ಈ ನೆಲದ ಗಾಳಿ ನೀರು ಬೆಳಕು
ತೊಗೋಳ್ಳಾಕ ನಮಗ ಹಕ್ಕೈತಿ
ಹರಿತ ಮಾತುಗಳೆಂಬಲಗಿನ್ಯಾಗ
ಹೃದಯವನ್ಯಾಕ ತಿವಿತೀರಿ
ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ
ಕಾಲಾಗ ಹೊಸಕಿ ನಮ್ಮ
ಸೊಲ್ಲ ಇಲ್ದಾಂಗ ಮಾಡ್ತಿರಿ
ಇದರಾಗ ಸ್ವರ್ಗ ಕಾಣ್ತೀರಿ
ತನ್ನ ಮೂಲವನ್ನರಿಯಲಾರದೇ
ಅಧಿಕಾರದ ಅಮಲಿನ್ಯಾಗ
ನಮ್ಮ ಹುಟ್ಟು ಸಾವು ತಮ್ಮ
ಕೈಯಾಗೈತೆಂದು ಢುರ್ಕಿ ಹಾಕ್ತಿರಿ
ರಂಡಿ ಮುಂಡೇರ ಮಕ್ಕಳು
ಮೂಗ್ದಾಣಿಲ್ಲದ ಗೂಳಿ ಹಾಂಗ
ದುರಹಂಕಾರಿಯಾಗಿ ಓಲಾಡ್ತೀರಿ
ಜಾತಿ ಬುದ್ದಿ ತೋರಿಸ್ತೀರಿ
ಕಾಗೀಗೆ ಅಧಿಕಾರ ಕೊಟ್ರ
ಕಛೇರಿ ತುಂಬಾ…..ಹಾಂಗ
ಕಡೀಗೆ ಹಳೇ ಗಂಡನ
ಪಾದವೇ ಗತಿಯಾದೀತೆಂದು
ಹ್ಯಾಂಗ ತಿಳಿದೀತು
ನಮೋ ನಮೋ ದೇವಾ
ಇವರ ನಡುವೆ ಹ್ಯಾಂಗ ಬದುಕಬೇಕು?
*****
Related Post
ಸಣ್ಣ ಕತೆ
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…