Home / ಕವನ / ಕವಿತೆ / ಕರಿಯ ಪ್ರತಿಮೆ

ಕರಿಯ ಪ್ರತಿಮೆ

ನಮ್ಮೂರಿನ ಕರಿಯ
ಕಂಠದೊಳಗಿನ ಕೆಂಡದುರಿಯಲ್ಲಿ
ಕೊಂಡ ಹಾಯುವ ಗೆಳೆಯ
ಬಯಸುತ್ತಾನೆ ಮನೆಯ
ಕನಸುತ್ತಾನೆ ಬೆಳೆಯ-
ತೆನ ತೂಗೀತು! ಮನೆ ಮಾಗೀತು
ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು?

ಆಗಸ್ಟ್ ಹದಿನೈದು ಹರಿಯಿತು
ಚಿಂದಿ ಬಾಳಿನ ಬಟ್ಟೆ
ಜನವರಿ ಇಪ್ಪತ್ತಾರು ಮರೆಯಿತು
ಜನಮನದ ಚಿಟ್ಟೆ
ಏಪ್ರಿಲ್ ಹದಿನಾಲ್ಕು- ಮತ್ತೊಂದು ಮೆಲುಕು.

ಅಂಬೇಡ್ಕರ್ ಆತ್ಮವಿಶ್ವಾಸ ಹರಿದದ್ದು
ಕೆಂಡಮಂಡಲ ಮನಸಿನಲ್ಲಿ
ಚಲನೆ ಚಕ್ರ ಜಡತೆಯನ್ನು ಜರೆದದ್ದು
ಕೊಳಕು ಮಂಡಲ ಮೆದುಳಿನಲ್ಲಿ.

ನಮ್ಮ ಕರಿಯ, ಮೇಲೆದ್ದು ಮೆರವಣಿಗೆ ಸೇರಿದ
ಹೊರಾಟ ಹೊತ್ತಿ ಉರಿಯುವಾಗ ಒಳಗೇ ಕರಗಿದ
ಕಾಣಲೇಬೇಕು ಅಂಬೇಡ್ಕರ್ ಎಂದು ಕೊರಗಿದ
ಬೀದಿ ಬೀದಿಯಲ್ಲಿ ಬೆವರು ಬಿತ್ತಿ ಕಂಗಾಲಾಗಿ ತಿರುಗಿದ

ಬಿರುಗಾಳಿಯಲ್ಲಿ ತರಗೆಲೆ ಹಾರುತ್ತಿರುವಾಗ
ವಿಧಾನಸೌಧದ ಮೆಟ್ಟಿಲು ಮೆಟ್ಟಲು ಬಂದ
ಕೂಗುತ್ತಿರುವ ಕಂಠಗಳು ಸೊಂಟಮುರಿದು
ಬಿಕ್ಕುವ ಮನಸ್ಸು ಕಣ್ಣಿಗೆ ಬಂದು ನೋಡಿದ-

ಕರಿಯ ಮೈ ಕಲ್ಲಾಗಿ ನಿಂತಿರುವ
ಅಂಬೇಡ್ಕರ್ ಪ್ರತಿಮೆ ಕಂಡ ಕರಿಯ
ಅಂಬೆಗಾಲಿಡುತ್ತ ಹತ್ತಿರ ಬಂದ
ತನಗೇ ಕೋಟು ಬೂಟು ಹಾಕಿ
ಕಲ್ಲು ನಿಲ್ಲಿಸಿದಂತೆ ಕಂಡು
ದೊಪ್ಪನೆ ಮೂರ್ಛೆಗೆ ಸಂದ!

ಅಂಬೇಡ್ಕರ್ ಕೈ ಕೆಳಗಿಳಿಯಲಿಲ್ಲ
ಕರಿಯನ ಮೈ ಸವರಲಿಲ್ಲ!
ಮೂರ್ಛೆಯೊಂದಿಗೆ ಮಾತಾಡಲಿಲ್ಲ
ಯಾಕೆಂದರೆ ಅದು ಸರ್‍ಕಾರಿ ಪ್ರತಿಮೆ
ಆಚರಣೆಗೆ ಹುಟ್ಟಿದ ಹದಿನಾಲ್ಕರ ಒಲುಮೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...