ಸಿಡಿಲಿನ ಶಕ್ತಿ!!

ಸಿಡಿಲಿನ ಶಕ್ತಿ!!

‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹರಣೆಗಳಿವೆ, ಮಳೆಗಾಲ ಬಂತೆಂದರೆ ಸಿಡಿಲು-ಮಿಂಚುಗಳ ಅರ್ಭಟ ಹೆಚ್ಚಾಗುತ್ತದೆ.

ವಿದ್ಯುತ್ ಕಣಗಳ ಸಮೂಹವು ವೇಗದಿಂದ ಅಪ್ಪಳಿಸುವುದಕ್ಕೆ ನಾವು ‘ಸಿಡಿಲು’ ಎನ್ನುತ್ತೇವೆ. ಈ ಸಿಡಿಲಿನಿಂದ ಉತ್ಪತ್ತಿಯಾಗುವ ಶಕ್ತಿ ಸು.೧೦೦ ಕೋಟಿ ವೊಲ್ಟೇಜ್ ನಷ್ಟಿರುತ್ತದೆ ಎಂದರೆ ನಂಬಲಿಕ್ಕಾಗುವುದೇ ಇಲ್ಲ. ಸಿಡಿಲಿನಿಂದ ಉದ್ಭವಿಸುವ ಮಿಂಚುಗಳು ೩೦೦ ಅಡಿಗಳಿಂದ ನಾಲ್ಕು ಮೈಲಿ ದೂರದವರೆಗೂ ಪ್ರವಹಿಸುತ್ತವೆ. ಇವುಗಳ ಉಷ್ಣತೆ ೩೦,೦೦೦ ಡಿಗ್ರಿ ಸೆಂಟಿಗ್ರೇಡ್ ವರೆಗೂ ಇರುತ್ತದೆ. ಇದು ಸೂರ್ಯಕಿರಣಗಳ ಉಷ್ಣತೆಗಿಂತಲೂ ೫ ಪಟ್ಟು ಅಧಿಕವಾಗಿರುತ್ತದೆ. ಭೂಮಿಯ ಮೇಲೆ ನಿರಂತರವಾಗಿ ಎಲ್ಲೋ ಒಂದು ಕಡೆ ಸಿಡಿಲು ಬೀಳುತ್ತಲೇ ಇರುತ್ತದೆ. ಸೆಕೆಂಡಿಗೆ ೫೦ ರವರೆಗೂ ಬೀಳುವುದು ಸಾಮಾನ್ಯ. ಇವುಗಳಿಂದ ಭವನಗಳು ಕುಸಿಯದಿರಲು ಮಿಂಚು ಸಂವಾಹಕಗಳನ್ನು ಬಳಸುತ್ತಾರೆ. ಇವುಗಳ ಮೂಲಕ ಸಿಡಿಲು ಪ್ರವಹಿಸಿ ಅಪಾಯವಿಲ್ಲದೇ ಭೂಮಿಯೊಳಗೆ ಸಿಡಿಲು ನುಸುಳುತ್ತದೆ. ರೇಡಿಯೋಗಳು, ಟ್ಟಾನ್ಸಿಸ್ಟರ್‌ಗಳು, ಆಂಟೇನಾಗಳು ಈ ಸಿಡಿಲುಗಳನ್ನು ಆಕರ್ಷಿಸುತ್ತವೆ. ಪ್ರಪಂಚದಲ್ಲಿಯೇ ಹೆಚ್ಚಾಗಿ ದಕ್ಷಿಣ ಆಫ್ರಿಕಾದಲ್ಲಿಯೇ ಸಿಡಿಲಿನ ಅಬ್ಬರ ಹೆಚ್ಚಾಗಿರುತ್ತದೆಂದು ಸಿಡಿಲಿನ ಬಗೆಗೆ ಸಂಶೋಧನೆ ನಡಿಸಿದ ವಿಜ್ಞಾನಿಗಳು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಗ
Next post ಬಾಲ್ತಸ್ಹಾರ್ ಬಾಲ್ತಸ್ಹಾರ್

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…