ಅಮ್ಮಾ ಎಂದು ಯಾರನು?

ಅಮ್ಮ ಎಂದು ಯಾರನು ಕೂಗಲಿ?
ಅಮ್ಮ ಎಂದು ಯಾರ ತಬ್ಬಿಕೊಳಲಿ|
ನಿನ್ನ ಪ್ರೀತಿ ಮಮತೆ ಸಿಗದೀಜಗದಿ
ನಾನಾದೆನಿಂದು ತಬ್ಬಲಿ||

ಅಮ್ಮಾ ನನ್ನ ಆಸೆಗಳನ್ನೆಲ್ಲಾ
ಯಾರಬಳಿ ಹೇಳಲಿ
ಅಮ್ಮ ನನ್ನ ಬೇಕು ಬೇಡಗಳ
ಹೇಗೆ ತಾನೆ ತಿಳಿಯಲಿ|
ಅಮ್ಮಾ ನನ್ನ ಸರಿ ತಪ್ಪುಗಳ
ಹೇಗೆ ಸರಿಪಡಿಸಲಿ|
ಅಮ್ಮಾ ನಾ ಹೆದರಿದಾಗ
ಯಾರನು ತಬ್ಬಿ ಮಲಗಲಿ||

ಅಮ್ಮಾ ನನಗೊಂದು ವೇಳೆ
ಸಂತೋಷವೇನಾದರೂ ಆದರೆ
ಯಾರ ಬಳಿ ಹೇಳಲಿ|
ಅಮ್ಮಾ ನಿನ್ನ ಪ್ರೀತಿ ನೆನೆದು
ಅಳು ಬಂದೊಡನೆ
ಯಾರ ಬಳಿ ಓಡಲಿ||

ಅಮ್ಮ ನಿನ್ನ ಪ್ರೀತಿಗೆ ಸಮವುಂಟೇ ಈಜಗದಿ|
ಹೆತ್ತ ಕರುಳ ಮಮತೆ ಸಿಗುವುದುಂಟೆ?
ನಾನು ಮರೀಚಿಕೆ ನೆಚ್ಚಿ ಓಡುತಿರುವೆ
ಅದು ನನಗೆ ಈ ಜನ್ಮದಲಿ ಸಿಗುವುದೆ ?
ದೇವಾ ನನ್ನ ಯಾವ ತಪ್ಪಿಗೆ ಈ ಶಿಕ್ಷೆ
ನನ್ನಂತವರಿಗೆ ಇರಲಿ ನಿನ್ನಯಾ ಶ್ರೀರಕ್ಷೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿವು
Next post ಶಬರಿಯ ಬಾಳು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…