ಕಸಿಯುತ್ತಾರೆ ಅನ್ನ
ಕಾಣುತ್ತಾರೆ ಜೀತದಾಳಿನಂತೆ
ಚಿಗುರುವ ಮುನ್ನ
ಹಿಸುಕುತ್ತಾರೆ ಮೊಳಕೆಯಲಿ
ತೊಗಲು ಸುಲಿವಂಗೆ
ಎಲ್ಲುಂಟು ಮಾನವೀಯತೆ
ರೆಕ್ಕೆ ಕತ್ತರಿಸಲು
ಹಾತೊರೆಯುವ ಅಮಲಿನ ಜನ
ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ
ಪೂಜಾರಿ ಮುಂದೆ
ದೇವನಾಟವೇ?
ವಿಜೃಂಭಿಸುತಿದೆ
ಸಂಚು ಹೊಂಚು
ಅತ್ಯಾಚಾರ ಅನಾಚಾರ
ಗಣಿ ಧನ ದಾಹ
ದೇಶದಲಿ ಏನುಂಟು ಏನಿಲ್ಲ
ತಣಿಯದ ಅಧಿಕಾರ ದಾಹ
ಕುರ್ಚಿ ಅಲುಗಾಡುತಿದೆ
ಬಿಡಲುಂಟೆ ಕುರ್ಚಿ ವ್ಯಾಮೋಹ
ಮೆರೆಯುವುದು
ಕ್ರೌರ್ಯ ಸ್ವಾರ್ಥ ಬ್ರಷ್ಟಾಚಾರ
ಅಭಿವೃದ್ಧಿ ನೆಪದಲಿ
ಬಡ ರೈತರ ಜೀವಕೆ ಸಂಚಕಾರ
ಜಾತಿ ಅಂಧಕಾರದಲಿ
ಮಾತು ಗೋಸುಂಬೆ
ಅತೃಪ್ತರೇ ತುಂಬಿ
ತುಳುಕುತ್ತಿರುವ
ಜಗತ್ತಿನಲಿ
ಎಲ್ಲಾ ಮುಳ್ಳು ಮುಳ್ಳು
*****
Related Post
ಸಣ್ಣ ಕತೆ
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…