ಕ್ರಿಮಿಕುಲವಿಮರ್ಶೆ


ಒಳ್ಳೆ ಬೆಳೆಗಳ ತಿಂದು ಪೊಳ್ಳು – ಜೊಳ್ಳಾಗಿಸುತ
ಬರಗಾಲ ತರುವುದಾ ಜಿಟ್ಟೆ ಯ ಹುಳ !
ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು,
ಕರಿಗಾಲಗುಣದ ಬಿಳಿಬಟ್ಟೆಯ ಹುಳ !


ಇರುವನಿತೆ ಕಿರುಬೆಳಕ ಮೆರೆಯಿಸುತ ಮಿರುಗಿಸುತ
ಹಾರುವುದು ಮುಗಿಲೊಳಗೆ ಹೊನ್ನೆಯ ಹುಳ!
ಗರುವ – ಹೆಮ್ಮೆ ಗಳಿಂದ ಕೊರಲೊತ್ತಿ ಬಡವರನು
ತೂರುವುದು ಹುಡಿಯೊಳಗೆ ಹೊನ್ನಿನ ಹುಳ !


ನೀರ-ಹರಿಯೊಳಗಿದ್ದು ಊರೊಳಗೆ ಚಳಿಯುರಿಯ
ಬೀರುವುದು ಹಾರಿ ಗುಂಗಾಡಿಯ ಹುಳ!
ಊರಿ ಬೆಂಕಿಯ ಕಿಡಿಯ, ಊರಿಗೂರನೆ ಸುಟ್ಟು
ಜಾರುವುದು ಕಿಡಿಗೇಡಿ ಚಾಡಿಯ ಹುಳ !


ಹಸಿದು ಉಣುತಿರುವಾಗ ಬಿಸಿಯನ್ನ ದಲಿ ಕಂಡು
ಕಸಿವಿಸಿಯ ಪಡಿಸುವುದು ಬಾಲದ ಹುಳ !
ಕಸಿದುಕೊಳ್ಳುವುದು ಬದುಕಿನೊಸಗೆಯನೆ ಹಗಲಿರುಳು
ಬಸಿರೊಳಗೆ ಕಚ್ಚುತಿಹ ಸಾಲದ ಹುಳ !


ಉರಿವ ದೀಪವ ಬಡಿದು ಹರಡುವುದು ಕತ್ತಲೆಯ
ಪರಪೀಡಕವು ಪೂರ್ಣ ಪಕ್ಕದ ಹುಳ !
ಅರುಹಿನೊಳು ಬೆಳಕನ್ನು ಮರವೆಯಲಿ ಹೂಳುವುದು
ಕುರುಡುಧರ್ಮಾಚಾರ ಕೊಕ್ಕೆಯ ಹುಳ !


ಮುದ್ದು – ಮುದ್ದೊಡವೆಗಳ ಮೆದ್ದು ಮಣ್‌ ಮಾಡುವುವು
ಗುದ್ದಿ ನೊಳಗಡಗಿರುವ ಗೆದ್ದಲು ಹುಳ !
ಇದ್ದ ಬುದ್ಧಿಯ ಮಾರಿ ಮೊದ್ದುತನ ಕೊಳ್ಳುವುವು
ಕೋಣೆಯೊಳೆ ಕುಳಿತಿರುವ ಹೊತ್ತಗೆಹುಳ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರುತಿ‌ಎಂದೆಯಲ್ಲೊ
Next post ಸದಾಶಿವಗೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…