ಗಗನ ಗ್ರಂಥ

ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು
ಗಗನಚುಂಬಿ ಕೊಡಚಾದ್ರಿಯಲಿ
ಮನತಣಿಯೇ ಕೈಬೀಸಿ ಕರೆತಿಹವು

ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು
ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ
ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು

ನೇಸರನುದಯದಿ ಪಳ-ಪಳನೆ
ಹೊಳೆಯುತಿದೆ ಎಲೆ ಹಸಿರು ಬೆಟ್ಟ ಮೈ

ಬಾಗಿದ ಬಾನಿನಂಚಿನಲಿ ಚಲುವಿನ ಸಂಜೆಗೆಂಪು
ಚಿಮ್ಮಿ ಸಂತಸದ ಸ್ವಾಗತವ ನೀಡುತಿರಲು
ಮುಗಿಲು ಮಲ್ಲಿಗಿ ಅರಳಿ ಮುದವು ಸಿಗುವುದು ರಾತ್ರಿಯಲಿ

ಬೆಟ್ಟ ತುದಿಯೇರಲು ಮುಳ್ಳು-ಕಲ್ಲು
ಬಲು ದೂರ-ದಾರಿ ಡೊಂಕ-ಡೊಂಕು

ದಣಿದ ಮನಕೆ ಬಯಕೆಯ ನಿರಾಶೆಯಲಿ
ಬದುಕಿನ ಯಾತ್ರೆ ಬಿಡದ ಛಲ
ನಿರಾಶರಾಗದೇ ಧೃತಿಗೆಡದೀಜಿದಾಗ
ಶ್ರಮದ ಪ್ರತಿಫಲ ಮುಪ್ಪಿನಲಿ ಸಾವು
ಅದುವೇ ಬದುಕಿನ ಸಲೆ

ಪ್ರಕೃತಿಯೊಡಲ ಕನ್ನಡಿಯಲಿ
ಹುಟ್ಟು ಸಾವು ಮರು ಹುಟ್ಟು ಗಗನಗ್ರಂಥ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಂಪತಿ
Next post ಟೋಪಿ ಮಾರುತಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…