Home / ಕವನ / ಕವಿತೆ / ಇದು ಬರಿ ನಾಡಲ್ಲೋ…

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ
ಇದು ಬರಿ ನಾಡಲ್ಲೋ…||

ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು
ಹಲವು ಪ್ರಥಮಗಳ ವೈಭವದ ನಾಡು
ಕ್ರಾಂತಿಕಾರಕ ರೈತ ಚಳುವಳಿಗಳ ನಾಡು
ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು||

ಕುವೆಂಪು ಹಾಮಾನಾ ಮೂರ್ತಿ ತೇಜಸ್ವಿ ಜಿ‌ಎಸ್ಸೆಸ್‌
ಲಂಕೇಶ್‌ ಸುಬ್ಬಣ್ಣ ಶಾಂತವೇರಿ ಶಾಂತಲೆಯನಿತ್ತ ನಾಡು
ಪರಮದೇವ ದೇವತಾರಾಮಯ್ಯ ಲಿಂಗಣ್ಣ
ಕವಿ ವರೇಣ್ಯರು ಜನಿಸಿದ ನಾಡು ||

ಸ್ನೇಹ ಹಸ್ತವ ಚಾಚಿದ ವೀರಾಗ್ರಣಿ
ಕೆಳದಿ ಚೆನ್ನಮ್ಮನಾಳಿದ ನಾಡು
‘ಸಿಸ್ತು’ ತಂದ ಶಿಸ್ತಿನ ಶಿವಪ್ಪನಾಯಕನಾಳಿದ ನಾಡು
ಕೋಟೆ ಕೊತ್ತಲಗಳ ಶಿಲಾಶಾಸನಗಳ ಬೀಡು ||

ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು
ಈ ಮಲೆನಾಡ ಚಪ್ಪರದಲಿ ಬಿಟ್ಟ ಕಾಯ್ಗಳನೇಕ
ನಾಲ್ವರು ಮುಖ್ಯಮಂತ್ರಿಗಳನ್ನಿತ್ತ ಹೆಮ್ಮೆಯ ನಾಡು
ಕರುನಾಡಿನಲಿ ಶಿಖರದಂತೆ ಮೆರೆತಿಹುದು ಈ ನಾಡು ||

ತುಂಗ ಭದ್ರೆ ಶರಾವತಿ
ಕುಮದ್ವತಿ ವರದೆ ಹರಿದಿಹ ನಾಡು
ಅಡಿಕೆ ತೆಂಗು ಜಾಗರವಾಡುವ ನಾಡು
ಸಿರಿ ಗಂಧದ ಕಂಪ ಸೂಸುವ ಬೀಡು ||

ರಾಜಾ ರಾಣಿ ರೋರರ್ ರಾಕೆಟ್
ನಾಲ್ಕು ಟಿಸಿಲಿನ ಘರ್ಜನೆಯ ರೋಮಾಂಚನ
ಚಲುವಿನ ಸಿರಿ ಜೋಗದ ಬೀಡು
ಈ ಜಗಕೆ ಬೆಳಕ ನೀಡಿದ ನಾಡು ||

ಸರ್‍ವಧರ್‍ಮಗಳ ಸಮನ್ವಯದ ಪ್ರತೀಕ ಈ ನಾಡು
ಕೈಗಾರಿಕೋದ್ಯಮ ಕಲರವದ ಬೀಡು
ಶಿಕ್ಷಣ ತಂತ್ರಜ್ಞಾನದಿ ನಲಿದಿಹ ನಾಡು
ಸಾಹಿತ್ಯ ಕಲೆ ಸಂಸ್ಕೃತಿ ಶಿಲ್ಪಕಲೆಗಳ ತವರೂರು ||

ಸಹ್ಯಾದ್ರಿ ಕೊಡಚಾದ್ರಿಯ ಸೆರಗಿನಲಿ
ಸಸ್ಯಶ್ಯಾಮಲೆಯಲ್ಲರಳಿದ ಈ ನಾಡು
ಪಕ್ಷಿ ಸಂಕುಲ ಸಿಂಹದಾಮ ಗುಡ್ಡಬೆಟ್ಟಗಳ ಸಾಲೇ ಸಾಲು
ಎತ್ತರೆತ್ತರ ಮರಗಿಡ ಬಳ್ಳಿ ಕೈಬೀಸಿ ಕರೆತಿಹವು ||
*****
೮-೧-೨೦೧೦ರಲ್ಲಿ ಶಿವಮೊಗ್ಗಾದ ಕ್ರಾಂತಿದೀಪ ಪತ್ರಿಕೆಯಲ್ಲಿ ಪ್ರಕಟ.
೯-೧-೨೦೧೦ರ ಸೃಷ್ಠಿರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...