ಏಕೆ ಹುಟ್ಟಿಸಿದೆ ನನ್ನನು?

ಏಕೆ ಹುಟ್ಟಿಸಿದೆ ನನ್ನನು?
ಎಂದು ಪ್ರಶ್ನೆಯ ಕೇಳದೆ
ಇಲ್ಲಿ ಹುಟ್ಟಿಸಿ
ನಿನ್ನಯ ಕರ್‍ಮವ ಕಳೆಯೆ
ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು||

ಏಕೆ ನನಗೆ ಈ ಸ್ಥಿತಿಯ
ನೀಡಿದೆ ಎನ್ನುವುದಕಿಂತ
ಇದಕಿಂತ ಕೆಳಗಿನ ಪರಿಸ್ಥಿತಿಯ
ಅವಲೋಕಿಸಿ, ಇದೇ ನನಗೆ
ಉತ್ತಮವೆಂದು ಸಂತೋಷಪಡು||

ಕಣ್ಣ ಮುಂದಿರುವುದನು ಸ್ವೀಕರಿಸು
ಹಿಂದಿನದನು, ನಾಳೆ ಕಾಣದಿಹನು ನೆನೆದು
ತಟ್ಟೆಯಲ್ಲಿರುವುದನು ತಿರಸ್ಕರಿಸದಿರು|
ಇಂದು ದುಡಿದು ಪುಣ್ಯಸೇರಿಸಿ ನಾಳೆಯ
ಏಳಿಗೆಯ ಭಾಗ್ಯವ ಗಳಿಸು||

ಅನ್ಯರ ಪುಣ್ಯವ ನೋಡಿ ಕೊರಗದಿರು
ಅವರ ಹಿಂದಿನ ಪುಣ್ಯ, ಶ್ರಮ,
ಧರ್ಮನಿಷ್ಠೆಯ ಅನುಸರಿಸಿ
ತಿಳಿದು ಅವರಂತೆ ನೀನಾಗಲು
ಪ್ರಾಮಾಣಿಕ ಸತ್ಯ ಪ್ರಯತ್ನವ ಮಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ರಾಣಿಯ ಮನಸು
Next post ಚಂದ್ರಗ್ರಹಣ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…