Home / ಕವನ / ಕವಿತೆ / ಬಳೆ ಸರವಲ್ಲ

ಬಳೆ ಸರವಲ್ಲ

ಕೇಳಿರೈ ಸಭಾ ಬೆನ್ನೆಲವುಗಳೇ
ತಮಗೆದೆಗಾರ್‍ಕಿದ್ದೊಡೆ
ಎನ್ನ ಕಾವ್ಯವಂ ಮನದಲಿ ಪಠಿಸಿರೈ

ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ
ನಿನ್ನ ಕಾವ್ಯದಲ್ಲೇನಿಹುದು?
ಮೈ ಮುಚ್ಚುವುದೋ? ಉದರ ತುಂಬುವುದೋ
ಮೈ ಮೇಲಿನ ಆಭರಣವಾಗುವುದೋ
ನೀ ನುಡಿಯದಿರು ಅಹಂನಲಿ

ಹೌದು! ಎನಗಿಹುದು ಅಹಂ
ಪ್ರತಿಭೆ ಎನ್ನ ಮೈ ತುಂಬಿಹುದು ಕಾಣಾ
ರೋಮ ರೋಮಗಳಲ್ಲರಳಿಹುದು ಸಾಹಿತ್ಯ
ಎನಗುಂಟು ಲೆಕ್ಕಣಿಕೆ
ಅದರೋಳ್ ತುಂಬಿಹುದು ಸಾಹಿತ್ಯದಾ ಕಡಲು

ಕಾಂಚಾಣ ಅಡಗಿಹುದು ನಿನ್ನಲಿ
ನಿನಗರಿವಿಲ್ಲದೇ ನಿನ್ನಾ ಸುಡುತಿಹುದು ಕಾಣಾ
ಒಮ್ಮೆ ನಿನ್ನಲಿ ಮತ್ತೊಮ್ಮಿನ್ನೊಬ್ಬರಲಿ
ತುರುಗದಂತಾಡದಿರು ದುರಹಂಕಾರದಲಿ
ಸಾಂಸ್ಕೃತಿಕ ವೇದಿಕೆಯನೆಂದೂ ಧಿಕ್ಕರಿಸದಿರು
ಸಾಹಿತಿಗಳ ತಿರಸ್ಕಾರ ಸಲ್ಲದು
ಲೋಕದ ಮನ್ನಣೆ ಸಿಗದು ಕಾಣ

ನಾವ್ ಸರಸತಿ ಸುಪುತ್ರರು
ಎಮಗೆ ಈ ರಾಜ್ಯವೇನ್? ಬೇರಾವರಾಜ್ಯವೇನ್
ಸಿಗುವುದೆಲ್ಲೆಲ್ಲಾ ಮಾನ ಸಂಮಾನ

ಎಲೈ ಅಜ್ಞಾನಿ ಕೇಳು
ಸಾಹಿತ್ಯವೆಂಬುದು ಸಂತೆಯಲ್ಲಿ ಮಾರಿ
ಲಾಭ ತರುವ ಸರಬಳೆಯಲ್ಲ ಮೂಢ

ಎಲೈ ಮರುಳೆ ಅದು ಅಶಾಶ್ವತ
ಸಾಹಿತ್ಯ ಲೋಕದೋಳ್ ಮಿಂದವನೆ ಅಮರ
ಇದು ಹೆಡ್ಡನಿಗೆಂದೂ ತಿಳಿಯದು ಕಾಣಾ

ನಿಜವನ್ನರಿತು ಸಾಹಿತ್ಯ
ಸವಿಯನು ಭಾವವನು ಅರಿ
ನೀನಾಗುವಿ ಛವಿ ನೀನಾಗುವಿ ಛವಿ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ