ಏಕೆ ಹುಟ್ಟಿಸಿದೆ ನನ್ನನು?

ಏಕೆ ಹುಟ್ಟಿಸಿದೆ ನನ್ನನು?
ಎಂದು ಪ್ರಶ್ನೆಯ ಕೇಳದೆ
ಇಲ್ಲಿ ಹುಟ್ಟಿಸಿ
ನಿನ್ನಯ ಕರ್‍ಮವ ಕಳೆಯೆ
ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು||

ಏಕೆ ನನಗೆ ಈ ಸ್ಥಿತಿಯ
ನೀಡಿದೆ ಎನ್ನುವುದಕಿಂತ
ಇದಕಿಂತ ಕೆಳಗಿನ ಪರಿಸ್ಥಿತಿಯ
ಅವಲೋಕಿಸಿ, ಇದೇ ನನಗೆ
ಉತ್ತಮವೆಂದು ಸಂತೋಷಪಡು||

ಕಣ್ಣ ಮುಂದಿರುವುದನು ಸ್ವೀಕರಿಸು
ಹಿಂದಿನದನು, ನಾಳೆ ಕಾಣದಿಹನು ನೆನೆದು
ತಟ್ಟೆಯಲ್ಲಿರುವುದನು ತಿರಸ್ಕರಿಸದಿರು|
ಇಂದು ದುಡಿದು ಪುಣ್ಯಸೇರಿಸಿ ನಾಳೆಯ
ಏಳಿಗೆಯ ಭಾಗ್ಯವ ಗಳಿಸು||

ಅನ್ಯರ ಪುಣ್ಯವ ನೋಡಿ ಕೊರಗದಿರು
ಅವರ ಹಿಂದಿನ ಪುಣ್ಯ, ಶ್ರಮ,
ಧರ್ಮನಿಷ್ಠೆಯ ಅನುಸರಿಸಿ
ತಿಳಿದು ಅವರಂತೆ ನೀನಾಗಲು
ಪ್ರಾಮಾಣಿಕ ಸತ್ಯ ಪ್ರಯತ್ನವ ಮಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ರಾಣಿಯ ಮನಸು
Next post ಚಂದ್ರಗ್ರಹಣ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…