Home / ಕವನ / ಕವಿತೆ / ಬಳೆ ಸರವಲ್ಲ

ಬಳೆ ಸರವಲ್ಲ

ಕೇಳಿರೈ ಸಭಾ ಬೆನ್ನೆಲವುಗಳೇ
ತಮಗೆದೆಗಾರ್‍ಕಿದ್ದೊಡೆ
ಎನ್ನ ಕಾವ್ಯವಂ ಮನದಲಿ ಪಠಿಸಿರೈ

ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ
ನಿನ್ನ ಕಾವ್ಯದಲ್ಲೇನಿಹುದು?
ಮೈ ಮುಚ್ಚುವುದೋ? ಉದರ ತುಂಬುವುದೋ
ಮೈ ಮೇಲಿನ ಆಭರಣವಾಗುವುದೋ
ನೀ ನುಡಿಯದಿರು ಅಹಂನಲಿ

ಹೌದು! ಎನಗಿಹುದು ಅಹಂ
ಪ್ರತಿಭೆ ಎನ್ನ ಮೈ ತುಂಬಿಹುದು ಕಾಣಾ
ರೋಮ ರೋಮಗಳಲ್ಲರಳಿಹುದು ಸಾಹಿತ್ಯ
ಎನಗುಂಟು ಲೆಕ್ಕಣಿಕೆ
ಅದರೋಳ್ ತುಂಬಿಹುದು ಸಾಹಿತ್ಯದಾ ಕಡಲು

ಕಾಂಚಾಣ ಅಡಗಿಹುದು ನಿನ್ನಲಿ
ನಿನಗರಿವಿಲ್ಲದೇ ನಿನ್ನಾ ಸುಡುತಿಹುದು ಕಾಣಾ
ಒಮ್ಮೆ ನಿನ್ನಲಿ ಮತ್ತೊಮ್ಮಿನ್ನೊಬ್ಬರಲಿ
ತುರುಗದಂತಾಡದಿರು ದುರಹಂಕಾರದಲಿ
ಸಾಂಸ್ಕೃತಿಕ ವೇದಿಕೆಯನೆಂದೂ ಧಿಕ್ಕರಿಸದಿರು
ಸಾಹಿತಿಗಳ ತಿರಸ್ಕಾರ ಸಲ್ಲದು
ಲೋಕದ ಮನ್ನಣೆ ಸಿಗದು ಕಾಣ

ನಾವ್ ಸರಸತಿ ಸುಪುತ್ರರು
ಎಮಗೆ ಈ ರಾಜ್ಯವೇನ್? ಬೇರಾವರಾಜ್ಯವೇನ್
ಸಿಗುವುದೆಲ್ಲೆಲ್ಲಾ ಮಾನ ಸಂಮಾನ

ಎಲೈ ಅಜ್ಞಾನಿ ಕೇಳು
ಸಾಹಿತ್ಯವೆಂಬುದು ಸಂತೆಯಲ್ಲಿ ಮಾರಿ
ಲಾಭ ತರುವ ಸರಬಳೆಯಲ್ಲ ಮೂಢ

ಎಲೈ ಮರುಳೆ ಅದು ಅಶಾಶ್ವತ
ಸಾಹಿತ್ಯ ಲೋಕದೋಳ್ ಮಿಂದವನೆ ಅಮರ
ಇದು ಹೆಡ್ಡನಿಗೆಂದೂ ತಿಳಿಯದು ಕಾಣಾ

ನಿಜವನ್ನರಿತು ಸಾಹಿತ್ಯ
ಸವಿಯನು ಭಾವವನು ಅರಿ
ನೀನಾಗುವಿ ಛವಿ ನೀನಾಗುವಿ ಛವಿ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...