ಕರಿಯ ಪ್ರತಿಮೆ

ನಮ್ಮೂರಿನ ಕರಿಯ
ಕಂಠದೊಳಗಿನ ಕೆಂಡದುರಿಯಲ್ಲಿ
ಕೊಂಡ ಹಾಯುವ ಗೆಳೆಯ
ಬಯಸುತ್ತಾನೆ ಮನೆಯ
ಕನಸುತ್ತಾನೆ ಬೆಳೆಯ-
ತೆನ ತೂಗೀತು! ಮನೆ ಮಾಗೀತು
ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು?

ಆಗಸ್ಟ್ ಹದಿನೈದು ಹರಿಯಿತು
ಚಿಂದಿ ಬಾಳಿನ ಬಟ್ಟೆ
ಜನವರಿ ಇಪ್ಪತ್ತಾರು ಮರೆಯಿತು
ಜನಮನದ ಚಿಟ್ಟೆ
ಏಪ್ರಿಲ್ ಹದಿನಾಲ್ಕು- ಮತ್ತೊಂದು ಮೆಲುಕು.

ಅಂಬೇಡ್ಕರ್ ಆತ್ಮವಿಶ್ವಾಸ ಹರಿದದ್ದು
ಕೆಂಡಮಂಡಲ ಮನಸಿನಲ್ಲಿ
ಚಲನೆ ಚಕ್ರ ಜಡತೆಯನ್ನು ಜರೆದದ್ದು
ಕೊಳಕು ಮಂಡಲ ಮೆದುಳಿನಲ್ಲಿ.

ನಮ್ಮ ಕರಿಯ, ಮೇಲೆದ್ದು ಮೆರವಣಿಗೆ ಸೇರಿದ
ಹೊರಾಟ ಹೊತ್ತಿ ಉರಿಯುವಾಗ ಒಳಗೇ ಕರಗಿದ
ಕಾಣಲೇಬೇಕು ಅಂಬೇಡ್ಕರ್ ಎಂದು ಕೊರಗಿದ
ಬೀದಿ ಬೀದಿಯಲ್ಲಿ ಬೆವರು ಬಿತ್ತಿ ಕಂಗಾಲಾಗಿ ತಿರುಗಿದ

ಬಿರುಗಾಳಿಯಲ್ಲಿ ತರಗೆಲೆ ಹಾರುತ್ತಿರುವಾಗ
ವಿಧಾನಸೌಧದ ಮೆಟ್ಟಿಲು ಮೆಟ್ಟಲು ಬಂದ
ಕೂಗುತ್ತಿರುವ ಕಂಠಗಳು ಸೊಂಟಮುರಿದು
ಬಿಕ್ಕುವ ಮನಸ್ಸು ಕಣ್ಣಿಗೆ ಬಂದು ನೋಡಿದ-

ಕರಿಯ ಮೈ ಕಲ್ಲಾಗಿ ನಿಂತಿರುವ
ಅಂಬೇಡ್ಕರ್ ಪ್ರತಿಮೆ ಕಂಡ ಕರಿಯ
ಅಂಬೆಗಾಲಿಡುತ್ತ ಹತ್ತಿರ ಬಂದ
ತನಗೇ ಕೋಟು ಬೂಟು ಹಾಕಿ
ಕಲ್ಲು ನಿಲ್ಲಿಸಿದಂತೆ ಕಂಡು
ದೊಪ್ಪನೆ ಮೂರ್ಛೆಗೆ ಸಂದ!

ಅಂಬೇಡ್ಕರ್ ಕೈ ಕೆಳಗಿಳಿಯಲಿಲ್ಲ
ಕರಿಯನ ಮೈ ಸವರಲಿಲ್ಲ!
ಮೂರ್ಛೆಯೊಂದಿಗೆ ಮಾತಾಡಲಿಲ್ಲ
ಯಾಕೆಂದರೆ ಅದು ಸರ್‍ಕಾರಿ ಪ್ರತಿಮೆ
ಆಚರಣೆಗೆ ಹುಟ್ಟಿದ ಹದಿನಾಲ್ಕರ ಒಲುಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುರಾಸೆಯ ದುರ್ಗತಿಗೆ ದೃಷ್ಟಾಂತ-ಬೆನ್ ಜಾನ್ಸನ್‌ನ -Volpone
Next post ಹೋಲಿಸದಿರಿ ಈ ರಾಜ್ಯ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys