Home / ಕವನ / ಕವಿತೆ / ನೆನಪುಗಳೇ ಹೀಗೆ

ನೆನಪುಗಳೇ ಹೀಗೆ

ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ
ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ

ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ
ಮಳೆ ಹನಿ ಸೋಕಿದಾಗ
ಬಿಚ್ಚಿದ್ದು ನೆನಪುಗಳ ಸರಮಾಲೆ

ಕಡಲ ದಂಡೆಯಲಿ ಮರಳಾಟ ಆಡಿದ್ದು
ಅಲೆಗಳಲಿ ಸಿಲುಕಿದಾಗ ನಾನು ಬಿದ್ದದ್ದು
ಅಷ್ಟರಲಿ ನೀನೋಡೋಡಿ ಬಂದದ್ದು
ನನ್ನನ್ನು ಬರಸೆಳೆದು ನಿನ್ನೆದೆಗಾನಿಸಿಕೊಂಡದ್ದು
ನನ್ನ ಮೈಯೆಲ್ಲ ಜುಂ ಜುಂ ಎಂದದ್ದು
ಮರೆತಿಲ್ಲ ನಿನ್ನುಸಿರು ಎನ್ನೆದೆ ಸವರಿದ್ದು

ಮೊನ್ನೆ ನನ್ನ ಮಾತನಾಡಿಸದೇ ಹೋದದ್ದು
ಏಕಿಷ್ಟು ಸಿಟ್ಟು ಬಿಡು ಹುಸಿ ಕೋಪ
ನಾನೇನು ತಪ್ಪು ಮಾಡಿದ್ದೆ?
ಶಿಕ್ಷಿಸಬೇಡ ಮೌನವಾಗಿದ್ದು
ಬೊಗಸೆ ತುಂಬಾ ನೀಡುವೆ ಪ್ರೀತಿ

ಮಾಡದ ತಪ್ಪಿಗೆ ಮನ್ನಿಸೆಂದು
ಹಗಲಿರುಳೆಲ್ಲಾ ದೇವರಲ್ಲಿ ಬೇಡಿದೆ ಗೊತ್ತಾ!

ಹೋದೆ ಮಾರನೇ ದಿನ ಕಛೇರಿಗೆ
ನಿನ್ನ ಪ್ರೇಮದೋಲೆ ಕಂಡು
ಬಂದಿತು ಈ ದೇಹಕೆ ಮರುಜೀವ
ಗುಲ್ಮೊಹರು ಮರದ ನೆರಳಿನಲಿ
ಹರಟೆ ಪ್ರೀತಿ ಪಿಸು ಮಾತು
ಪ್ರೇಮಿಗಳಾಟ ಆಡೋಣು ಕುಳಿತಲ್ಲಿ
ಬಾ ಎಂದು ಬರೆದದ್ದು ಸ್ವರ್‍ಗಕ್ಕೆ
ಮೂರೇ ಗೇಣು ಎಂದೆನಿಸಿತ್ತು.

ನಿನ್ನೊಂದಿಗೆ ಸಿದ್ಧಳಾದವಳು ನಾನಾಗಲೇ
ಸುದೀರ್ಘ ಜೀವನ ಪಯಣಕೆ

ಇಲ್ಲಿ ಮತ್ತೆ ಜಿನುಗುತಿದೆ
ಇದ್ದೀನಿಲ್ಲಿ ನಿನ್ನ ನೆನಪಲ್ಲೇ
ಕಾಯುತ್ತಿದ್ದೇನೆ ನಿನ್ನಾಗಮನಕ್ಕಾಗಿ

ನೆನಪುಗಳೇ ಹೀಗೆ
ಮುಂಗುರುಳಿನೊಂದಿಗೆ ಲಾಸ್ಯವಾಡಿದಂತೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...