ಚಿಂತಿಸದಿರು ಮನವೇ

ಚಿಂತಿಸದಿರು ಮನವೇ
ಜನರ ವಿಪರೀತವ ಕಂಡು
ಕುಗ್ಗದಿರು ಜೀವವೆ
ಈ ಜಗತ್ತು ವೇಗದಲಿ
ಬದಲಾಗುವುದಕೆ ನೊಂದು||

ಜಗ ಓಡುತಿಹುದು ನಾಗಾಲೋಟದಲಿ
ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ|
ಜನರೋಡುತಿರುವರು
ಕಾಲಸಮಯದಿಂದೆ
ಹಣಗಳಿಸುವ ಭರಾಟೆಯಲಿ|
ಮರೀಚಿಕೆಯ ಕಂಡು
ನಿಜವೆಂದುಕೊಂಡು|
ಇರುವುದು ಬಿಟ್ಟು ಇಲ್ಲದುದ
ಬಯಸುತಲಿ, ಮುಂದಿರುವುದ
ಅನುಭವಿಸುವುದಬಿಟ್ಟು||

ಬದಲಾವಣೆ ಬೇಕು, ಆದರದು
ಸಮಾಜ ಸಂಸ್ಕೃತಿಯ
ಪೂರಕವಾಗಿರಲುಬೇಕು|
ನವೀನತೆ ನಾಜೂಕು ಬೇಕು, ಆದರದು
ನಾಟಕೀಯತೆ ಎಂದೆನಿಸಬಾರದು|
ಚೆನ್ನಾಗಿರುವುದ ಮುರಿದು ಹಾಕಿ
ನವೀನ ಮಾಡುವುದಲ್ಲ|
ಶಿಥಿಲವಾದುದ ತೆಗೆದು
ಹೊಸದನು ಮಾಡುವುದು ಅರ್‍ಥ
ಕದವ ಮುರಿದು ಅಗಳಿ ಮಾಡುವುದಲ್ಲ||

ಒಂದೆಡೆ ಜಾದುತರದಲಿ ಬದಲಾವಣೆ
ಇನ್ನೊಂದೆಡೆ ತಿನ್ನಲು ಇರದ ಬವಣೆ|
ಇರುವವರಿಗೇ ಹೆಚ್ಚು ಲಾಭ
ಇಲ್ಲದವರು ನೋಡುತಿಹರು ಬರಿಯ ನಭ|
ಒಂದೆಡೆ ಹಾಹಾಕಾರ ಇನ್ನೊಂದೆಡೆ
ಸ್ವೇಚ್ಚಾಚಾರವ ಕಂಡು ವಿಚಲಿತನಾಗದಿರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಗಳು ಮಾತಾಡುತ್ತವೆ
Next post ಕನ್ನಡಿಗರ ಹಾಡು!

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…