ಬರುತಿ‌ಎಂದೆಯಲ್ಲೊ

ಬರುತಿ‌ಎಂದೆಯಲ್ಲೊ
ಬಾರದೆಹೋದೆ ಎಲ್ಲೊ|
ಮಗು ಲೋಹಿತಾಶ್ವ||

ಬಿಸಿಲ ಜಳಕೆ
ನಿನಗೆ ಬಾಯಾರಿಕೆಯಾಗಿಹುದೋ|
ನಿನ್ನ ಹಸಿವು ಬಾಧಿಸಿಹುದೋ?
ನಿನ್ನ ಜೊತೆಗಿದ್ದವರು
ನೀನು ಸಣ್ಣವನೆಂದು
ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?||

ಅರಮನೆಯಲಾಡಿ ಬೆಳೆದವ ನೀನು
ಅಡವಿಯ ಪರಿಚಯವಿಲ್ಲ ನಿನಗೆ|
ಮನೆಯ ಹಾದಿಯ ಮರೆತೆಯೆನೋ
ಕಾಡ್ಗಿಚ್ಚು ನಿನ್ನ ತಡೆಯಿತೇನೋ|
ಕಾಡಮೃಗಗಳಿಗೆದರಿ
ಅಡಗಿ ಕುಳಿತಿರುವೆ ಏನೋ?||

ನನ್ನ ಬಲಗಣ್ಣು ಹಾರುತಿಹುದೆ
ಎದೆ ಬಡೆತ ಏರುತಿಹುದು|
ಹೊಟ್ಟೆಯಲೇನೊ ಸಂಕಟವಾಗುತಿಹುದು|
ನಿನ್ನ ತಂದೆ ಬಂದು
ಕಂದನೆಲ್ಲಿ ಎಂದರೆ ಏನ ಉತ್ತರ ನೀಡಲಿ?|
ಹೋಗಿ ಹುಡುಕಿ ಕರೆತರುವೆಯೆಂದರೆ
ಮನೆಯೊಡತಿ ಬಿಡುತ್ತಿಲ್ಲ ನನ್ನನು||

ಧರ್‍ಮ ಸತ್ಯಸಂದ ಶ್ರೀಹರಿಶ್ಚಂದ್ರನ
ವಂಶೋದ್ಧಾರ ಏಕಮಾತ್ರನು ನೀನು|
ನಿದ್ದೆಯಲು ಸುಳ್ಳನಾಡದವ ನೀನು|
ಕಾಶಿವಿಶ್ವನಾಥನನು ಪ್ರಾರ್‍ಥಿಸು
ನಮ್ಮ ಕುಲವನುಳಿಸೋ ಎಂದು
ಕರುಣೆ ತೋರುವನು ದೀನ ಬಂಧು|
ಸರಿರಾತ್ರಿಯಾದರೂ ಸರಿ
ಕೆಲಸ ಮುಗಿಸಿ ನಾ ಬರುವೆ ನಿನ್ನಲ್ಲಿಗೆ
ಹೆದರಿ ಕೊರಗದಿರು ನೊಂದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಪೆ ತೋರು
Next post ಕ್ರಿಮಿಕುಲವಿಮರ್ಶೆ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…