ತಾರಾ

‘ಭವತಿ ಭಿಕ್ಷಾಂದೇಹಿ’

ಭಿಕ್ಷಾಪಾತ್ರೆ ಹಿಡಿದು
ಮನೆ ಮನೆಯಿಂದಲೂ
ಬೇಡಿ ತಂದಿದ್ದು
ಕರಗದ ದಾರುಣ ಸಂಕಟವನ್ನೇ

ಅಗಿದು ಜಗಿದರೂ ತೀರದ ನೋವು
ಸುಮ್ಮನೇ ಪಚನವಾದೀತೇ?
ಬೊಗಸೆಯಲಿ ಆಪೋಷಿಸಿ
ನೀಗಿಕೊಂಡ ಬೋಧಿಸತ್ವನೇನೋ
ಬುದ್ಧನಾಗಿಹೋದ!

ಆದರೆ ಒಳಗಿಳಿದದ್ದು ಸುಮ್ಮನುಳಿದೀತೆ?
ಹೃದಯ ತುಂಬಿ ಕುಡಿದದ್ದು
ಕರುಳೇ ಬಿರಿದು
ನೊಂದ ನೋವೇ ಕಾರುಣ್ಯರಸವಾಗಿ
ಕಣ್ಣು ತುಂಬಿ
ತಣ್ಣಗೆ ಹರಿದು ನೀರಾಗಿ
ಕಣ್ಣೀರ ಸರೋವರವೇ ಮಡುಗಟ್ಟಿತು.

ಸುಡು ಕಾವಿಗೂ ಆವಿಯಾಗದೇ
ಉಳಿದ ದ್ರವರೂಪಿ ನೋವೆಲ್ಲ
ಸೋಸಿ ಸೋಸಿ ತಿಳಿಯಾದ
ಸ್ವಚ್ಛ ನೀರಿನೊಳಗೆ
ಅಚ್ಛ ಬಿಳಿ ಕಮಲ ಬಿರಿದು
ಅದರೊಳಗೆ
ಅರಳಿಕೊಂಡವಳು
ಆ ಬುದ್ದನದೇ ಹೆಣ್ಣುರೂಪ
ತಾರಾ
*****
[ಟಿಬೇಟಿಯನ್ ಬೌದ್ಧಧರ್ಮದ ಪರಿಕಲ್ಪನೆಯಲ್ಲಿ- ನೋವು ನುಂಗಿದ ಬುದ್ಧನ ಸಂಕಟ ಕಣ್ಣೀರಾಗಿ ಹರಿದು ಉಂಟಾದ ಸರೋವರದಲ್ಲಿ ಅರಳಿದ ಕಮಲದಿಂದ ಬುದ್ಧನ ಸ್ತ್ರೀರೂಪವೊಂದು ತಾರಾ ಬುದ್ಧಳಾಗಿ ಹೊರಹೊಮ್ಮಿದ ಕಥೆಯಿದೆ.]

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು
Next post ಅಷ್ಟಮನಿಗೆ ಜನ್ಮಾಷ್ಟಮಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…