Home / ಕವನ / ಕವಿತೆ / ಇದು ಬರಿ ನಾಡಲ್ಲೋ…

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ
ಇದು ಬರಿ ನಾಡಲ್ಲೋ…||

ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು
ಹಲವು ಪ್ರಥಮಗಳ ವೈಭವದ ನಾಡು
ಕ್ರಾಂತಿಕಾರಕ ರೈತ ಚಳುವಳಿಗಳ ನಾಡು
ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು||

ಕುವೆಂಪು ಹಾಮಾನಾ ಮೂರ್ತಿ ತೇಜಸ್ವಿ ಜಿ‌ಎಸ್ಸೆಸ್‌
ಲಂಕೇಶ್‌ ಸುಬ್ಬಣ್ಣ ಶಾಂತವೇರಿ ಶಾಂತಲೆಯನಿತ್ತ ನಾಡು
ಪರಮದೇವ ದೇವತಾರಾಮಯ್ಯ ಲಿಂಗಣ್ಣ
ಕವಿ ವರೇಣ್ಯರು ಜನಿಸಿದ ನಾಡು ||

ಸ್ನೇಹ ಹಸ್ತವ ಚಾಚಿದ ವೀರಾಗ್ರಣಿ
ಕೆಳದಿ ಚೆನ್ನಮ್ಮನಾಳಿದ ನಾಡು
‘ಸಿಸ್ತು’ ತಂದ ಶಿಸ್ತಿನ ಶಿವಪ್ಪನಾಯಕನಾಳಿದ ನಾಡು
ಕೋಟೆ ಕೊತ್ತಲಗಳ ಶಿಲಾಶಾಸನಗಳ ಬೀಡು ||

ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು
ಈ ಮಲೆನಾಡ ಚಪ್ಪರದಲಿ ಬಿಟ್ಟ ಕಾಯ್ಗಳನೇಕ
ನಾಲ್ವರು ಮುಖ್ಯಮಂತ್ರಿಗಳನ್ನಿತ್ತ ಹೆಮ್ಮೆಯ ನಾಡು
ಕರುನಾಡಿನಲಿ ಶಿಖರದಂತೆ ಮೆರೆತಿಹುದು ಈ ನಾಡು ||

ತುಂಗ ಭದ್ರೆ ಶರಾವತಿ
ಕುಮದ್ವತಿ ವರದೆ ಹರಿದಿಹ ನಾಡು
ಅಡಿಕೆ ತೆಂಗು ಜಾಗರವಾಡುವ ನಾಡು
ಸಿರಿ ಗಂಧದ ಕಂಪ ಸೂಸುವ ಬೀಡು ||

ರಾಜಾ ರಾಣಿ ರೋರರ್ ರಾಕೆಟ್
ನಾಲ್ಕು ಟಿಸಿಲಿನ ಘರ್ಜನೆಯ ರೋಮಾಂಚನ
ಚಲುವಿನ ಸಿರಿ ಜೋಗದ ಬೀಡು
ಈ ಜಗಕೆ ಬೆಳಕ ನೀಡಿದ ನಾಡು ||

ಸರ್‍ವಧರ್‍ಮಗಳ ಸಮನ್ವಯದ ಪ್ರತೀಕ ಈ ನಾಡು
ಕೈಗಾರಿಕೋದ್ಯಮ ಕಲರವದ ಬೀಡು
ಶಿಕ್ಷಣ ತಂತ್ರಜ್ಞಾನದಿ ನಲಿದಿಹ ನಾಡು
ಸಾಹಿತ್ಯ ಕಲೆ ಸಂಸ್ಕೃತಿ ಶಿಲ್ಪಕಲೆಗಳ ತವರೂರು ||

ಸಹ್ಯಾದ್ರಿ ಕೊಡಚಾದ್ರಿಯ ಸೆರಗಿನಲಿ
ಸಸ್ಯಶ್ಯಾಮಲೆಯಲ್ಲರಳಿದ ಈ ನಾಡು
ಪಕ್ಷಿ ಸಂಕುಲ ಸಿಂಹದಾಮ ಗುಡ್ಡಬೆಟ್ಟಗಳ ಸಾಲೇ ಸಾಲು
ಎತ್ತರೆತ್ತರ ಮರಗಿಡ ಬಳ್ಳಿ ಕೈಬೀಸಿ ಕರೆತಿಹವು ||
*****
೮-೧-೨೦೧೦ರಲ್ಲಿ ಶಿವಮೊಗ್ಗಾದ ಕ್ರಾಂತಿದೀಪ ಪತ್ರಿಕೆಯಲ್ಲಿ ಪ್ರಕಟ.
೯-೧-೨೦೧೦ರ ಸೃಷ್ಠಿರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...