Home / ಕವನ / ಕವಿತೆ / ಬಳೆ ಸರವಲ್ಲ

ಬಳೆ ಸರವಲ್ಲ

ಕೇಳಿರೈ ಸಭಾ ಬೆನ್ನೆಲವುಗಳೇ
ತಮಗೆದೆಗಾರ್‍ಕಿದ್ದೊಡೆ
ಎನ್ನ ಕಾವ್ಯವಂ ಮನದಲಿ ಪಠಿಸಿರೈ

ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ
ನಿನ್ನ ಕಾವ್ಯದಲ್ಲೇನಿಹುದು?
ಮೈ ಮುಚ್ಚುವುದೋ? ಉದರ ತುಂಬುವುದೋ
ಮೈ ಮೇಲಿನ ಆಭರಣವಾಗುವುದೋ
ನೀ ನುಡಿಯದಿರು ಅಹಂನಲಿ

ಹೌದು! ಎನಗಿಹುದು ಅಹಂ
ಪ್ರತಿಭೆ ಎನ್ನ ಮೈ ತುಂಬಿಹುದು ಕಾಣಾ
ರೋಮ ರೋಮಗಳಲ್ಲರಳಿಹುದು ಸಾಹಿತ್ಯ
ಎನಗುಂಟು ಲೆಕ್ಕಣಿಕೆ
ಅದರೋಳ್ ತುಂಬಿಹುದು ಸಾಹಿತ್ಯದಾ ಕಡಲು

ಕಾಂಚಾಣ ಅಡಗಿಹುದು ನಿನ್ನಲಿ
ನಿನಗರಿವಿಲ್ಲದೇ ನಿನ್ನಾ ಸುಡುತಿಹುದು ಕಾಣಾ
ಒಮ್ಮೆ ನಿನ್ನಲಿ ಮತ್ತೊಮ್ಮಿನ್ನೊಬ್ಬರಲಿ
ತುರುಗದಂತಾಡದಿರು ದುರಹಂಕಾರದಲಿ
ಸಾಂಸ್ಕೃತಿಕ ವೇದಿಕೆಯನೆಂದೂ ಧಿಕ್ಕರಿಸದಿರು
ಸಾಹಿತಿಗಳ ತಿರಸ್ಕಾರ ಸಲ್ಲದು
ಲೋಕದ ಮನ್ನಣೆ ಸಿಗದು ಕಾಣ

ನಾವ್ ಸರಸತಿ ಸುಪುತ್ರರು
ಎಮಗೆ ಈ ರಾಜ್ಯವೇನ್? ಬೇರಾವರಾಜ್ಯವೇನ್
ಸಿಗುವುದೆಲ್ಲೆಲ್ಲಾ ಮಾನ ಸಂಮಾನ

ಎಲೈ ಅಜ್ಞಾನಿ ಕೇಳು
ಸಾಹಿತ್ಯವೆಂಬುದು ಸಂತೆಯಲ್ಲಿ ಮಾರಿ
ಲಾಭ ತರುವ ಸರಬಳೆಯಲ್ಲ ಮೂಢ

ಎಲೈ ಮರುಳೆ ಅದು ಅಶಾಶ್ವತ
ಸಾಹಿತ್ಯ ಲೋಕದೋಳ್ ಮಿಂದವನೆ ಅಮರ
ಇದು ಹೆಡ್ಡನಿಗೆಂದೂ ತಿಳಿಯದು ಕಾಣಾ

ನಿಜವನ್ನರಿತು ಸಾಹಿತ್ಯ
ಸವಿಯನು ಭಾವವನು ಅರಿ
ನೀನಾಗುವಿ ಛವಿ ನೀನಾಗುವಿ ಛವಿ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...