ಚಿಂತಿಸದಿರು ಮನವೇ

ಚಿಂತಿಸದಿರು ಮನವೇ
ಜನರ ವಿಪರೀತವ ಕಂಡು
ಕುಗ್ಗದಿರು ಜೀವವೆ
ಈ ಜಗತ್ತು ವೇಗದಲಿ
ಬದಲಾಗುವುದಕೆ ನೊಂದು||

ಜಗ ಓಡುತಿಹುದು ನಾಗಾಲೋಟದಲಿ
ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ|
ಜನರೋಡುತಿರುವರು
ಕಾಲಸಮಯದಿಂದೆ
ಹಣಗಳಿಸುವ ಭರಾಟೆಯಲಿ|
ಮರೀಚಿಕೆಯ ಕಂಡು
ನಿಜವೆಂದುಕೊಂಡು|
ಇರುವುದು ಬಿಟ್ಟು ಇಲ್ಲದುದ
ಬಯಸುತಲಿ, ಮುಂದಿರುವುದ
ಅನುಭವಿಸುವುದಬಿಟ್ಟು||

ಬದಲಾವಣೆ ಬೇಕು, ಆದರದು
ಸಮಾಜ ಸಂಸ್ಕೃತಿಯ
ಪೂರಕವಾಗಿರಲುಬೇಕು|
ನವೀನತೆ ನಾಜೂಕು ಬೇಕು, ಆದರದು
ನಾಟಕೀಯತೆ ಎಂದೆನಿಸಬಾರದು|
ಚೆನ್ನಾಗಿರುವುದ ಮುರಿದು ಹಾಕಿ
ನವೀನ ಮಾಡುವುದಲ್ಲ|
ಶಿಥಿಲವಾದುದ ತೆಗೆದು
ಹೊಸದನು ಮಾಡುವುದು ಅರ್‍ಥ
ಕದವ ಮುರಿದು ಅಗಳಿ ಮಾಡುವುದಲ್ಲ||

ಒಂದೆಡೆ ಜಾದುತರದಲಿ ಬದಲಾವಣೆ
ಇನ್ನೊಂದೆಡೆ ತಿನ್ನಲು ಇರದ ಬವಣೆ|
ಇರುವವರಿಗೇ ಹೆಚ್ಚು ಲಾಭ
ಇಲ್ಲದವರು ನೋಡುತಿಹರು ಬರಿಯ ನಭ|
ಒಂದೆಡೆ ಹಾಹಾಕಾರ ಇನ್ನೊಂದೆಡೆ
ಸ್ವೇಚ್ಚಾಚಾರವ ಕಂಡು ವಿಚಲಿತನಾಗದಿರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಗಳು ಮಾತಾಡುತ್ತವೆ
Next post ಕನ್ನಡಿಗರ ಹಾಡು!

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys