ವೇಣಿ ಪುಷ್ಪ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಎದೆಯ ಗೆಳತಿ

ಹೋಗಿ ಮುಟ್ಟಿಸುವೆಯೇನೆ ಈ ವೇಣಿ
ಪುಷ್ಪವನ್ನು ಗೆಳತಿ ?

ಯಾರು ಕೊಟ್ಟರಿದ ಯಾವ ಮಧುವನದ
ಪುಷ್ಪವೆಂದು ಕೇಳೆ

ಹೇಳದಿರು ಮತ್ತೆ ಬೇರೆ ಏನನ್ನು
ಕೇಳರೆನ್ನ ಆಣೆ

ವೃಕ್ಷದಡಿಯಲ್ಲಿ ಧೂಳ ಹಾಸಿನಲಿ
ಕುಳಿತುಕೊಳುವರೇನೆ ?

ಹೋಗು ತಡವೇಕೆ? ಹಾಕು ಈ ಬಕುಲ
ಕುಸುಮಪೀಠವನ್ನೆ

ಕರುಣ ಪೂರ್ಣ ಹೊಳೆಹೊಳೆವ ತನ್ನ ಚಲು
ನೇತ್ರಯುಗ್ಮದಿಂದ

ಹೊತ್ತಿಸಿಹರವರು ನನ್ನ ಮನದಲ್ಲಿ
ಜ್ಯೋತಿ ಪ್ರೀತಿಯಿಂದ

ಏನೋ ಎದೆವಾತ ಹೇಳಬೇಕೆಂಬ
ಆಸೆ ತುಡಿವುದವರ

ಆದರೇನನೂ ಯಾರಿಗೂನು ಸಹ
ಹೇಳದೇನೆ ಇಹರ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಹೃದಯಸಖಿಯೇ

ಹೋಗಿ ಮುಟ್ಟಿಸುವೆಯೇನೆ ಕಾಣಿಕೆಯ
ಹೇಳು ಚಂದ್ರಮುಖಿಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದೆ
Next post ಸುಲೇಮಾನ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…