ಗಗನ ಗ್ರಂಥ

ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು
ಗಗನಚುಂಬಿ ಕೊಡಚಾದ್ರಿಯಲಿ
ಮನತಣಿಯೇ ಕೈಬೀಸಿ ಕರೆತಿಹವು

ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು
ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ
ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು

ನೇಸರನುದಯದಿ ಪಳ-ಪಳನೆ
ಹೊಳೆಯುತಿದೆ ಎಲೆ ಹಸಿರು ಬೆಟ್ಟ ಮೈ

ಬಾಗಿದ ಬಾನಿನಂಚಿನಲಿ ಚಲುವಿನ ಸಂಜೆಗೆಂಪು
ಚಿಮ್ಮಿ ಸಂತಸದ ಸ್ವಾಗತವ ನೀಡುತಿರಲು
ಮುಗಿಲು ಮಲ್ಲಿಗಿ ಅರಳಿ ಮುದವು ಸಿಗುವುದು ರಾತ್ರಿಯಲಿ

ಬೆಟ್ಟ ತುದಿಯೇರಲು ಮುಳ್ಳು-ಕಲ್ಲು
ಬಲು ದೂರ-ದಾರಿ ಡೊಂಕ-ಡೊಂಕು

ದಣಿದ ಮನಕೆ ಬಯಕೆಯ ನಿರಾಶೆಯಲಿ
ಬದುಕಿನ ಯಾತ್ರೆ ಬಿಡದ ಛಲ
ನಿರಾಶರಾಗದೇ ಧೃತಿಗೆಡದೀಜಿದಾಗ
ಶ್ರಮದ ಪ್ರತಿಫಲ ಮುಪ್ಪಿನಲಿ ಸಾವು
ಅದುವೇ ಬದುಕಿನ ಸಲೆ

ಪ್ರಕೃತಿಯೊಡಲ ಕನ್ನಡಿಯಲಿ
ಹುಟ್ಟು ಸಾವು ಮರು ಹುಟ್ಟು ಗಗನಗ್ರಂಥ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಂಪತಿ
Next post ಟೋಪಿ ಮಾರುತಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…