ವೇಣಿ ಪುಷ್ಪ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಎದೆಯ ಗೆಳತಿ

ಹೋಗಿ ಮುಟ್ಟಿಸುವೆಯೇನೆ ಈ ವೇಣಿ
ಪುಷ್ಪವನ್ನು ಗೆಳತಿ ?

ಯಾರು ಕೊಟ್ಟರಿದ ಯಾವ ಮಧುವನದ
ಪುಷ್ಪವೆಂದು ಕೇಳೆ

ಹೇಳದಿರು ಮತ್ತೆ ಬೇರೆ ಏನನ್ನು
ಕೇಳರೆನ್ನ ಆಣೆ

ವೃಕ್ಷದಡಿಯಲ್ಲಿ ಧೂಳ ಹಾಸಿನಲಿ
ಕುಳಿತುಕೊಳುವರೇನೆ ?

ಹೋಗು ತಡವೇಕೆ? ಹಾಕು ಈ ಬಕುಲ
ಕುಸುಮಪೀಠವನ್ನೆ

ಕರುಣ ಪೂರ್ಣ ಹೊಳೆಹೊಳೆವ ತನ್ನ ಚಲು
ನೇತ್ರಯುಗ್ಮದಿಂದ

ಹೊತ್ತಿಸಿಹರವರು ನನ್ನ ಮನದಲ್ಲಿ
ಜ್ಯೋತಿ ಪ್ರೀತಿಯಿಂದ

ಏನೋ ಎದೆವಾತ ಹೇಳಬೇಕೆಂಬ
ಆಸೆ ತುಡಿವುದವರ

ಆದರೇನನೂ ಯಾರಿಗೂನು ಸಹ
ಹೇಳದೇನೆ ಇಹರ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಹೃದಯಸಖಿಯೇ

ಹೋಗಿ ಮುಟ್ಟಿಸುವೆಯೇನೆ ಕಾಣಿಕೆಯ
ಹೇಳು ಚಂದ್ರಮುಖಿಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದೆ
Next post ಸುಲೇಮಾನ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys