ಶರಾವತಿ

ಬಳುಕುತ ಕುಣಿಯುತ ವಯ್ಯಾರದಲಿ
ಗುಡ್ಡಬೆಟ್ಟ ಕೊರಕಲಲಿ ಬರುತಿಹಳು

ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ
ಹಸಿರ ಪೈರನುಟ್ಟಿಹಳು ಸಂಭ್ರಮದಲಿ

ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ
ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ

ಸಾಸಿರ-ಸಾಸಿರ ಕನಸುಗಳ ಕಥನವು
ಭಾವನೆಗಳ ಮನೆ-ಮಠ ಮಂದಿರ ತ್ಯಾಗವಾಗಿಹವು

ಲಿಂಗನಮಕ್ಕಿ ಅಣೆಕಟ್ಟುವಿನಂದು
ನೀ ಚೆಲ್ಲಿದೆ ಬೆಳಕ ಈ ಜಗಕ್ಕೆಂದು

ಅಂಬುತೀರ್ಥದೊಳು ಜನ್ಮತಾಳಿದೆ
ಸಹ್ಯಾದ್ರಿ ನಾಡೊಳು ತಂಪನ್ನೆರದೆ

ಜೋಗದ ಸಿರಿಯೊಂದಿಗೆ
ಶ್ರೀಗಂಧದ ಮೆರುಗು ತಂದೆ ಈ ನಾಡಿಗೆ

ನಮಿಪವು ಅಡಿಕೆ ತೆಂಗುಗಳು ನಿನ್ನಂಘ್ರಿಗೆ
ಹಕ್ಕಿ-ಪಕ್ಕಿ ಕಾಕ-ಪಿಕ ಬಯಸುತಿಹವು ನಿನ್ನೇಳಿಗೆ

ನಿನ್ನೊಲವಿನ ಸಿಂಗರದ ನಲಿವ ನೋಟ
ಈ ನಾಡಿನ ಜಗಕೆ ಹರುಷದ ನೋಟ

ನೀನಾದೆ ಕನ್ನಡಕೆ ಬತ್ತದ ಗಂಗೆ
ಭಾಗ್ಯದ ನಿಧಿ ತಂದೆ ಈ ನಾಡಿಗೆ

ಕರ್ನಾಟಕಕೆ ನೀ ಮುಕುಟವಾದೆ
ಕನ್ನಡ ತಾಯ್ಗೊರಳ ಸರದಲ್ಲಿ ಪದಕವಾದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಳಿದ ದಾರಿ
Next post ಬಸವನ ನಾಡಿನಲಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…