ಚತುಷ್ಪಥ ರಸ್ತೆಗಳು

ಮಿರಿ ಮಿರಿ ಮಿಂಚುತಿದೆ
ನಾಕು ಹೆಡೆಯ ನಾಗರದಂತಿದೆ

ಕೆಂಪು ಹಸಿರು ಹಳದಿ
ಹೆಡೆ ಮಣಿಗಳು ಮಿನುಗುತ್ತಿವೆ

ಬಾಗಿದೆ ಬಳುಕಿದೆ
ವಿಷದ ಹೊಳೆ ಹರಿದಂತಿದೆ
ಎಲ್ಲವ ನುಂಗಲು ಕಾದಂತಿದೆ

ಗರಿ ಗರಿ ನೋಟಿನದೇ ಮಾಟ
ಭಾರೀ ಮಷೀನುಗಳದೇ ಆಟ

ಮಿತಿಯಿಲ್ಲದೆ ಮತಿಯಿಲ್ಲದೆ
ವಾಹನಗಳು ದಿಕ್ಕೆಟ್ಟು ಓಡುತಿವೆ

ಗಾಲಿಗಳ ಮೇಲೆ ಸರಕಿನ
ಸಾಮ್ರಾಜ್ಯವೇ ಉರುಳುತಿದೆ

ಬರಿಗಾಲುಗಳು ಇದನು ಮೆಟ್ಟುವಂತಿಲ್ಲ
ಸುಂಕ ನೀಡದೆ ದಾಟುವಂತಿಲ್ಲ

ಇಲ್ಲೊಂದು ಕಾಲುದಾರಿಯಿತ್ತು
ಅದು ಕರೆದೊಯ್ಯುತ್ತಿತ್ತು ನನ್ನೂರಿಗೆ

ಈಗ…. ಅದಿಲ್ಲ….
ಇಲ್ಲ…… ಇದು ನನ್ನೂರೇ ಅಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜುಡಾಸ್
Next post ತಂಪು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…