ಸಿಡಿಲಿನ ಶಕ್ತಿ!!

ಸಿಡಿಲಿನ ಶಕ್ತಿ!!

‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹರಣೆಗಳಿವೆ, ಮಳೆಗಾಲ ಬಂತೆಂದರೆ ಸಿಡಿಲು-ಮಿಂಚುಗಳ ಅರ್ಭಟ ಹೆಚ್ಚಾಗುತ್ತದೆ.

ವಿದ್ಯುತ್ ಕಣಗಳ ಸಮೂಹವು ವೇಗದಿಂದ ಅಪ್ಪಳಿಸುವುದಕ್ಕೆ ನಾವು ‘ಸಿಡಿಲು’ ಎನ್ನುತ್ತೇವೆ. ಈ ಸಿಡಿಲಿನಿಂದ ಉತ್ಪತ್ತಿಯಾಗುವ ಶಕ್ತಿ ಸು.೧೦೦ ಕೋಟಿ ವೊಲ್ಟೇಜ್ ನಷ್ಟಿರುತ್ತದೆ ಎಂದರೆ ನಂಬಲಿಕ್ಕಾಗುವುದೇ ಇಲ್ಲ. ಸಿಡಿಲಿನಿಂದ ಉದ್ಭವಿಸುವ ಮಿಂಚುಗಳು ೩೦೦ ಅಡಿಗಳಿಂದ ನಾಲ್ಕು ಮೈಲಿ ದೂರದವರೆಗೂ ಪ್ರವಹಿಸುತ್ತವೆ. ಇವುಗಳ ಉಷ್ಣತೆ ೩೦,೦೦೦ ಡಿಗ್ರಿ ಸೆಂಟಿಗ್ರೇಡ್ ವರೆಗೂ ಇರುತ್ತದೆ. ಇದು ಸೂರ್ಯಕಿರಣಗಳ ಉಷ್ಣತೆಗಿಂತಲೂ ೫ ಪಟ್ಟು ಅಧಿಕವಾಗಿರುತ್ತದೆ. ಭೂಮಿಯ ಮೇಲೆ ನಿರಂತರವಾಗಿ ಎಲ್ಲೋ ಒಂದು ಕಡೆ ಸಿಡಿಲು ಬೀಳುತ್ತಲೇ ಇರುತ್ತದೆ. ಸೆಕೆಂಡಿಗೆ ೫೦ ರವರೆಗೂ ಬೀಳುವುದು ಸಾಮಾನ್ಯ. ಇವುಗಳಿಂದ ಭವನಗಳು ಕುಸಿಯದಿರಲು ಮಿಂಚು ಸಂವಾಹಕಗಳನ್ನು ಬಳಸುತ್ತಾರೆ. ಇವುಗಳ ಮೂಲಕ ಸಿಡಿಲು ಪ್ರವಹಿಸಿ ಅಪಾಯವಿಲ್ಲದೇ ಭೂಮಿಯೊಳಗೆ ಸಿಡಿಲು ನುಸುಳುತ್ತದೆ. ರೇಡಿಯೋಗಳು, ಟ್ಟಾನ್ಸಿಸ್ಟರ್‌ಗಳು, ಆಂಟೇನಾಗಳು ಈ ಸಿಡಿಲುಗಳನ್ನು ಆಕರ್ಷಿಸುತ್ತವೆ. ಪ್ರಪಂಚದಲ್ಲಿಯೇ ಹೆಚ್ಚಾಗಿ ದಕ್ಷಿಣ ಆಫ್ರಿಕಾದಲ್ಲಿಯೇ ಸಿಡಿಲಿನ ಅಬ್ಬರ ಹೆಚ್ಚಾಗಿರುತ್ತದೆಂದು ಸಿಡಿಲಿನ ಬಗೆಗೆ ಸಂಶೋಧನೆ ನಡಿಸಿದ ವಿಜ್ಞಾನಿಗಳು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಗ
Next post ಬಾಲ್ತಸ್ಹಾರ್ ಬಾಲ್ತಸ್ಹಾರ್

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys