ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ
ಏಕಾಂಗಿ ನಾನು
ಮುಚ್ಚಿಡಲಾರೆನು, ಬಿಚ್ಚಿಡಲಾರೆನು
ಭಾವನೆಗಳ ಮಹಾಪೂರ
ಕುಳಿತಿರಲಿ ಮಲಗಿರಲಿ ಬಂದು
ಮುತ್ತುವಿರಿ ಒಗಟಾಗಿ ನಿಂದು
ಬರುವಿರೇಕೆ ಮನದ ಗೂಡಿನೊಳಗೆ
ಕುಣಿಯುವಿರೇಕೆ ಪರದೆಯೊಳಗೆ
ಕಾಡುವಿರೇಕೆ ಕನಸುಗಳ
ಕತ್ತರಿಸುವಿರೇಕೆ.
ಜಡವಾಗಿ ಶಿಲೆಯಾಗಬಾರದೆ ನಾನು
ಬರುವಿರೇನು? ಬಂದು ಮಾಡುವಿರೇನು?
ಬರಡು ಹೃದಯಕೆ ಹೊಂಗೆ ನೆರಳಂತೆ
ತಂಪನೆರೆಯುವಿರೇನು?
ಕೊರಡಾದ ಬದುಕಿಗೆ ಚೈತನ್ಯದ
ಚಿಲುಮೆಯಾಗುವಿರೇನು?
ಕತ್ತಲಾದ ಮನಕೆ ಹೊಂಬೆಳಕ
ಪಸರಿಸುವಿರೇನು?
ಬತ್ತಿದ ಭಾವನೆಗಳ ಬಡಿದು
ಎಬ್ಬಿಸುವಿರೇನು?
ಬರಲಾರಿರಿ ಮನದ ಗೂಡಿನೊಳಗೆ
ಬಿತ್ತಲಾರಿರಿ ಸ್ನೇಹವಿಶ್ವಾಸದ
ಹರುಷ ಉತ್ಸಾಹದ ಬೀಜಗಳನು
ಎಲ್ಲಿದ್ದರೂ ಹೇಗಿದ್ದರೂ ಏಕಾಂಗಿ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅತಿಮಥನ
Next post ಮೀಸೆ ಇದ್ರೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…