ಪರಾತ್‌ಪರ!

ಎಂತು ನೀನಿಹೆಯೋ-ಪರಾತ್‌ಪರ
ಎಲ್ಲಿರುತಿಹೆಯೋ ?
ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ
ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ!


ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ
ಘನತರ ರೂಪವನರಿತುಕೊಳ್ಳದೆಯೆ….
ಮನಕೆ ಬಂದಂತೆ ಚಿತ್ರಿಸಿ ಪೂಜಿಸುತ ನಿನ್ನ
ಅನುದಿನ ನಿರ್‍ನೆರ ದಣಿಯುತ್ತಲಿಹೆನೋ!


ಕ್ಷೀರೋದನಿಧಿಯಲ್ಲಿ ವೈಕುಂಠಪುರದಲ್ಲಿ
ದೂರ ಕೈಲಾಸ-ಸ್ವರ್ಗದೆಳಿಹೆ ನೀನೆಂದು-
ಗಾರುಗೊಂಡಿಹೆನೋ ನಿನ್ನಯ ತಾಣ ತಿಳಿಯದೆ,
ಸಾರಿ ಹೇಳುವ ನಿನ್ನ ನುಡಿಯನ್ನು ನಂಬದೆ!


ಕಲ್ಲು – ಕಂಚಿನ ಗೊಂಬೆಯಲ್ಲಿ ನಿಲ್ಲದಲೀಗ
ಫುಲ್ಲಹೃದಯದ ಯೋಗಿಗಳ ಮನದಿ ನಿಂದು,
ಬಲ್ಲಿದನೆ ನಿನ್ನಯಾ ಮೈಯನು ಮನೆಯನು
ಬಲ್ಲವನು ನಾನಾಗುವೊಲು ಬೋಧಿಸೆನಗೆ!
* * *
ಎಂತು ನೀನಿಹೆಯೋ-ಪರಾತ್ಪರ,
ಎಲ್ಲಿರುತಿಹೆಯೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಲಿಸದಿರಿ ಈ ರಾಜ್ಯ
Next post ಪ್ರಯಾಣದ ಕೊನೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys