ಶರಾವತಿ

ಬಳುಕುತ ಕುಣಿಯುತ ವಯ್ಯಾರದಲಿ
ಗುಡ್ಡಬೆಟ್ಟ ಕೊರಕಲಲಿ ಬರುತಿಹಳು

ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ
ಹಸಿರ ಪೈರನುಟ್ಟಿಹಳು ಸಂಭ್ರಮದಲಿ

ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ
ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ

ಸಾಸಿರ-ಸಾಸಿರ ಕನಸುಗಳ ಕಥನವು
ಭಾವನೆಗಳ ಮನೆ-ಮಠ ಮಂದಿರ ತ್ಯಾಗವಾಗಿಹವು

ಲಿಂಗನಮಕ್ಕಿ ಅಣೆಕಟ್ಟುವಿನಂದು
ನೀ ಚೆಲ್ಲಿದೆ ಬೆಳಕ ಈ ಜಗಕ್ಕೆಂದು

ಅಂಬುತೀರ್ಥದೊಳು ಜನ್ಮತಾಳಿದೆ
ಸಹ್ಯಾದ್ರಿ ನಾಡೊಳು ತಂಪನ್ನೆರದೆ

ಜೋಗದ ಸಿರಿಯೊಂದಿಗೆ
ಶ್ರೀಗಂಧದ ಮೆರುಗು ತಂದೆ ಈ ನಾಡಿಗೆ

ನಮಿಪವು ಅಡಿಕೆ ತೆಂಗುಗಳು ನಿನ್ನಂಘ್ರಿಗೆ
ಹಕ್ಕಿ-ಪಕ್ಕಿ ಕಾಕ-ಪಿಕ ಬಯಸುತಿಹವು ನಿನ್ನೇಳಿಗೆ

ನಿನ್ನೊಲವಿನ ಸಿಂಗರದ ನಲಿವ ನೋಟ
ಈ ನಾಡಿನ ಜಗಕೆ ಹರುಷದ ನೋಟ

ನೀನಾದೆ ಕನ್ನಡಕೆ ಬತ್ತದ ಗಂಗೆ
ಭಾಗ್ಯದ ನಿಧಿ ತಂದೆ ಈ ನಾಡಿಗೆ

ಕರ್ನಾಟಕಕೆ ನೀ ಮುಕುಟವಾದೆ
ಕನ್ನಡ ತಾಯ್ಗೊರಳ ಸರದಲ್ಲಿ ಪದಕವಾದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಳಿದ ದಾರಿ
Next post ಬಸವನ ನಾಡಿನಲಿ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys