Home / ಕವನ / ಕವಿತೆ / ಹೋಲಿಸದಿರಿ ಈ ರಾಜ್ಯ

ಹೋಲಿಸದಿರಿ ಈ ರಾಜ್ಯ

ಈ ದೇಶದ ಸಂಸ್ಕೃತಿಯ
ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ|
ಅಲ್ಪಾಯುಗಾಯುಷ್ಯ ದೇಶದ ಮುಂದೆ
ದೀರ್‍ಘಾ, ಸುದೀರ್‍ಘಾ ಯುಗಾಂತರದ
ನಮ್ಮದೇಶವನೆಂದೂ ಹೋಲಿಸದಿರಿ||

ನೂರಾರು ಭಾಷೆ ಸಾವಿರಾರು ಜಾತಿ
ಕೋಟಿ ದೇವರುಗಳ ನಾಡು ನುಡಿಯ
ಅಂತರಂಗವ ತಿಳಿಯದೆ|
ಕೇವಲ ಹೊಟ್ಟೆಹೊರಿಯುವ ಅಪರ
ವಿದ್ಯೆಯ ಕಲಿತು
ಅತೀ ಬುದ್ದಿವಂತರೆಂಬಂತೆ ವರ್‍ತಿಸಿ
ಅನ್ಯದೇಶಿಗರ ಮೆಚ್ಚಿಸೆ ಈ ನಾಡ
ಸಂಸ್ಕೃತಿಯ ಬಾಹ್ಯ ನೋಟವ
ನೋಡಿ ತಿರುಚದಿರಿ ಇತಿಹಾಸವನು||

ನಮ್ಮ ದೇಶದ ಜನರ ಬುದ್ದಿವಂತಿಕೆ
ಬಿಡಿಕಾಸಿಗೆ ಕೊಂಡು, ಬರಿಯ ವಿಜ್ಞಾನ
ತಂತ್ರಜ್ಞಾನದಿ ಮುಂದುವರೆದ ಮಾತ್ರಕ್ಕೆ
ಈ ನಾಡ ಶ್ರೀಮಂತ ಸಂಸ್ಕೃತಿಯ
ಕಡೆಗಣಿಸಲು ಯಾರಿಗೂ ಹಕ್ಕಿಲ್ಲ||

ಅನ್ಯರಿಗೆ ಅಳತೆಗೋಲು ನಮ್ಮ ಸುಪ್ರಸಿದ್ದ
ಸಂಸ್ಕೃತಿ, ಇದನ್ನಳೆಯಲು ಸಾಧ್ಯವೇನು?
ಅನ್ಯರ ಮಾನದಂಡ ಈ ನಮ್ಮ ಇತಿಹಾಸ|
ಯುಗ, ಪರ್‍ವ, ಪುಷ್ಪಕ ವಿಮಾನ ಕಂಡುಹಿಡಿದ
ಸಾಗರೋಲ್ಲಂಘನ ಮಾಡಿದ ಹನುಮನ
ಪರಾಕ್ರಮದ ಮುಂದೆ ಕ್ಷಿಪಣಿ ಹಾರಿಸಿ ಖುಶಿಪಟ್ಟಂತೆ|

ದೇವರ ಪ್ರಥಮ ಪುರುಷರ ನಾಡಿದು
ದೇವರ ಭಾಷೆಯ ಬೀಡಿದು|
ದಶಕಗಟ್ಟಲೆ ಉಪವಾಸ, ಧ್ಯಾನ, ತಪಸ್ಸಮಾಡಿ
ದೇವರ ರೂಪವ, ಸತ್ಯವ ಕಂಡುಹಿಡಿದರ ಮುಂದೆ
ಈ ನಿಮ್ಮ ಸಾಕಾರ, ನಿರಾಕಾರದ
ಬರಿಯ ಒಣಚರ್‍ಚೆ ವಿಪರ್‍ಯಾಸವಲ್ಲದೆ
ಅಂತರಾಷ್ಟ್ರಿಯ ಧರ್‍ಮಾಚರಣೇಯ ನಾಟಕವೇ ಸರಿ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...