ದಾಹ

ಕಸಿಯುತ್ತಾರೆ ಅನ್ನ
ಕಾಣುತ್ತಾರೆ ಜೀತದಾಳಿನಂತೆ
ಚಿಗುರುವ ಮುನ್ನ
ಹಿಸುಕುತ್ತಾರೆ ಮೊಳಕೆಯಲಿ
ತೊಗಲು ಸುಲಿವಂಗೆ
ಎಲ್ಲುಂಟು ಮಾನವೀಯತೆ
ರೆಕ್ಕೆ ಕತ್ತರಿಸಲು
ಹಾತೊರೆಯುವ ಅಮಲಿನ ಜನ
ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ
ಪೂಜಾರಿ ಮುಂದೆ
ದೇವನಾಟವೇ?
ವಿಜೃಂಭಿಸುತಿದೆ
ಸಂಚು ಹೊಂಚು
ಅತ್ಯಾಚಾರ ಅನಾಚಾರ
ಗಣಿ ಧನ ದಾಹ
ದೇಶದಲಿ ಏನುಂಟು ಏನಿಲ್ಲ
ತಣಿಯದ ಅಧಿಕಾರ ದಾಹ
ಕುರ್‍ಚಿ ಅಲುಗಾಡುತಿದೆ
ಬಿಡಲುಂಟೆ ಕುರ್‍ಚಿ ವ್ಯಾಮೋಹ
ಮೆರೆಯುವುದು
ಕ್ರೌರ್‍ಯ ಸ್ವಾರ್‍ಥ ಬ್ರಷ್ಟಾಚಾರ
ಅಭಿವೃದ್ಧಿ ನೆಪದಲಿ
ಬಡ ರೈತರ ಜೀವಕೆ ಸಂಚಕಾರ
ಜಾತಿ ಅಂಧಕಾರದಲಿ
ಮಾತು ಗೋಸುಂಬೆ
ಅತೃಪ್ತರೇ ತುಂಬಿ
ತುಳುಕುತ್ತಿರುವ
ಜಗತ್ತಿನಲಿ
ಎಲ್ಲಾ ಮುಳ್ಳು ಮುಳ್ಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಸಂದರ್ಶನ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…