ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ
ಏಕಾಂಗಿ ನಾನು
ಮುಚ್ಚಿಡಲಾರೆನು, ಬಿಚ್ಚಿಡಲಾರೆನು
ಭಾವನೆಗಳ ಮಹಾಪೂರ
ಕುಳಿತಿರಲಿ ಮಲಗಿರಲಿ ಬಂದು
ಮುತ್ತುವಿರಿ ಒಗಟಾಗಿ ನಿಂದು
ಬರುವಿರೇಕೆ ಮನದ ಗೂಡಿನೊಳಗೆ
ಕುಣಿಯುವಿರೇಕೆ ಪರದೆಯೊಳಗೆ
ಕಾಡುವಿರೇಕೆ ಕನಸುಗಳ
ಕತ್ತರಿಸುವಿರೇಕೆ.
ಜಡವಾಗಿ ಶಿಲೆಯಾಗಬಾರದೆ ನಾನು
ಬರುವಿರೇನು? ಬಂದು ಮಾಡುವಿರೇನು?
ಬರಡು ಹೃದಯಕೆ ಹೊಂಗೆ ನೆರಳಂತೆ
ತಂಪನೆರೆಯುವಿರೇನು?
ಕೊರಡಾದ ಬದುಕಿಗೆ ಚೈತನ್ಯದ
ಚಿಲುಮೆಯಾಗುವಿರೇನು?
ಕತ್ತಲಾದ ಮನಕೆ ಹೊಂಬೆಳಕ
ಪಸರಿಸುವಿರೇನು?
ಬತ್ತಿದ ಭಾವನೆಗಳ ಬಡಿದು
ಎಬ್ಬಿಸುವಿರೇನು?
ಬರಲಾರಿರಿ ಮನದ ಗೂಡಿನೊಳಗೆ
ಬಿತ್ತಲಾರಿರಿ ಸ್ನೇಹವಿಶ್ವಾಸದ
ಹರುಷ ಉತ್ಸಾಹದ ಬೀಜಗಳನು
ಎಲ್ಲಿದ್ದರೂ ಹೇಗಿದ್ದರೂ ಏಕಾಂಗಿ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅತಿಮಥನ
Next post ಮೀಸೆ ಇದ್ರೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…