Home / ಕವನ / ಕವಿತೆ / ಬೆವರುಗಳ್ಳರು

ಬೆವರುಗಳ್ಳರು

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ.
ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ.
ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ.

ಬೆವರದಿದ್ದರೆ-
ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು
ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು
ಮನಕ್ಕೆ ಆನಂದ ಸಿಗಲಾರದು

ಈ ಬೆವರ ಹನಿಗಳು ಅಡೆತಡೆಯಿಲ್ಲದೆ
ಹರಿದು ತಾವು ನಡೆದಾಡುವ ನೆಲವ ನೆನೆಸಿ
ತಂಪುಗೊಳಿಸಿ ಫಲವು ಫಲಿಸಿ
ಮತ್ತೊಬ್ಬರ ಮನವ ತಣಿಸುತಿರೆ….

ಇನ್ನು ಕೆಲವರಲ್ಲಿ ಹೊರ ಬರದ ಬೆವರು
ಒಳಗೊಳಗೆ ಹೆಪ್ಪು ಗಟ್ಟಿ ಮಲಗಿರಲು
ಇಂತಹವರು ಬದುಕನ್ನು
ತಮ್ಮ ಬೆವರಿನಲ್ಲಿ ತೇಲಿಸಲಾರರು
ಬೇರೆಯವರ ಬೆವರಿನಲ್ಲಿ ಅಟ್ಟಹಾಸದಿಂದ
ಕೇಕೆ ಹಾಕಿ ಕುಣಿಯುತ್ತಾರೆ ಬದುಕುತ್ತಾರೆ ಕೂಡ

ಈ ದೇಹದಲ್ಲಿ ರಕ್ತ ಬೆವರು ಬೇರೆ ಬೇರೆ
ಶುದ್ಧ ರಕ್ತಕೆ ಸುರಿಯಲೇಬೇಕು ಬೆವರು ಹೊರಗೆ
ಎಷ್ಟೋ ಜನ ಗುಲಾಮರು ಕೂಲಿ ಕಾರ್ಮಿಕರು ರೈತರು
ಬೆವರುವುದೇ ಬದುಕೆಂದು ತಿಳಿದು
ಅದರಲ್ಲೇ ಹೂತು ಹೋಗಿದ್ದಾರೆ

ಒಂದು ಚೂರು ಬೆವರದ ದೇವರು
ಬ್ರಹ್ಮಜ್ಞಾನಿಗಳೂ ಏಸಿ ರೂಮಿನಲ್ಲಿ ಕುಳಿತವರು
ರಾಜಕೀಯ ಮಂದಿಗಳಿಗೇನು ತಿಳಿದೀತು
ಬೆವರ ಮಹಿಮೆ ಬೆವರ ಬೆಲೆ

ಬೆವರ ಸುರಿಸದವರು ಸೃಷ್ಟಿಸಿದ ಧರ್ಮಗ್ರಂಥಗಳು
ಬೆವರ ಹನಿಗಳಿಗೆ ನೇಣಾದವು ಕುಣಿಕೆಯಾದವು
ಅನ್ನ ಸೃಷ್ಟಿಸುವ ಸದಾಕಾಲ ದುಡಿಯುವ ದೇಹಗಳು
ಗಮ್ಮೆಂದು ಸುರಿಸುವ ಬೆವರು
ಅಮೃತಕೆ ಸಮಾನ

ದುಡಿತದ ಬೆವರಿನಲಿ ವಿದ್ಯುತ್‌ ಸಂಚಾರವಿದೆ
ನಿರಂಕುಶ ಮನವಿದೆ ದಣಿವಿದೆ ರುಚಿಯಿದೆ
ಹೊಸದಿಟ್ಟ ಹೆಜ್ಜೆಯಿದೆ ಹೊಸ ಹುರುಪಿದೆ
ಹಾಡುಗಳಿವೆ ದನಿಯಿದೆ ಹೊಸ ಬೆಳಕಿದೆ
ಬೆವರಿಂದಲೇ ಹುಟ್ಟಿದವು ವಿವಿಧ ಹೋರಾಟಗಳು

ಶತಶತಮಾನಗಳಿಂದ
ವೈಭವದಿಂದ ಉಣ್ಣುತ್ತಾ ಢೇಕರಿಸುತ್ತಾ ಬಂದವರ
ಬೆವರೇ ನಿಜ ಬೆವರೆಂದು ನಂಬಿಸಿ
ಮತ್ತೊಬ್ಬರ ಸಮಾಧಿ ಮೇಲೆ
ಸೌಧ ಕಟ್ಟುವವರೇ ಹೆಚ್ಚು

ಏಸಿ ರೂಮಿನಲಿ ಕುಳಿತ ಇವರು
ತಮ್ಮ ಬೆವರಿನ ಜಲ ರಂದ್ರಗಳಿಗೆ
ವಿವಿಧ ಬಗೆಯ ಅತ್ತರು ಲೋಶನ್‌ಗಳು
ಸೆಂಟ್‌ಗಳನ್ನು ಜಡೆದು ತುಂಬಿ
ಬೆವರ ಬೆಲೆ ಕಳೆದವರು

ಬೆವರ ಪರಂಪರೆಗೆ ಕಿಚ್ಚು ಇಟ್ಟವರು
ಇವರು ಬೆವರುಗಳ್ಳರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...