ಕೇಳಲಿಲ್ಲ….

ಕೃಷ್ಣ, ಗೊಮ್ಮಟರ
ಬಗ್ಗೆ ನಮಗಿಲ್ಲ ಬೇಸರ
ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ!
ಇನ್ನೋರ್‍ವ ತ್ಯಾಗದ ಪ್ರತೀಕ
ಇವರೀರ್‍ವರು ಜಗತ್ಪ್ರಸಿದ್ಧ
ಕಲ್ಲಾಗಿದ್ದರೂ ಜೀವಂತ

ಛೇ, ಮರೆತಿದ್ದೆ
ಅವನೇನು ಕಡಿಮೆಯೇ
ಕೋಟಿ ಕೋಟಿ ನುಂಗುವ
ಆ ತಿಮ್ಮಪ್ಪನ ಬಗ್ಗೆಯೂ
ನಮಗಿಲ್ಲ ಬೇಸರ

ಆದರೆ!
ಕೃಷ್ಣನಿಗೇಕೆ ವಜ್ರ ಕಿರೀಟ? ಪೀತಾಂಬರ?
ದಿಗಂಬರನಿಗೇಕೆ ಕ್ಷೀರಾಭಿಷೇಕ, ಮಹಾಮಜ್ಜನ
ತಿಮ್ಮಪ್ಪನಿಗೇಕೆ ವಜ್ರ ಪಾದುಕೆ, ವಜ್ರಕಿರೀಟ?
ಹೇಳಿ!

ಅವರು ಕೇಳುವರೇ?
ಹಾಗೇ ಮಾಡಿ ಹೀಗೆ ಮಾಡಿ ಎಂದು,

ಧೂಳಿನಲ್ಲಿ ಹುಟ್ಟಿ ಬಂದವರ
ಹಸಿವ ನೀಗಿಸುವರೇ ಅವರು
ಹೇಳಿ?
ಸುನಾಮಿ, ಲಾಥೂರಿನಿಂದಾದ
ಘೋರ ದುರಂತವ ತಪ್ಪಿಸುವರೇ?
ಹೇಳಿ?
*****
ಏಪ್ರಿಲ್ ೯ ೨೦೦೬ರ ಸಾಗರ ಮಣ್ಣಿನವಾಸನೆ ಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೨
Next post ಒಂಟಿ ತೆಪ್ಪ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys