ಅಧಿಕಾರ

ಈ ನೆಲದ ಗಾಳಿ ನೀರು ಬೆಳಕು
ತೊಗೋಳ್ಳಾಕ ನಮಗ ಹಕ್ಕೈತಿ
ಹರಿತ ಮಾತುಗಳೆಂಬಲಗಿನ್ಯಾಗ
ಹೃದಯವನ್ಯಾಕ ತಿವಿತೀರಿ
ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ
ಕಾಲಾಗ ಹೊಸಕಿ ನಮ್ಮ
ಸೊಲ್ಲ ಇಲ್ದಾಂಗ ಮಾಡ್ತಿರಿ
ಇದರಾಗ ಸ್ವರ್‍ಗ ಕಾಣ್ತೀರಿ
ತನ್ನ ಮೂಲವನ್ನರಿಯಲಾರದೇ
ಅಧಿಕಾರದ ಅಮಲಿನ್ಯಾಗ
ನಮ್ಮ ಹುಟ್ಟು ಸಾವು ತಮ್ಮ
ಕೈಯಾಗೈತೆಂದು ಢುರ್‍ಕಿ ಹಾಕ್ತಿರಿ
ರಂಡಿ ಮುಂಡೇರ ಮಕ್ಕಳು
ಮೂಗ್ದಾಣಿಲ್ಲದ ಗೂಳಿ ಹಾಂಗ
ದುರಹಂಕಾರಿಯಾಗಿ ಓಲಾಡ್ತೀರಿ
ಜಾತಿ ಬುದ್ದಿ ತೋರಿಸ್ತೀರಿ
ಕಾಗೀಗೆ ಅಧಿಕಾರ ಕೊಟ್ರ
ಕಛೇರಿ ತುಂಬಾ…..ಹಾಂಗ
ಕಡೀಗೆ ಹಳೇ ಗಂಡನ
ಪಾದವೇ ಗತಿಯಾದೀತೆಂದು
ಹ್ಯಾಂಗ ತಿಳಿದೀತು
ನಮೋ ನಮೋ ದೇವಾ
ಇವರ ನಡುವೆ ಹ್ಯಾಂಗ ಬದುಕಬೇಕು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗು
Next post ಭದ್ರಶೆಟ್ಟಿಯ ಬದುಕು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…