Home / ಕವನ / ಕವಿತೆ / ಬಳೆ ಸರವಲ್ಲ

ಬಳೆ ಸರವಲ್ಲ

ಕೇಳಿರೈ ಸಭಾ ಬೆನ್ನೆಲವುಗಳೇ
ತಮಗೆದೆಗಾರ್‍ಕಿದ್ದೊಡೆ
ಎನ್ನ ಕಾವ್ಯವಂ ಮನದಲಿ ಪಠಿಸಿರೈ

ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ
ನಿನ್ನ ಕಾವ್ಯದಲ್ಲೇನಿಹುದು?
ಮೈ ಮುಚ್ಚುವುದೋ? ಉದರ ತುಂಬುವುದೋ
ಮೈ ಮೇಲಿನ ಆಭರಣವಾಗುವುದೋ
ನೀ ನುಡಿಯದಿರು ಅಹಂನಲಿ

ಹೌದು! ಎನಗಿಹುದು ಅಹಂ
ಪ್ರತಿಭೆ ಎನ್ನ ಮೈ ತುಂಬಿಹುದು ಕಾಣಾ
ರೋಮ ರೋಮಗಳಲ್ಲರಳಿಹುದು ಸಾಹಿತ್ಯ
ಎನಗುಂಟು ಲೆಕ್ಕಣಿಕೆ
ಅದರೋಳ್ ತುಂಬಿಹುದು ಸಾಹಿತ್ಯದಾ ಕಡಲು

ಕಾಂಚಾಣ ಅಡಗಿಹುದು ನಿನ್ನಲಿ
ನಿನಗರಿವಿಲ್ಲದೇ ನಿನ್ನಾ ಸುಡುತಿಹುದು ಕಾಣಾ
ಒಮ್ಮೆ ನಿನ್ನಲಿ ಮತ್ತೊಮ್ಮಿನ್ನೊಬ್ಬರಲಿ
ತುರುಗದಂತಾಡದಿರು ದುರಹಂಕಾರದಲಿ
ಸಾಂಸ್ಕೃತಿಕ ವೇದಿಕೆಯನೆಂದೂ ಧಿಕ್ಕರಿಸದಿರು
ಸಾಹಿತಿಗಳ ತಿರಸ್ಕಾರ ಸಲ್ಲದು
ಲೋಕದ ಮನ್ನಣೆ ಸಿಗದು ಕಾಣ

ನಾವ್ ಸರಸತಿ ಸುಪುತ್ರರು
ಎಮಗೆ ಈ ರಾಜ್ಯವೇನ್? ಬೇರಾವರಾಜ್ಯವೇನ್
ಸಿಗುವುದೆಲ್ಲೆಲ್ಲಾ ಮಾನ ಸಂಮಾನ

ಎಲೈ ಅಜ್ಞಾನಿ ಕೇಳು
ಸಾಹಿತ್ಯವೆಂಬುದು ಸಂತೆಯಲ್ಲಿ ಮಾರಿ
ಲಾಭ ತರುವ ಸರಬಳೆಯಲ್ಲ ಮೂಢ

ಎಲೈ ಮರುಳೆ ಅದು ಅಶಾಶ್ವತ
ಸಾಹಿತ್ಯ ಲೋಕದೋಳ್ ಮಿಂದವನೆ ಅಮರ
ಇದು ಹೆಡ್ಡನಿಗೆಂದೂ ತಿಳಿಯದು ಕಾಣಾ

ನಿಜವನ್ನರಿತು ಸಾಹಿತ್ಯ
ಸವಿಯನು ಭಾವವನು ಅರಿ
ನೀನಾಗುವಿ ಛವಿ ನೀನಾಗುವಿ ಛವಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...