಲುಮೆಯಾಗುವಿರೇನು?
ಕತ್ತಲಾದ ಮನಕೆ ಹೊಂಬೆಳಕ
ಪಸರಿಸುವಿರೇನು?
ಬತ್ತಿದ ಭಾವನೆಗಳ ಬಡಿದು
ಎಬ್ಬಿಸುವಿರೇನು?
ಬರಲಾರಿರಿ ಮನದ ಗೂಡಿನೊಳಗೆ
ಬಿತ್ತಲಾರಿರಿ ಸ್ನೇಹವಿಶ್ವಾಸದ
ಹರುಷ ಉತ್ಸಾಹದ ಬೀಜಗಳನು
ಎಲ್ಲಿದ್ದರೂ ಹೇಗಿದ್ದರೂ ಏಕಾಂಗಿ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅತಿಮಥನ
Next post ಮೀಸೆ ಇದ್ರೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…