ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ
ಏಕಾಂಗಿ ನಾನು
ಮುಚ್ಚಿಡಲಾರೆನು, ಬಿಚ್ಚಿಡಲಾರೆನು
ಭಾವನೆಗಳ ಮಹಾಪೂರ
ಕುಳಿತಿರಲಿ ಮಲಗಿರಲಿ ಬಂದು
ಮುತ್ತುವಿರಿ ಒಗಟಾಗಿ ನಿಂದು
ಬರುವಿರೇಕೆ ಮನದ ಗೂಡಿನೊಳಗೆ
ಕುಣಿಯುವಿರೇಕೆ ಪರದೆಯೊಳಗೆ
ಕಾಡುವಿರೇಕೆ ಕನಸುಗಳ
ಕತ್ತರಿಸುವಿರೇಕೆ.
ಜಡವಾಗಿ ಶಿಲೆಯಾಗಬಾರದೆ ನಾನು
ಬರುವಿರೇನು? ಬಂದು ಮಾಡುವಿರೇನು?
ಬರಡು ಹೃದಯಕೆ ಹೊಂಗೆ ನೆರಳಂತೆ
ತಂಪನೆರೆಯುವಿರೇನು?
ಕೊರಡಾದ ಬದುಕಿಗೆ ಚೈತನ್ಯದ
ಚಿಲುಮೆಯಾಗುವಿರೇನು?
ಕತ್ತಲಾದ ಮನಕೆ ಹೊಂಬೆಳಕ
ಪಸರಿಸುವಿರೇನು?
ಬತ್ತಿದ ಭಾವನೆಗಳ ಬಡಿದು
ಎಬ್ಬಿಸುವಿರೇನು?
ಬರಲಾರಿರಿ ಮನದ ಗೂಡಿನೊಳಗೆ
ಬಿತ್ತಲಾರಿರಿ ಸ್ನೇಹವಿಶ್ವಾಸದ
ಹರುಷ ಉತ್ಸಾಹದ ಬೀಜಗಳನು
ಎಲ್ಲಿದ್ದರೂ ಹೇಗಿದ್ದರೂ ಏಕಾಂಗಿ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅತಿಮಥನ
Next post ಮೀಸೆ ಇದ್ರೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…