ವೇಣಿ ಪುಷ್ಪ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಎದೆಯ ಗೆಳತಿ

ಹೋಗಿ ಮುಟ್ಟಿಸುವೆಯೇನೆ ಈ ವೇಣಿ
ಪುಷ್ಪವನ್ನು ಗೆಳತಿ ?

ಯಾರು ಕೊಟ್ಟರಿದ ಯಾವ ಮಧುವನದ
ಪುಷ್ಪವೆಂದು ಕೇಳೆ

ಹೇಳದಿರು ಮತ್ತೆ ಬೇರೆ ಏನನ್ನು
ಕೇಳರೆನ್ನ ಆಣೆ

ವೃಕ್ಷದಡಿಯಲ್ಲಿ ಧೂಳ ಹಾಸಿನಲಿ
ಕುಳಿತುಕೊಳುವರೇನೆ ?

ಹೋಗು ತಡವೇಕೆ? ಹಾಕು ಈ ಬಕುಲ
ಕುಸುಮಪೀಠವನ್ನೆ

ಕರುಣ ಪೂರ್ಣ ಹೊಳೆಹೊಳೆವ ತನ್ನ ಚಲು
ನೇತ್ರಯುಗ್ಮದಿಂದ

ಹೊತ್ತಿಸಿಹರವರು ನನ್ನ ಮನದಲ್ಲಿ
ಜ್ಯೋತಿ ಪ್ರೀತಿಯಿಂದ

ಏನೋ ಎದೆವಾತ ಹೇಳಬೇಕೆಂಬ
ಆಸೆ ತುಡಿವುದವರ

ಆದರೇನನೂ ಯಾರಿಗೂನು ಸಹ
ಹೇಳದೇನೆ ಇಹರ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಹೃದಯಸಖಿಯೇ

ಹೋಗಿ ಮುಟ್ಟಿಸುವೆಯೇನೆ ಕಾಣಿಕೆಯ
ಹೇಳು ಚಂದ್ರಮುಖಿಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದೆ
Next post ಸುಲೇಮಾನ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…